ETV Bharat / bharat

''ಧ್ವಂಸಗೊಂಡ ಕಚೇರಿ ಧೈರ್ಯವಂತ ಮಹಿಳೆಯ ಸಂಕೇತ, ಅದನ್ನು ನವೀಕರಿಸಲು ನನ್ನ ಬಳಿ ಹಣವಿಲ್ಲ''

author img

By

Published : Sep 11, 2020, 11:06 AM IST

ಮುಂಬೈನಲ್ಲಿರುವ ಕಂಗನಾ ಅವರ ಕಚೇರಿಯನ್ನು ಬೃಹನ್ಮುಂಬೈ ಮಹಾನಗರ ಪಾಲಿಕೆ ಭಾಗಶಃ ಧ್ವಂಸಗೊಳಿಸಿದ್ದು, ಅದನ್ನು ನವೀಕರಿಸಲು ನನ್ನ ಬಳಿ ಹಣವಿಲ್ಲ ಎಂದು ಕಂಗನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

kangana ranaut
ಕಂಗನಾ ರಣಾವತ್

ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಭಾಗಶಃ ಧ್ವಂಸಗೊಳಿಸಿರುವ ಮನೆಯನ್ನು ನವೀಕರಣಗೊಳಿಸಲು ನನ್ನ ಬಳಿ ಹಣವಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರನೌತ್​​ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೆ ಏರುವ ಮಹಿಳೆಯ ಧೈರ್ಯದ ಸಂಕೇತವಾಗಿ ಈ ಧ್ವಂಸಗೊಂಡಿರುವ ಕಚೇರಿಯನ್ನು ಇಟ್ಟುಕೊಳ್ಳುತ್ತೇನೆ ಎಂದು ಕಂಗನಾ ಮಹಾರಾಷ್ಟ್ರದ ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • I had my office opening on 15th Jan, shortly after corona hit us, like most of us I haven’t worked ever since, don’t have money to renovate it, I will work from those ruins keep that office ravaged as a symbol of a woman’s will that dared to rise in this world #KanganaVsUddhav https://t.co/98VnFANVsu

    — Kangana Ranaut (@KanganaTeam) September 10, 2020 " class="align-text-top noRightClick twitterSection" data=" ">

ಜನವರಿ 15ರಂದು ನಾನು ಕಚೇರಿಯನ್ನು ತೆರೆದಿದ್ದೆ. ಕೊರೊನಾ ಕಾರಣದಿಂದ ಸ್ವಲ್ಪ ದಿನ ಮಾತ್ರವೇ ಇಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ತುಂಬಾ ಮಂದಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ ಕೆಲವು ದಿನಗಳ ಹಿಂದೆ ಕಂಗನಾ ಅವರ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್​ ಕಂಗನಾರ ಮನವಿಗೆ ಸ್ಪಂದಿಸಿ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಿತ್ತು. ಇದಾದ ನಂತರ ವಿಚಾರಣೆ ಮುಂದುವರೆದಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ.

ಮುಂಬೈ: ಬೃಹನ್ಮುಂಬೈ ಮಹಾನಗರ ಪಾಲಿಕೆ ಭಾಗಶಃ ಧ್ವಂಸಗೊಳಿಸಿರುವ ಮನೆಯನ್ನು ನವೀಕರಣಗೊಳಿಸಲು ನನ್ನ ಬಳಿ ಹಣವಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರನೌತ್​​ ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿ ಉನ್ನತ ಸ್ಥಾನಕ್ಕೆ ಏರುವ ಮಹಿಳೆಯ ಧೈರ್ಯದ ಸಂಕೇತವಾಗಿ ಈ ಧ್ವಂಸಗೊಂಡಿರುವ ಕಚೇರಿಯನ್ನು ಇಟ್ಟುಕೊಳ್ಳುತ್ತೇನೆ ಎಂದು ಕಂಗನಾ ಮಹಾರಾಷ್ಟ್ರದ ಶಿವಸೇನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • I had my office opening on 15th Jan, shortly after corona hit us, like most of us I haven’t worked ever since, don’t have money to renovate it, I will work from those ruins keep that office ravaged as a symbol of a woman’s will that dared to rise in this world #KanganaVsUddhav https://t.co/98VnFANVsu

    — Kangana Ranaut (@KanganaTeam) September 10, 2020 " class="align-text-top noRightClick twitterSection" data=" ">

ಜನವರಿ 15ರಂದು ನಾನು ಕಚೇರಿಯನ್ನು ತೆರೆದಿದ್ದೆ. ಕೊರೊನಾ ಕಾರಣದಿಂದ ಸ್ವಲ್ಪ ದಿನ ಮಾತ್ರವೇ ಇಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. ತುಂಬಾ ಮಂದಿ ಇಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಎಂದು ಉಲ್ಲೇಖಿಸಿದ್ದಾರೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ ಕೆಲವು ದಿನಗಳ ಹಿಂದೆ ಕಂಗನಾ ಅವರ ಕಚೇರಿಯನ್ನು ತೆರವುಗೊಳಿಸಲು ಮುಂದಾಗಿತ್ತು. ಈ ವೇಳೆ ಬಾಂಬೆ ಹೈಕೋರ್ಟ್​ ಕಂಗನಾರ ಮನವಿಗೆ ಸ್ಪಂದಿಸಿ ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಿತ್ತು. ಇದಾದ ನಂತರ ವಿಚಾರಣೆ ಮುಂದುವರೆದಿದ್ದು, ಸೆಪ್ಟೆಂಬರ್ 22ಕ್ಕೆ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಮುಂದೂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.