ETV Bharat / bharat

ಕಂಗನಾ ವಿರುದ್ಧ ಮತ್ತೆ ಸಮನ್ಸ್ ಜಾರಿ ಮಾಡಿದ ಮುಂಬೈ ಪೊಲೀಸರು

author img

By

Published : Nov 3, 2020, 2:14 PM IST

ಬಾಲಿವುಡ್​​​ನಲ್ಲಿ ಹಿಂದೂ - ಮುಸ್ಲಿಂ ಉದ್ವಿಗ್ನತೆ ಮತ್ತು ಮುಸ್ಲಿಂ ಮತ್ತು ಹಿಂದೂ ನಟರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ನಟಿ ಕಂಗನಾ ರಣಾವತ್​​​ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದು ಸಾಮಾಜಿಕ ದ್ವೇಷ ಹೆಚ್ಚಿಸಿ, ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿ ಸಾಹಿಲ್ ಅಶ್ರಫ್ ಎಂಬುವವರು ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

kangana-ranaut
ನಟಿ ಕಂಗನಾ ರಣಾವತ್

ಮುಂಬೈ: ನಟಿ ಕಂಗನಾ ರಣಾವತ್​​​​ ಮತ್ತೆ ಎಡವಟ್ಟು ಮಾಡಿಕೊಂಡು ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಕಂಗನಾ ಹಾಗೂ ಸಹೋದರಿ ರಂಗೋಲಿಗೆ ನವೆಂಬರ್ 10 ಹಾಗೂ 11ರಂದು ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಬಾಲಿವುಡ್​​​ನಲ್ಲಿ ಹಿಂದೂ - ಮುಸ್ಲಿಂ ಉದ್ವಿಗ್ನತೆ ಮತ್ತು ಮುಸ್ಲಿಂ ಮತ್ತು ಹಿಂದೂ ನಟರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ನಟಿ ಕಂಗನಾ ರಣಾವತ್​​​ ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದು ಸಾಮಾಜಿಕ ದ್ವೇಷವನ್ನು ಹೆಚ್ಚಿಸಿ, ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿ ಸಾಹಿಲ್ ಅಶ್ರಫ್ ಎಂಬುವವರು ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಪೋಸ್ಟ್ ಸಂಬಂಧ ಬಾಂದ್ರಾ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಈ ಪೋಸ್ಟ್​ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರ್ದೇಶಿಸಲಾಗಿತ್ತು. ಆದರೆ ಅವರ ನಿವಾಸದಲ್ಲಿ ವಿವಾಹ ಸಮಾರಂಭವಿದ್ದ ಕಾರಣ ನವೆಂಬರ್ 15ರ ವರೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಣಾವತ್ ತಿಳಿಸಿದ್ದರು.

ಇದೀಗ ನವೆಂಬರ್ 10ರಂದು ರಣಾವತ್​ಗೆ ವಿಚಾರಣೆಗೆ ಹಾಜರಾಗುವಂತೆ ಹಾಗೂ 11ರಂದು ಸಹೋದರಿ ರಂಗೋಲಿ ಚಂದೇಲ್​​ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಮುಂಬೈ: ನಟಿ ಕಂಗನಾ ರಣಾವತ್​​​​ ಮತ್ತೆ ಎಡವಟ್ಟು ಮಾಡಿಕೊಂಡು ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಕಂಗನಾ ಹಾಗೂ ಸಹೋದರಿ ರಂಗೋಲಿಗೆ ನವೆಂಬರ್ 10 ಹಾಗೂ 11ರಂದು ವಿಚಾರಣೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಬಾಲಿವುಡ್​​​ನಲ್ಲಿ ಹಿಂದೂ - ಮುಸ್ಲಿಂ ಉದ್ವಿಗ್ನತೆ ಮತ್ತು ಮುಸ್ಲಿಂ ಮತ್ತು ಹಿಂದೂ ನಟರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ನಟಿ ಕಂಗನಾ ರಣಾವತ್​​​ ತಮ್ಮ ಟ್ವಿಟರ್ ಖಾತೆಯಲ್ಲಿ ಆರೋಪಿಸಿದ್ದರು. ಇದು ಸಾಮಾಜಿಕ ದ್ವೇಷವನ್ನು ಹೆಚ್ಚಿಸಿ, ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿ ಸಾಹಿಲ್ ಅಶ್ರಫ್ ಎಂಬುವವರು ಬಾಂದ್ರಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಈ ಪೋಸ್ಟ್ ಸಂಬಂಧ ಬಾಂದ್ರಾ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಈ ಪೋಸ್ಟ್​ಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ನಿರ್ದೇಶಿಸಲಾಗಿತ್ತು. ಆದರೆ ಅವರ ನಿವಾಸದಲ್ಲಿ ವಿವಾಹ ಸಮಾರಂಭವಿದ್ದ ಕಾರಣ ನವೆಂಬರ್ 15ರ ವರೆಗೆ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ರಣಾವತ್ ತಿಳಿಸಿದ್ದರು.

ಇದೀಗ ನವೆಂಬರ್ 10ರಂದು ರಣಾವತ್​ಗೆ ವಿಚಾರಣೆಗೆ ಹಾಜರಾಗುವಂತೆ ಹಾಗೂ 11ರಂದು ಸಹೋದರಿ ರಂಗೋಲಿ ಚಂದೇಲ್​​ಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.