ಚೆನ್ನೈ (ತಮಿಳುನಾಡು): ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಕೊರೊನಾ ನಂತರದ ಪ್ರಪಂಚದ ಕುರಿತು ಯೋಚಿಸಿ, ಅದಕ್ಕಾಗಿ ಹಲವಾರು ಕ್ರಮ ಕೈಗೊಳ್ಳುವುದರ ಜೊತೆಗೆ, ಸಾಂಕ್ರಾಮಿಕ ಸಿದ್ಧತಾ ಬಜೆಟ್ ತಯಾರಿಸುವಂತೆ ಸೂಚಿಸಿದ್ದಾರೆ.
ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದೊಂದಿಗೆ ಹೊಂದಿಕೊಂಡು ಕೋವಿಡ್-19 ವಿರುದ್ಧ ಹೋರಾಡುತ್ತಿರುವುದು ಪ್ರಶಂಸಾದಾಯಕ ಎಂದು ಕಮಲ್ ಹಾಸನ್ ಟ್ವೀಟ್ ಮೂಲಕ ಹೇಳಿದ್ದಾರೆ.
-
Re imagining India for post-Covid World pic.twitter.com/3dF7Z21a41
— Kamal Haasan (@ikamalhaasan) April 20, 2020 " class="align-text-top noRightClick twitterSection" data="
">Re imagining India for post-Covid World pic.twitter.com/3dF7Z21a41
— Kamal Haasan (@ikamalhaasan) April 20, 2020Re imagining India for post-Covid World pic.twitter.com/3dF7Z21a41
— Kamal Haasan (@ikamalhaasan) April 20, 2020
ಭಾರತ ನಡೆಸಿದ ಕೊನೆಯ ಪೂರ್ಣ ಪ್ರಮಾಣದ ಯುದ್ಧವು ಸುಮಾರು ಅರ್ಧ ಶತಮಾನದ ಹಿಂದೆ ನಡೆದಿತ್ತು. ಆದರೆ ಕಳಪೆ ಆರೋಗ್ಯ ರಕ್ಷಣೆಯಿಂದಾಗಿ ಆರೋಗ್ಯ ಕ್ಷೇತ್ರದಲ್ಲಿ ಪ್ರತಿದಿನ ಯುದ್ಧ ನಡೆಯುತ್ತಲೇ ಇದೆ ಎಂದರು.
ಆರೋಗ್ಯಕ್ಕೆ ಹೋಲಿಸಿದರೆ, ಭಾರತದಲ್ಲಿ ಡಿಫೆನ್ಸ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಭಾರತದಲ್ಲಿ ಸಾಂಕ್ರಾಮಿಕ ಸನ್ನದ್ಧತೆಯ ಬಜೆಟ್ ಜಾರಿಗೆ ತರುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದರು.