ETV Bharat / bharat

ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಪಿ ಪಾಕ್​... ಸೇನೆಯ ಜೆಸಿಒ ಹುತಾತ್ಮ - Army JCO killed

ಜಮ್ಮು ಕಾಶ್ಮೀರದ ರಜೌರಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ಉದ್ಧಟತನ ಮೆರೆದಿದೆ. ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಸೇನೆಯ ಜೆಸಿಒ ಹುತಾತ್ಮರಾಗಿದ್ದಾರೆ.

JCO killed
ಸೇನೆಯ ಜೆಸಿಒ ಹುತಾತ್ಮ
author img

By

Published : Sep 2, 2020, 11:04 AM IST

Updated : Sep 2, 2020, 11:36 AM IST

ಶ್ರೀನಗರ (ಜಮ್ಮು ಕಾಶ್ಮೀರ): ಪಾಪಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ರಜೌರಿ ಜಿಲ್ಲೆಯ ಕೇರಿ ವಲಯದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್​ ಗುಂಡಿನ ದಾಳಿ ನಡೆಸಿದ್ದು, ಸೇನೆಯ ಕಿರಿಯ ನಿಯೋಜಿತ ಅಧಿಕಾರಿ​ (ಜೆಸಿಒ) ಹುತಾತ್ಮರಾಗಿದ್ದಾರೆ. ಇದು ಶೆಲ್​ ದಾಳಿಯಲ್ಲ, ಪಾಕಿಸ್ತಾನದ ಸ್ನಿಪರ್​​ಗಳು​ ನಡೆಸಿದ ದಾಳಿಯಂತಿದೆ ಎಂದು ಸೇನೆ ಹೇಳಿದೆ.

ನೌಶೇರಾ ವಲಯದ ಎಲ್​​ಒಸಿಯಲ್ಲಿ ಶಂಕಾಸ್ಪದ ಚಲನವಲನ ಭಾರತೀಯ ಸೇನೆಯ ಗಮನಕ್ಕೆ ಬಂದಿತ್ತು. ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಕಡೆಯಿಂದ ಫೈರಿಂಗ್​ ಆರಂಭವಾಯಿತು. ಇದು ಸ್ನಿಪರ್​ ದಾಳಿಯಂತಿದೆ ಎಂದು ದೇವೇಂದರ್​ ಆನಂದ್​ ಹೇಳಿದ್ದಾರೆ.

ಪಾಕಿಸ್ತಾನ ಫೈರಿಂಗ್​ ಮಾಡಿದ ತಕ್ಷಣ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿತು. ಆದರೆ ಫೈರಿಂಗ್​ ವೇಳೆ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದ್ದರಿಂದ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದರು. ಕಳೆದ ಎರಡು ದಿನಗಳ ಹಿಂದೆ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕ್​ ನಡೆಸಿದ ಶೆಲ್​ ದಾಳಿಯಲ್ಲಿ ಸೇನಾ ಜೆಸಿಒ ರಾಜ್ವಿಂದರ್​ ಸಿಂಗ್​ ಹುತಾತ್ಮರಾಗಿದ್ದರು.

ಮಧ್ಯರಾತ್ರಿ ಬಹಳ ಹೊತ್ತು ಗುಂಡಿನ ಚಕಮಕಿ ನಡೆದೇ ಇತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದ ಕುಪ್ವಾರಾ, ರಜೌರಿ ಮತ್ತು ಪೂಂಛ್​ ಜಿಲ್ಲೆಗಳಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸುತ್ತಲೇ ಇದೆ.

ಕಳೆದ ಮೂರು ತಿಂಗಳಲ್ಲಿ ರಜೌರಿ ಮತ್ತು ಪೂಂಛ್​ ವಲಯದಲ್ಲಿ ಪಾಪಿ ಪಾಕಿಸ್ತಾನದ ಶೆಲ್​ ದಾಳಿಯಲ್ಲಿ ಒಟ್ಟು 9 ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಪಾಕಿಸ್ತಾನ 3,000ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ಮೂರು ವರ್ಷಗಳಲ್ಲಿ 8,571ಕ್ಕೂ ಹೆಚ್ಚು ಸಲ ಪಾಕಿಸ್ತಾನ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.

ಶ್ರೀನಗರ (ಜಮ್ಮು ಕಾಶ್ಮೀರ): ಪಾಪಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ. ರಜೌರಿ ಜಿಲ್ಲೆಯ ಕೇರಿ ವಲಯದ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕ್​ ಗುಂಡಿನ ದಾಳಿ ನಡೆಸಿದ್ದು, ಸೇನೆಯ ಕಿರಿಯ ನಿಯೋಜಿತ ಅಧಿಕಾರಿ​ (ಜೆಸಿಒ) ಹುತಾತ್ಮರಾಗಿದ್ದಾರೆ. ಇದು ಶೆಲ್​ ದಾಳಿಯಲ್ಲ, ಪಾಕಿಸ್ತಾನದ ಸ್ನಿಪರ್​​ಗಳು​ ನಡೆಸಿದ ದಾಳಿಯಂತಿದೆ ಎಂದು ಸೇನೆ ಹೇಳಿದೆ.

ನೌಶೇರಾ ವಲಯದ ಎಲ್​​ಒಸಿಯಲ್ಲಿ ಶಂಕಾಸ್ಪದ ಚಲನವಲನ ಭಾರತೀಯ ಸೇನೆಯ ಗಮನಕ್ಕೆ ಬಂದಿತ್ತು. ಕೆಲವೇ ಕ್ಷಣಗಳಲ್ಲಿ ಪಾಕಿಸ್ತಾನ ಕಡೆಯಿಂದ ಫೈರಿಂಗ್​ ಆರಂಭವಾಯಿತು. ಇದು ಸ್ನಿಪರ್​ ದಾಳಿಯಂತಿದೆ ಎಂದು ದೇವೇಂದರ್​ ಆನಂದ್​ ಹೇಳಿದ್ದಾರೆ.

ಪಾಕಿಸ್ತಾನ ಫೈರಿಂಗ್​ ಮಾಡಿದ ತಕ್ಷಣ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿತು. ಆದರೆ ಫೈರಿಂಗ್​ ವೇಳೆ ಸೇನೆಯ ಕಿರಿಯ ನಿಯೋಜಿತ ಅಧಿಕಾರಿಯೊಬ್ಬರಿಗೆ ಗುಂಡು ತಗುಲಿದ್ದರಿಂದ ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದರು. ಕಳೆದ ಎರಡು ದಿನಗಳ ಹಿಂದೆ ರಜೌರಿ ಜಿಲ್ಲೆಯ ನೌಶೇರಾ ವಲಯದಲ್ಲಿ ಪಾಕ್​ ನಡೆಸಿದ ಶೆಲ್​ ದಾಳಿಯಲ್ಲಿ ಸೇನಾ ಜೆಸಿಒ ರಾಜ್ವಿಂದರ್​ ಸಿಂಗ್​ ಹುತಾತ್ಮರಾಗಿದ್ದರು.

ಮಧ್ಯರಾತ್ರಿ ಬಹಳ ಹೊತ್ತು ಗುಂಡಿನ ಚಕಮಕಿ ನಡೆದೇ ಇತ್ತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದ ಕುಪ್ವಾರಾ, ರಜೌರಿ ಮತ್ತು ಪೂಂಛ್​ ಜಿಲ್ಲೆಗಳಲ್ಲಿ ಪಾಕಿಸ್ತಾನ ಕದನವಿರಾಮ ಉಲ್ಲಂಘಿಸುತ್ತಲೇ ಇದೆ.

ಕಳೆದ ಮೂರು ತಿಂಗಳಲ್ಲಿ ರಜೌರಿ ಮತ್ತು ಪೂಂಛ್​ ವಲಯದಲ್ಲಿ ಪಾಪಿ ಪಾಕಿಸ್ತಾನದ ಶೆಲ್​ ದಾಳಿಯಲ್ಲಿ ಒಟ್ಟು 9 ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಈ ವರ್ಷ ಪಾಕಿಸ್ತಾನ 3,000ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಕಳೆದ ಮೂರು ವರ್ಷಗಳಲ್ಲಿ 8,571ಕ್ಕೂ ಹೆಚ್ಚು ಸಲ ಪಾಕಿಸ್ತಾನ ಕಡೆಯಿಂದ ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗಷ್ಟೇ ಮಾಹಿತಿ ನೀಡಿತ್ತು.

Last Updated : Sep 2, 2020, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.