ETV Bharat / bharat

ಹಂದ್ವಾರದಲ್ಲಿ ಮುಂದುವರಿದ ಗುಂಡಿನ ಕಾಳಗ... ಮೂವರು ಯೋಧರು ಹುತಾತ್ಮ, ಏಳು ಯೋಧರಿಗೆ ಗಾಯ

ಜಮ್ಮು-ಕಾಶ್ಮೀರದ ಹಂದ್ವಾರದಲ್ಲಿ ಗುಂಡಿನ ಕಾಳಗ ಮುಂದುವರಿದಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದಾರೆ.

author img

By

Published : May 4, 2020, 7:29 PM IST

Updated : May 4, 2020, 8:03 PM IST

CRPF Jawans
CRPF Jawans

ಶ್ರೀನಗರ: ಜಮ್ಮು- ಕಾಶ್ಮೀರದ ಹಂದ್ವಾರದಲ್ಲಿ ಮತ್ತೊಮ್ಮೆ ಗುಂಡಿನ ಕಾಳಗ ಮುಂದುವರಿದಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಮೇಜರ್​, ಕರ್ನಲ್​ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಸಿಆರ್​ಪಿಎಫ್​ ಪಡೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಹಂದ್ವಾರದಲ್ಲಿ ಮುಂದುವರಿದ ಗುಂಡಿನ ಕಾಳಗ

ಗುಂಡಿನ ದಾಳಿಯಲ್ಲಿ ಏಳು ಸಿಆರ್​ಪಿಎಫ್​ ಯೋಧರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ಪ್ರದೇಶದಲ್ಲಿ ಹೆಚ್ಚು ಉಗ್ರರು ಅಡಗಿ ಕುಳಿತ್ತಿದ್ದು, ಅಂತಹ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಈಟಿವಿ ಭಾರತ್​ಗೆ ಸಿಆರ್​ಪಿಎಫ್​ ವಕ್ತಾರ ಪಂಕಜ್​ ಸಿಂಗ್​ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಹಂದ್ವಾರದ ಖ್ವಾಜಿಯಾಬಾದ್ ಸಮೀಪದಲ್ಲಿ ಪಹರೆ ನಡೆಸುತ್ತಿದ್ದ ಸಿಆರ್​ಪಿಎಫ್​​ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆ ರವಾನೆ ಮಾಡಲಾಗಿದೆ. ಇಡೀ ಪ್ರದೇಶ ಸುತ್ತುವರಿಯಲಾಗಿದೆ.

ಶ್ರೀನಗರ: ಜಮ್ಮು- ಕಾಶ್ಮೀರದ ಹಂದ್ವಾರದಲ್ಲಿ ಮತ್ತೊಮ್ಮೆ ಗುಂಡಿನ ಕಾಳಗ ಮುಂದುವರಿದಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಮೂವರು ಯೋಧರು ಹುತಾತ್ಮರಾಗಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳ ಹಿಂದೆ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆಯ ಮೇಜರ್​, ಕರ್ನಲ್​ ಸೇರಿ ಐವರು ಯೋಧರು ಹುತಾತ್ಮರಾಗಿದ್ದರು. ಇದರ ಬೆನ್ನಲ್ಲೇ ಸಿಆರ್​ಪಿಎಫ್​ ಪಡೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ.

ಹಂದ್ವಾರದಲ್ಲಿ ಮುಂದುವರಿದ ಗುಂಡಿನ ಕಾಳಗ

ಗುಂಡಿನ ದಾಳಿಯಲ್ಲಿ ಏಳು ಸಿಆರ್​ಪಿಎಫ್​ ಯೋಧರು ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಈ ಪ್ರದೇಶದಲ್ಲಿ ಹೆಚ್ಚು ಉಗ್ರರು ಅಡಗಿ ಕುಳಿತ್ತಿದ್ದು, ಅಂತಹ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಈಟಿವಿ ಭಾರತ್​ಗೆ ಸಿಆರ್​ಪಿಎಫ್​ ವಕ್ತಾರ ಪಂಕಜ್​ ಸಿಂಗ್​ ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಹಂದ್ವಾರದ ಖ್ವಾಜಿಯಾಬಾದ್ ಸಮೀಪದಲ್ಲಿ ಪಹರೆ ನಡೆಸುತ್ತಿದ್ದ ಸಿಆರ್​ಪಿಎಫ್​​ ಮೇಲೆ ಉಗ್ರರು ದಾಳಿ ನಡೆಸಿದ್ದು, ಘಟನಾ ಸ್ಥಳಕ್ಕೆ ಹೆಚ್ಚುವರಿ ಸೇನಾ ಪಡೆ ರವಾನೆ ಮಾಡಲಾಗಿದೆ. ಇಡೀ ಪ್ರದೇಶ ಸುತ್ತುವರಿಯಲಾಗಿದೆ.

Last Updated : May 4, 2020, 8:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.