ETV Bharat / bharat

ವಿಶ್ವ ಭೂಮಿ ದಿನಾಚರಣೆಗೆ 50 ವರ್ಷ; ಹವಾಮಾನ ಸಂರಕ್ಷಣೆಗೆ ಆದ್ಯತೆ

ಭೂಮಿಯ ಸಂರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟ ಮಾಡುವುದು ವಿಶ್ವ ಭೂಮಿ ದಿನಾಚರಣೆಯ ಏಕೈಕ ಗುರಿಯಾಗಿದೆ. ಸಮುದ್ರದಲ್ಲಿ ತೈಲ ಸೋರಿಕೆ, ಹೊಗೆ, ನದಿಗಳ ಮಾಲಿನ್ಯ ಮುಂತಾದುವುಗಳನ್ನು ತಡೆಗಟ್ಟುವುದಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಲು ವಿಶ್ವ ಭೂಮಿ ದಿನಾಚರಣೆ ಆಚರಿಸಲಾಗುತ್ತದೆ.

author img

By

Published : Apr 21, 2020, 6:55 PM IST

International Mother Earth Day
International Mother Earth Day

ನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದರೆ, ಜೀವನ ನೀಡುವುದು ಈ ಭೂಮಿತಾಯಿ. ಭೂಮಿ ಹಾಗೂ ಭೂಮಿಯ ವಾತಾವರಣದಿಂದಲೇ ನಾವೆಲ್ಲ ಬದುಕಲು ಸಾಧ್ಯವಾಗಿದ್ದು. ಭೂಮಿ ತಾಯಿಯ ಋಣಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಪ್ರತಿವರ್ಷ ಏಪ್ರಿಲ್​ 22 ರಂದು ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಭೂಮಿಯ ಸಂರಕ್ಷಣೆಯಲ್ಲಿ ಸಮಸ್ತ ಮಾನವಕುಲದ ಜವಾಬ್ದಾರಿ ಮಹತ್ತರವಾಗಿದೆ. ಪರಿಸರ ಹಾಗೂ ಭೂಮಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಇಂದಿನ ಹಾಗೂ ಭವಿಷ್ಯದ ಪೀಳಿಗೆಗಾಗಿ ಆರ್ಥಿಕ, ಸಾಮಾಜಿಕ ಹಾಗೂ ನೈಸರ್ಗಿಕ ಸಮತೋಲನ ಸಾಧಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂಬ ಗೊತ್ತುವಳಿಯನ್ನು 1992ರ ರಿಯೋ ಸಮಾವೇಶದಲ್ಲಿ ಅಂಗೀಕರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿವರ್ಷ ಏಪ್ರಿಲ್ 22 ರಂದು ವಿಶ್ವ ಭೂಮಿ ದಿನ ಆಚರಿಸುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿದೆ. ಈ ಬಾರಿ ವಿಶ್ವ ಭೂಮಿ ದಿನದ 50ನೇ ವರ್ಷಾಚರಣೆಯಾಗಿರುವುದು ಮತ್ತೂ ವಿಶೇಷವಾಗಿದೆ. ವಿಶ್ವ ಭೂಮಿ ದಿನಾಚರಣೆ ವಿಶ್ವದ ಅತಿ ದೊಡ್ಡ ಸಾಮಾಜಿಕ ಕಾರ್ಯಕ್ರಮಗಳಲ್ಲೊಂದಾಗಿದೆ. ಭೂಮಿ ದಿನಾಚರಣೆಯ ಕಾರಣದಿಂದಲೇ ಅಮೆರಿಕದಲ್ಲಿ ಶುದ್ಧ ಗಾಳಿ, ಶುದ್ಧ ನೀರು ಮತ್ತು ಅಪಾಯದಲ್ಲಿರುವ ಪ್ರಾಣಿಗಳ ಸಂತತಿಯನ್ನು ಉಳಿಸುವ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. 2016ರಲ್ಲಿ ಪ್ಯಾರಿಸ್​ ಹವಾಮಾನ ಒಪ್ಪಂದ ಜಾರಿಗೊಳಿಸಲು ಇದೇ ದಿನದಂದು ಅಂಕಿತ ಹಾಕಲಾಗಿತ್ತು.

ಈ ಬಾರಿಯ ಘೋಷಣೆ "ಹವಾಮಾನ ಸಂರಕ್ಷಣೆ"

ಹವಾಮಾನ ಬದಲಾವಣೆಯಿಂದ ಮಾನವ ಕುಲ ಸೇರಿದಂತೆ ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಅಪಾಯ ಎದುರಾಗಿದೆ. ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ತಡೆಯಲು ವಿಶ್ವದ ಎಲ್ಲ ರಾಷ್ಟ್ರಗಳು ತಕ್ಷಣ ಮುಂದಾಗದಿದ್ದಲ್ಲಿ, ಈಗಿನ ಪೀಳಿಗೆ ಸೇರಿದಂತೆ ಮುಂದಿನ ಪೀಳಿಗೆಗೆ ಖಂಡಿತವಾಗಿಯೂ ಅಪಾಯ ಎದುರಾಗಲಿದೆ.

ವಿಶ್ವ ಭೂಮಿ ದಿನಾಚರಣೆಯ ಇತಿಹಾಸ

ಭೂಮಿಯ ಸಂರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟ ಮಾಡುವುದು ವಿಶ್ವ ಭೂಮಿ ದಿನಾಚರಣೆಯ ಏಕೈಕ ಗುರಿಯಾಗಿದೆ. ಸಮುದ್ರದಲ್ಲಿ ತೈಲ ಸೋರಿಕೆ, ಹೊಗೆ, ನದಿಗಳ ಮಾಲಿನ್ಯ ಮುಂತಾದುವುಗಳನ್ನು ತಡೆಗಟ್ಟುವುದಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಲು ವಿಶ್ವ ಭೂಮಿ ದಿನಾಚರಣೆ ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಹಾಗೂ ಪರಿಸರ ಸಂರಕ್ಷಣೆಗಾಗಿ ಹೊಸ ಕಾನೂನುಗಳನ್ನು ರೂಪಿಸುವಂತೆ ಆಗ್ರಹಿಸಿ 1970 ರಂದು ಏಪ್ರಿಲ್ 20 ರಂದು ಸುಮಾರು 20 ಮಿಲಿಯನ್​ ನಾಗರಿಕರು ಅಮೆರಿಕದಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮದಿಂದ ಭೂಮಿ, ಪರಿಸರ ಸಂರಕ್ಷಣೆಗಾಗಿ ಹಲವಾರು ರಾಷ್ಟ್ರಗಳಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ನಂತರ 2009ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಭೂಮಿ ದಿನಾಚರಣೆಯ ಗೊತ್ತುವಳಿ ಅಂಗೀಕರಿಸಲಾಯಿತು.

2019-20 ರಲ್ಲಿ ವಿಶ್ವವನ್ನು ಬಾಧಿಸುತ್ತಿರುವ ಪರಿಸರ ಸಮಸ್ಯೆಗಳು

ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಮುಂದಾಗಬೇಕಿರುವುದು ಇಂದಿನ ಅಗತ್ಯವಾಗಿದೆ. ಈಗಾಗಲೇ ಸಾಕಷ್ಟು ಪರಿಸರ ಹಾಳಾಗಿ ಹೋಗಿದೆ. ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು, ಅತಿ ಹೆಚ್ಚು ಉಷ್ಣತಾಮಾನ ಹಾಗೂ ಕೀನ್ಯಾದಲ್ಲಿನ ಮಿಡತೆಗಳ ಹಾವಳಿ ಇವು ಈ ವರ್ಷದಲ್ಲಿ ಸಂಭವಿಸಿದ ಅತಿ ಗಂಭೀರ ಸ್ವರೂಪದ ಹವಾಮಾನ ಸಮಸ್ಯೆಗಳಾಗಿವೆ. ಇನ್ನು ಇತ್ತೀಚಿನ ಕೋವಿಡ್​-19 ಸಂಕಷ್ಟ ಮಾನವ ಮಾತ್ರವಲ್ಲದೆ ಸಮಸ್ತ ಜೀವಸಂಕುಲಕ್ಕೇ ಆತಂಕವೊಡ್ಡಿದೆ. ಅರಣ್ಯ ನಾಶ, ಭೂಮಿ ಬಳಕೆ ಬದಲಾವಣೆ, ವಿಪರೀತ ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆಗಳು, ವನ್ಯಜೀವಿಗಳ ಕಳ್ಳಸಾಗಣೆ ಮುಂತಾದುವು ಇಂದಿನ ಜ್ವಲಂತ ಹವಾಮಾನ ಸಮಸ್ಯೆಗಳಾಗಿ ಗುರುತಿಸಲ್ಪಟ್ಟಿವೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮಾನವರಲ್ಲಿ ಕಾಣಿಸಿಕೊಳ್ಳುವ ಹೊಸ ವೈರಸ್​ ಸೋಂಕುಗಳ ಪೈಕಿ ಶೇ.75 ರಷ್ಟು ಪ್ರಾಣಿಗಳಿಂದಲೇ ಹರಡುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿರುವುದು ಚಿಂತೆಯ ವಿಷಯವಾಗಿದೆ. ಮಾನವ, ಪ್ರಾಣಿ ಸಂಕುಲ ಹಾಗೂ ಪರಿಸರ ಮೂರೂ ವಿಷಯಗಳು ಯಾವ ರೀತಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಇದರಿಂದ ತಿಳಿಯಬಹುದು. ಪರಿಸರ ಸಂರಕ್ಷಣೆ ಹಾಗೂ ಆರ್ಥಿಕ ಚಟುವಟಿಕೆಗಳು ಸಮತೋಲನದಿಂದಿರುವಂತೆ ನೋಡಿಕೊಳ್ಳುವುದು ಇಂದಿನ ವಿಶ್ವ ಭೂಮಿ ದಿನದಂದು ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ಪ್ರಮುಖ ಪರಿಸರ ಸಮಸ್ಯೆಗಳು
- ಹವಾಮಾನ ಬದಲಾವಣೆ

- ಜೀವವೈವಿಧ್ಯತೆಯ ನಾಶ

- ಅರಣ್ಯ ನಾಶ

- ಭೂ ಬಳಕೆಯಲ್ಲಿ ಬದಲಾವಣೆ

- ಮಾಂಸ ಉತ್ಪಾದನೆ ಅಥವಾ ವನ್ಯಜೀವಿಗಳ ಕಳ್ಳಸಾಗಣೆ

ಹವಾಮಾನ ಬದಲಾವಣೆ: ಭೂಮಿಯ ಮೇಲ್ಮೈನ ಬದಲಾಗುವಿಕೆಯಿಂದ ಭೂಮಿ ಹಾಗೂ ಸಮುದ್ರಗಳ ಉಷ್ಣಾಂಶ ಹೆಚ್ಚುತ್ತಿದೆ. ಹಾಗೆಯೇ ಹಿಮದ ಕರಗುವಿಕೆಯ ಪ್ರಮಾಣ ಅತಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ವಿಶ್ವದ ಸರಾಸರಿ ಉಷ್ಣಾಂಶವನ್ನು 1.5 ರಿಂದ 2 ಸೆಲ್ಷಿಯಸ್​ನಷ್ಟು ಕುಗ್ಗಿಸುವ ಕುರಿತಾಗಿ 2015 ರ ಪ್ಯಾರಿಸ್​ ಒಪ್ಪಂದದ ಪ್ರಕಾರ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದನ್ನು ಸಾಧಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಜೀವವೈವಿಧ್ಯತೆಯ ನಾಶ: ಕೊರೊನಾ ವೈರಸ್​ ಹರಡುತ್ತಿರುವುದು ಸಾರ್ವಜನಿಕ ಆರೋಗ್ಯ ಹಾಗೂ ವಿಶ್ವದ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ. ಇದರೊಂದಿಗೆ ಭೂಮಿಯ ಜೀವವೈವಿಧ್ಯತೆಯೂ ಅಪಾಯಕ್ಕೆ ಸಿಲುಕಿದೆ. ಪರಿಸರ ಸಮತೋಲನ ಕಾಪಾಡಲು ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಅತಿ ಅಗತ್ಯವಾಗಿದೆ.

ಅರಣ್ಯ ನಾಶ: ಹೆಚ್ಚುತ್ತಿರುವ ಕೃಷಿಯಿಂದಾಗಿ ಅರಣ್ಯ ನಾಶ ಅವ್ಯಾಹತವಾಗಿ ನಡೆದಿದೆ. ಆದರೂ ಕಳೆದ 25 ವರ್ಷಗಳಲ್ಲಿ ಅರಣ್ಯ ನಾಶ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಷ್ಟಾದರೂ ವಿವಿಧ ಕಾರಣಗಳಿಂದಾಗಿ ಪ್ರತಿವರ್ಷ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ.

ಕಿಯೊಟೊ ಒಪ್ಪಂದ: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾಲಿನ್ಯಕಾರಕ ಹೊಗೆಯನ್ನು ಕಡಿಮೆ ಮಾಡುವುದು ಕಿಯೊಟೊ ಒಪ್ಪಂದವಾಗಿದೆ. ಪ್ರಸ್ತುತ 192 ರಾಷ್ಟ್ರಗಳು ಈ ಒಪ್ಪಂದದ ಪಟ್ಟಿಯಲ್ಲಿವೆ.

ಪ್ಯಾರಿಸ್ ಒಪ್ಪಂದ: ಹವಾಮಾನ ಬದಲಾವಣೆ ನಿಯಮಾವಳಿಗಳ ವಿಶ್ವಸಂಸ್ಥೆಯ 21ನೇ ಸಮಾವೇಶವು 2015 ರಲ್ಲಿ ಪ್ಯಾರಿಸ್​ನಲ್ಲಿ ನಡೆಯಿತು. ಹವಾಮಾನ ಬದಲಾವಣೆಯ ಸಮಸ್ಯೆಗಳ ವಿರುದ್ಧ ಹೋರಾಟ ಹಾಗೂ ಇಂಗಾಲದ ಅನಿಲ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡುವ ಕುರಿತಂತೆ ಸಮಾವೇಶದಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

2019ರ ಹವಾಮಾನ ಶೃಂಗಸಭೆ: 2019ರ ಸೆಪ್ಟೆಂಬರ್ 23 ರಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್​ ನೇತೃತ್ವದಲ್ಲಿ ಹವಾಮಾನ ಶೃಂಗಸಭೆ ನಡೆಯಿತು. ಬೃಹತ್ ಕೈಗಾರಿಕೆ, ನೈಸರ್ಗಿಕ ಪರಿಹಾರೋಪಾಯಗಳು, ಮಹಾನಗರಗಳು, ಇಂಧನ, ಹವಾಮಾನ ಹಣಕಾಸು ಮುಂತಾದ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿತ್ತು. ಹವಾಮಾನ ಸಂರಕ್ಷಣೆಗಾಗಿ ಪ್ರಸ್ತುತ ಕೈಗೊಂಡ ಕ್ರಮಗಳು ಹಾಗೂ ಭವಿಷ್ಯದಲ್ಲಿ ಕೈಗೊಳ್ಳಲಿರುವ ಕ್ರಮಗಳ ಕುರಿತು ವಿಶ್ವದ ಪ್ರಮುಖ ಶಕ್ತಿ ರಾಷ್ಟ್ರಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ವರದಿ ಒಪ್ಪಿಸಿದ್ದರು.

ನಮಗೆ ಜೀವ ನೀಡಿದ್ದು ಹೆತ್ತ ತಾಯಿಯಾದರೆ, ಜೀವನ ನೀಡುವುದು ಈ ಭೂಮಿತಾಯಿ. ಭೂಮಿ ಹಾಗೂ ಭೂಮಿಯ ವಾತಾವರಣದಿಂದಲೇ ನಾವೆಲ್ಲ ಬದುಕಲು ಸಾಧ್ಯವಾಗಿದ್ದು. ಭೂಮಿ ತಾಯಿಯ ಋಣಕ್ಕೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ ಪ್ರತಿವರ್ಷ ಏಪ್ರಿಲ್​ 22 ರಂದು ವಿಶ್ವ ಭೂಮಿ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಭೂಮಿಯ ಸಂರಕ್ಷಣೆಯಲ್ಲಿ ಸಮಸ್ತ ಮಾನವಕುಲದ ಜವಾಬ್ದಾರಿ ಮಹತ್ತರವಾಗಿದೆ. ಪರಿಸರ ಹಾಗೂ ಭೂಮಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಇಂದಿನ ಹಾಗೂ ಭವಿಷ್ಯದ ಪೀಳಿಗೆಗಾಗಿ ಆರ್ಥಿಕ, ಸಾಮಾಜಿಕ ಹಾಗೂ ನೈಸರ್ಗಿಕ ಸಮತೋಲನ ಸಾಧಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ ಎಂಬ ಗೊತ್ತುವಳಿಯನ್ನು 1992ರ ರಿಯೋ ಸಮಾವೇಶದಲ್ಲಿ ಅಂಗೀಕರಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಪ್ರತಿವರ್ಷ ಏಪ್ರಿಲ್ 22 ರಂದು ವಿಶ್ವ ಭೂಮಿ ದಿನ ಆಚರಿಸುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿದೆ. ಈ ಬಾರಿ ವಿಶ್ವ ಭೂಮಿ ದಿನದ 50ನೇ ವರ್ಷಾಚರಣೆಯಾಗಿರುವುದು ಮತ್ತೂ ವಿಶೇಷವಾಗಿದೆ. ವಿಶ್ವ ಭೂಮಿ ದಿನಾಚರಣೆ ವಿಶ್ವದ ಅತಿ ದೊಡ್ಡ ಸಾಮಾಜಿಕ ಕಾರ್ಯಕ್ರಮಗಳಲ್ಲೊಂದಾಗಿದೆ. ಭೂಮಿ ದಿನಾಚರಣೆಯ ಕಾರಣದಿಂದಲೇ ಅಮೆರಿಕದಲ್ಲಿ ಶುದ್ಧ ಗಾಳಿ, ಶುದ್ಧ ನೀರು ಮತ್ತು ಅಪಾಯದಲ್ಲಿರುವ ಪ್ರಾಣಿಗಳ ಸಂತತಿಯನ್ನು ಉಳಿಸುವ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. 2016ರಲ್ಲಿ ಪ್ಯಾರಿಸ್​ ಹವಾಮಾನ ಒಪ್ಪಂದ ಜಾರಿಗೊಳಿಸಲು ಇದೇ ದಿನದಂದು ಅಂಕಿತ ಹಾಕಲಾಗಿತ್ತು.

ಈ ಬಾರಿಯ ಘೋಷಣೆ "ಹವಾಮಾನ ಸಂರಕ್ಷಣೆ"

ಹವಾಮಾನ ಬದಲಾವಣೆಯಿಂದ ಮಾನವ ಕುಲ ಸೇರಿದಂತೆ ಭೂಮಿಯ ಮೇಲಿನ ಸಕಲ ಜೀವಿಗಳಿಗೂ ಅಪಾಯ ಎದುರಾಗಿದೆ. ಹವಾಮಾನ ಬದಲಾವಣೆಯ ವೈಪರೀತ್ಯಗಳನ್ನು ತಡೆಯಲು ವಿಶ್ವದ ಎಲ್ಲ ರಾಷ್ಟ್ರಗಳು ತಕ್ಷಣ ಮುಂದಾಗದಿದ್ದಲ್ಲಿ, ಈಗಿನ ಪೀಳಿಗೆ ಸೇರಿದಂತೆ ಮುಂದಿನ ಪೀಳಿಗೆಗೆ ಖಂಡಿತವಾಗಿಯೂ ಅಪಾಯ ಎದುರಾಗಲಿದೆ.

ವಿಶ್ವ ಭೂಮಿ ದಿನಾಚರಣೆಯ ಇತಿಹಾಸ

ಭೂಮಿಯ ಸಂರಕ್ಷಣೆಗಾಗಿ ಒಗ್ಗಟ್ಟಿನ ಹೋರಾಟ ಮಾಡುವುದು ವಿಶ್ವ ಭೂಮಿ ದಿನಾಚರಣೆಯ ಏಕೈಕ ಗುರಿಯಾಗಿದೆ. ಸಮುದ್ರದಲ್ಲಿ ತೈಲ ಸೋರಿಕೆ, ಹೊಗೆ, ನದಿಗಳ ಮಾಲಿನ್ಯ ಮುಂತಾದುವುಗಳನ್ನು ತಡೆಗಟ್ಟುವುದಕ್ಕಾಗಿ ಎಲ್ಲರನ್ನೂ ಒಗ್ಗೂಡಿಸಲು ವಿಶ್ವ ಭೂಮಿ ದಿನಾಚರಣೆ ಆಚರಿಸಲಾಗುತ್ತದೆ. ಪರಿಸರ ಸಂರಕ್ಷಣೆಯಲ್ಲಿನ ನಿರ್ಲಕ್ಷ್ಯ ಖಂಡಿಸಿ ಹಾಗೂ ಪರಿಸರ ಸಂರಕ್ಷಣೆಗಾಗಿ ಹೊಸ ಕಾನೂನುಗಳನ್ನು ರೂಪಿಸುವಂತೆ ಆಗ್ರಹಿಸಿ 1970 ರಂದು ಏಪ್ರಿಲ್ 20 ರಂದು ಸುಮಾರು 20 ಮಿಲಿಯನ್​ ನಾಗರಿಕರು ಅಮೆರಿಕದಲ್ಲಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದ್ದರು. ಇದರ ಪರಿಣಾಮದಿಂದ ಭೂಮಿ, ಪರಿಸರ ಸಂರಕ್ಷಣೆಗಾಗಿ ಹಲವಾರು ರಾಷ್ಟ್ರಗಳಲ್ಲಿ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಯಿತು. ನಂತರ 2009ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ವಿಶ್ವ ಭೂಮಿ ದಿನಾಚರಣೆಯ ಗೊತ್ತುವಳಿ ಅಂಗೀಕರಿಸಲಾಯಿತು.

2019-20 ರಲ್ಲಿ ವಿಶ್ವವನ್ನು ಬಾಧಿಸುತ್ತಿರುವ ಪರಿಸರ ಸಮಸ್ಯೆಗಳು

ಪರಿಸರ ಸಂರಕ್ಷಣೆಗಾಗಿ ಎಲ್ಲರೂ ಮುಂದಾಗಬೇಕಿರುವುದು ಇಂದಿನ ಅಗತ್ಯವಾಗಿದೆ. ಈಗಾಗಲೇ ಸಾಕಷ್ಟು ಪರಿಸರ ಹಾಳಾಗಿ ಹೋಗಿದೆ. ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು, ಅತಿ ಹೆಚ್ಚು ಉಷ್ಣತಾಮಾನ ಹಾಗೂ ಕೀನ್ಯಾದಲ್ಲಿನ ಮಿಡತೆಗಳ ಹಾವಳಿ ಇವು ಈ ವರ್ಷದಲ್ಲಿ ಸಂಭವಿಸಿದ ಅತಿ ಗಂಭೀರ ಸ್ವರೂಪದ ಹವಾಮಾನ ಸಮಸ್ಯೆಗಳಾಗಿವೆ. ಇನ್ನು ಇತ್ತೀಚಿನ ಕೋವಿಡ್​-19 ಸಂಕಷ್ಟ ಮಾನವ ಮಾತ್ರವಲ್ಲದೆ ಸಮಸ್ತ ಜೀವಸಂಕುಲಕ್ಕೇ ಆತಂಕವೊಡ್ಡಿದೆ. ಅರಣ್ಯ ನಾಶ, ಭೂಮಿ ಬಳಕೆ ಬದಲಾವಣೆ, ವಿಪರೀತ ಕೃಷಿ ಹಾಗೂ ಪಶುಸಂಗೋಪನೆ ಚಟುವಟಿಕೆಗಳು, ವನ್ಯಜೀವಿಗಳ ಕಳ್ಳಸಾಗಣೆ ಮುಂತಾದುವು ಇಂದಿನ ಜ್ವಲಂತ ಹವಾಮಾನ ಸಮಸ್ಯೆಗಳಾಗಿ ಗುರುತಿಸಲ್ಪಟ್ಟಿವೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮಾನವರಲ್ಲಿ ಕಾಣಿಸಿಕೊಳ್ಳುವ ಹೊಸ ವೈರಸ್​ ಸೋಂಕುಗಳ ಪೈಕಿ ಶೇ.75 ರಷ್ಟು ಪ್ರಾಣಿಗಳಿಂದಲೇ ಹರಡುತ್ತಿವೆ ಎಂದು ವಿಶ್ವಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿರುವುದು ಚಿಂತೆಯ ವಿಷಯವಾಗಿದೆ. ಮಾನವ, ಪ್ರಾಣಿ ಸಂಕುಲ ಹಾಗೂ ಪರಿಸರ ಮೂರೂ ವಿಷಯಗಳು ಯಾವ ರೀತಿಯಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದನ್ನು ಇದರಿಂದ ತಿಳಿಯಬಹುದು. ಪರಿಸರ ಸಂರಕ್ಷಣೆ ಹಾಗೂ ಆರ್ಥಿಕ ಚಟುವಟಿಕೆಗಳು ಸಮತೋಲನದಿಂದಿರುವಂತೆ ನೋಡಿಕೊಳ್ಳುವುದು ಇಂದಿನ ವಿಶ್ವ ಭೂಮಿ ದಿನದಂದು ನಮ್ಮೆಲ್ಲರ ಸಂಕಲ್ಪವಾಗಬೇಕಿದೆ.

ಪ್ರಮುಖ ಪರಿಸರ ಸಮಸ್ಯೆಗಳು
- ಹವಾಮಾನ ಬದಲಾವಣೆ

- ಜೀವವೈವಿಧ್ಯತೆಯ ನಾಶ

- ಅರಣ್ಯ ನಾಶ

- ಭೂ ಬಳಕೆಯಲ್ಲಿ ಬದಲಾವಣೆ

- ಮಾಂಸ ಉತ್ಪಾದನೆ ಅಥವಾ ವನ್ಯಜೀವಿಗಳ ಕಳ್ಳಸಾಗಣೆ

ಹವಾಮಾನ ಬದಲಾವಣೆ: ಭೂಮಿಯ ಮೇಲ್ಮೈನ ಬದಲಾಗುವಿಕೆಯಿಂದ ಭೂಮಿ ಹಾಗೂ ಸಮುದ್ರಗಳ ಉಷ್ಣಾಂಶ ಹೆಚ್ಚುತ್ತಿದೆ. ಹಾಗೆಯೇ ಹಿಮದ ಕರಗುವಿಕೆಯ ಪ್ರಮಾಣ ಅತಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ. ವಿಶ್ವದ ಸರಾಸರಿ ಉಷ್ಣಾಂಶವನ್ನು 1.5 ರಿಂದ 2 ಸೆಲ್ಷಿಯಸ್​ನಷ್ಟು ಕುಗ್ಗಿಸುವ ಕುರಿತಾಗಿ 2015 ರ ಪ್ಯಾರಿಸ್​ ಒಪ್ಪಂದದ ಪ್ರಕಾರ ಎಲ್ಲ ರಾಷ್ಟ್ರಗಳು ಒಪ್ಪಿಕೊಂಡಿದ್ದವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದನ್ನು ಸಾಧಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

ಜೀವವೈವಿಧ್ಯತೆಯ ನಾಶ: ಕೊರೊನಾ ವೈರಸ್​ ಹರಡುತ್ತಿರುವುದು ಸಾರ್ವಜನಿಕ ಆರೋಗ್ಯ ಹಾಗೂ ವಿಶ್ವದ ಆರ್ಥಿಕ ಪರಿಸ್ಥಿತಿಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರಲಿದೆ. ಇದರೊಂದಿಗೆ ಭೂಮಿಯ ಜೀವವೈವಿಧ್ಯತೆಯೂ ಅಪಾಯಕ್ಕೆ ಸಿಲುಕಿದೆ. ಪರಿಸರ ಸಮತೋಲನ ಕಾಪಾಡಲು ಜೀವವೈವಿಧ್ಯತೆಯನ್ನು ಸಂರಕ್ಷಿಸುವುದು ಅತಿ ಅಗತ್ಯವಾಗಿದೆ.

ಅರಣ್ಯ ನಾಶ: ಹೆಚ್ಚುತ್ತಿರುವ ಕೃಷಿಯಿಂದಾಗಿ ಅರಣ್ಯ ನಾಶ ಅವ್ಯಾಹತವಾಗಿ ನಡೆದಿದೆ. ಆದರೂ ಕಳೆದ 25 ವರ್ಷಗಳಲ್ಲಿ ಅರಣ್ಯ ನಾಶ ಕಡಿಮೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇಷ್ಟಾದರೂ ವಿವಿಧ ಕಾರಣಗಳಿಂದಾಗಿ ಪ್ರತಿವರ್ಷ ಅರಣ್ಯ ಪ್ರದೇಶ ಕಡಿಮೆಯಾಗುತ್ತಿದೆ.

ಕಿಯೊಟೊ ಒಪ್ಪಂದ: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಮಾಲಿನ್ಯಕಾರಕ ಹೊಗೆಯನ್ನು ಕಡಿಮೆ ಮಾಡುವುದು ಕಿಯೊಟೊ ಒಪ್ಪಂದವಾಗಿದೆ. ಪ್ರಸ್ತುತ 192 ರಾಷ್ಟ್ರಗಳು ಈ ಒಪ್ಪಂದದ ಪಟ್ಟಿಯಲ್ಲಿವೆ.

ಪ್ಯಾರಿಸ್ ಒಪ್ಪಂದ: ಹವಾಮಾನ ಬದಲಾವಣೆ ನಿಯಮಾವಳಿಗಳ ವಿಶ್ವಸಂಸ್ಥೆಯ 21ನೇ ಸಮಾವೇಶವು 2015 ರಲ್ಲಿ ಪ್ಯಾರಿಸ್​ನಲ್ಲಿ ನಡೆಯಿತು. ಹವಾಮಾನ ಬದಲಾವಣೆಯ ಸಮಸ್ಯೆಗಳ ವಿರುದ್ಧ ಹೋರಾಟ ಹಾಗೂ ಇಂಗಾಲದ ಅನಿಲ ಬಿಡುಗಡೆ ಪ್ರಮಾಣವನ್ನು ಕಡಿಮೆ ಮಾಡುವ ಕುರಿತಂತೆ ಸಮಾವೇಶದಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು.

2019ರ ಹವಾಮಾನ ಶೃಂಗಸಭೆ: 2019ರ ಸೆಪ್ಟೆಂಬರ್ 23 ರಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೊ ಗುಟೆರಸ್​ ನೇತೃತ್ವದಲ್ಲಿ ಹವಾಮಾನ ಶೃಂಗಸಭೆ ನಡೆಯಿತು. ಬೃಹತ್ ಕೈಗಾರಿಕೆ, ನೈಸರ್ಗಿಕ ಪರಿಹಾರೋಪಾಯಗಳು, ಮಹಾನಗರಗಳು, ಇಂಧನ, ಹವಾಮಾನ ಹಣಕಾಸು ಮುಂತಾದ ವಿಷಯಗಳ ಕುರಿತು ಈ ಸಭೆಯಲ್ಲಿ ಚರ್ಚೆ ನಡೆದಿತ್ತು. ಹವಾಮಾನ ಸಂರಕ್ಷಣೆಗಾಗಿ ಪ್ರಸ್ತುತ ಕೈಗೊಂಡ ಕ್ರಮಗಳು ಹಾಗೂ ಭವಿಷ್ಯದಲ್ಲಿ ಕೈಗೊಳ್ಳಲಿರುವ ಕ್ರಮಗಳ ಕುರಿತು ವಿಶ್ವದ ಪ್ರಮುಖ ಶಕ್ತಿ ರಾಷ್ಟ್ರಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ವರದಿ ಒಪ್ಪಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.