ETV Bharat / bharat

ಕಡಲ ಸಂಬಂಧಗಳನ್ನು ಹೆಚ್ಚಿಸಲು ಮ್ಯಾನ್ಮಾರ್‌ಗೆ ಭೇಟಿ ನೀಡಿದ ಭಾರತೀಯ ನೌಕಾಪಡೆಯ ಮುಖ್ಯಸ್ಥ - ಮ್ಯಾನ್ಮಾರ್‌ಗೆ ಭೇಟಿ ನೀಡಿದ ಭಾರತೀಯ ನೌಕಾಪಡೆಯ ಮುಖ್ಯಸ್ಥ

ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಮ್ಯಾನ್ಮಾರ್ ನೌಕಾಪಡೆಯ ಕಮಾಂಡರ್-ಇನ್-ಚೀಫ್ ಅಡ್ಮಿರಲ್ ಟಿನ್ ಆಂಗ್ ಸಾನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್, ಕಮಾಂಡರ್-ಇನ್-ಚೀಫ್ ಡಿಫೆನ್ಸ್ ಸರ್ವೀಸಸ್ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.

Navy chief
ಭಾರತೀಯ ನೌಕಾಪಡೆಯ ಮುಖ್ಯಸ್ಥ
author img

By

Published : Feb 18, 2020, 10:05 AM IST

ನವದೆಹಲಿ: ಭಾರತ ಮತ್ತು ಮ್ಯಾನ್ಮಾರ್ ನಡುವಿನ ಸಂಬಂಧವನ್ನು ಬಲಪಡಿಸಲು ಹಾಗೂ ದ್ವಿಪಕ್ಷೀಯ ಕಡಲ ಸಂಬಂಧವನ್ನು ಹೆಚ್ಚಿಸಲು ನಾಲ್ಕು ದಿನಗಳ ಕಾಲ ನಾಯ್ಪಿಟಾವ್ ಮತ್ತು ನೆರೆಯ ದೇಶದ ಇತರ ಭಾಗಗಳಿಗೆ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪ್ರಯಾಣ ಆರಂಭಿಸಿದ್ದಾರೆ.

ಇವರು ಫೆಬ್ರವರಿ 17 ರಿಂದ ಫೆಬ್ರವರಿ 20 ರವರೆಗೆ ಮ್ಯಾನ್ಮಾರ್‌ನಲ್ಲಿ ತಂಗಲಿದ್ದಾರೆ. ಈ ಭೇಟಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಕಡಲ ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ಹೆಚ್ಚಿಸಲು ಉದ್ದೇಶವನ್ನು ಹೊಂದಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಮ್ಯಾನ್ಮಾರ್ ನೌಕಾಪಡೆಯ ಕಮಾಂಡರ್-ಇನ್-ಚೀಫ್ ಅಡ್ಮಿರಲ್ ಟಿನ್ ಆಂಗ್ ಸಾನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್, ಕಮಾಂಡರ್-ಇನ್-ಚೀಫ್ ಡಿಫೆನ್ಸ್ ಸರ್ವೀಸಸ್ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.

"ಭಾರತೀಯ ನೌಕಾಪಡೆ ನಿಯಮಿತವಾಗಿ ಮ್ಯಾನ್ಮಾರ್ ನೌಕಾಪಡೆ ಸಿಬ್ಬಂದಿಯೊಂದಿಗೆ ಮಾತುಕತೆ, ಕಡಲ ಸಹಕಾರ ಕುರಿತು ಜಂಟಿ ಕಾರ್ಯ ಸಮೂಹ ಸಭೆ ಮತ್ತು ಬಂದರು ಭೇಟಿಗಳು, ಸಂಯೋಜಿತ ಪೆಟ್ರೋಲಿಯಂ, ತರಬೇತಿ ಮತ್ತು ಹೈಡ್ರೋಗ್ರಫಿ ಸೇರಿದಂತೆ ಇತರ ಕಾರ್ಯಾಚರಣೆಯ ಕುರಿತು ಸಂವಹನಗಳ ನಡೆಸುತ್ತದೆ" ಎಂದು ಅಧಿಕಾರಿ ಹೇಳಿದರು.

ಅಕ್ಟೋಬರ್‌ನಲ್ಲಿ ಉಭಯ ದೇಶಗಳು ವಿಶಾಖಪಟ್ಟಣಂನಲ್ಲಿ ಜಂಟಿ ನೌಕಾ ಸಮರಾಭ್ಯಾಸ ನಡೆಸಿದ್ದವು.

ಜಂಟಿ ನೌಕಾ ಸಮರಾಭ್ಯಾಸ ವಾಯು-ವಿರೋಧಿ ಮತ್ತು ಮೇಲ್ಮೈ ಗುಂಡಿನಭ್ಯಾಸಗಳು, ಅವಿಭಾಜ್ಯ ಹೆಲಿಕಾಪ್ಟರ್ ಬಳಸಿ ಹಾರುವ ವ್ಯಾಯಾಮ ಮತ್ತು ಸಮುದ್ರದಲ್ಲಿ ಸಮುದ್ರಯಾನ ವಿಕಸನಗಳು ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ಒಳಗೊಂಡಿದೆ.

ನವದೆಹಲಿ: ಭಾರತ ಮತ್ತು ಮ್ಯಾನ್ಮಾರ್ ನಡುವಿನ ಸಂಬಂಧವನ್ನು ಬಲಪಡಿಸಲು ಹಾಗೂ ದ್ವಿಪಕ್ಷೀಯ ಕಡಲ ಸಂಬಂಧವನ್ನು ಹೆಚ್ಚಿಸಲು ನಾಲ್ಕು ದಿನಗಳ ಕಾಲ ನಾಯ್ಪಿಟಾವ್ ಮತ್ತು ನೆರೆಯ ದೇಶದ ಇತರ ಭಾಗಗಳಿಗೆ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪ್ರಯಾಣ ಆರಂಭಿಸಿದ್ದಾರೆ.

ಇವರು ಫೆಬ್ರವರಿ 17 ರಿಂದ ಫೆಬ್ರವರಿ 20 ರವರೆಗೆ ಮ್ಯಾನ್ಮಾರ್‌ನಲ್ಲಿ ತಂಗಲಿದ್ದಾರೆ. ಈ ಭೇಟಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಕಡಲ ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ಹೆಚ್ಚಿಸಲು ಉದ್ದೇಶವನ್ನು ಹೊಂದಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಮ್ಯಾನ್ಮಾರ್ ನೌಕಾಪಡೆಯ ಕಮಾಂಡರ್-ಇನ್-ಚೀಫ್ ಅಡ್ಮಿರಲ್ ಟಿನ್ ಆಂಗ್ ಸಾನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್, ಕಮಾಂಡರ್-ಇನ್-ಚೀಫ್ ಡಿಫೆನ್ಸ್ ಸರ್ವೀಸಸ್ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.

"ಭಾರತೀಯ ನೌಕಾಪಡೆ ನಿಯಮಿತವಾಗಿ ಮ್ಯಾನ್ಮಾರ್ ನೌಕಾಪಡೆ ಸಿಬ್ಬಂದಿಯೊಂದಿಗೆ ಮಾತುಕತೆ, ಕಡಲ ಸಹಕಾರ ಕುರಿತು ಜಂಟಿ ಕಾರ್ಯ ಸಮೂಹ ಸಭೆ ಮತ್ತು ಬಂದರು ಭೇಟಿಗಳು, ಸಂಯೋಜಿತ ಪೆಟ್ರೋಲಿಯಂ, ತರಬೇತಿ ಮತ್ತು ಹೈಡ್ರೋಗ್ರಫಿ ಸೇರಿದಂತೆ ಇತರ ಕಾರ್ಯಾಚರಣೆಯ ಕುರಿತು ಸಂವಹನಗಳ ನಡೆಸುತ್ತದೆ" ಎಂದು ಅಧಿಕಾರಿ ಹೇಳಿದರು.

ಅಕ್ಟೋಬರ್‌ನಲ್ಲಿ ಉಭಯ ದೇಶಗಳು ವಿಶಾಖಪಟ್ಟಣಂನಲ್ಲಿ ಜಂಟಿ ನೌಕಾ ಸಮರಾಭ್ಯಾಸ ನಡೆಸಿದ್ದವು.

ಜಂಟಿ ನೌಕಾ ಸಮರಾಭ್ಯಾಸ ವಾಯು-ವಿರೋಧಿ ಮತ್ತು ಮೇಲ್ಮೈ ಗುಂಡಿನಭ್ಯಾಸಗಳು, ಅವಿಭಾಜ್ಯ ಹೆಲಿಕಾಪ್ಟರ್ ಬಳಸಿ ಹಾರುವ ವ್ಯಾಯಾಮ ಮತ್ತು ಸಮುದ್ರದಲ್ಲಿ ಸಮುದ್ರಯಾನ ವಿಕಸನಗಳು ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ಒಳಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.