ETV Bharat / bharat

ಭಾರತಕ್ಕೆ ಬಂದ್ವು ಅಮೆರಿಕಾ ನಿರ್ಮಿತ 4 ಚಿನೂಕ್​ ಹೆಲಿಕಾಪ್ಟರ್​

author img

By

Published : Feb 11, 2019, 2:57 PM IST

2015 ಸೆಪ್ಟೆಂಬರ್​ನಲ್ಲಿ ಭಾರತ ಸರ್ಕಾರ ಅಮೆರಿಕದೊಂದಿಗೆ 15 ಚಿನೂಕ್​ ಹೆಲಿಕಾಪ್ಟರ್​ ಹಾಗೂ ಅಪಾಚೆ ಹೆಲಿಕಾಪ್ಟರ್​ಗಳನ್ನ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 4 ಹೆಲಿಕಾಪ್ಟರ್​ಗಳು ಭಾರತಕ್ಕೆ ಕಾಲಿಟ್ಟಿವೆ.

ಹೆಲಿಕಾಪ್ಟರ್​

ಮುಂದ್ರಾ(ಗುಜರಾತ್​): ಭಾನುವಾರ ಅಮೆರಿಕ ನಿರ್ಮಿತ ನಾಲ್ಕು ಚಿನೂಕ್​ ಹೆಲಿಕಾಪ್ಟ್​ರ್​ಗಳು ಗುಜರಾತ್​ನ ಮುಂದ್ರಾ ಬಂದರಿಗೆ ಆಗಮಿಸಿವೆ.

2015 ಸೆಪ್ಟೆಂಬರ್​ನಲ್ಲಿ ಭಾರತ ಸರ್ಕಾರ ಅಮೆರಿಕದೊಂದಿಗೆ 15 ಚಿನೂಕ್​ ಹೆಲಿಕಾಪ್ಟರ್​ ಹಾಗೂ ಅಪಾಚೆ ಹೆಲಿಕಾಪ್ಟರ್​ಗಳನ್ನ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 4 ಹೆಲಿಕಾಪ್ಟರ್​ಗಳು ಭಾರತಕ್ಕೆ ಕಾಲಿಟ್ಟಿವೆ.

ಬಹು ಸಾಮರ್ಥ್ಯವುಳ್ಳ ಈ ಚಿನೂಕ್​ ಹೆಲಿಕಾಪ್ಟರ್​ಗಳು ಭಾರತೀಯ ಸೇನೆಗೆ ಶಕ್ತಿ ತುಂಬಲಿವೆ. ಸೇನಾಪಡೆ, ಸೇನಾ ಉಪಕರಣಗಳು, ಇಂಧನವನ್ನ ಸಾಗಿಸಲು ಚಿನೂಕ್​ ಅನ್ನ ಬಳಸಬಹುದು. ಅಷ್ಟೇ ಅಲ್ಲದೆ ಪ್ರಕೃತಿ ವಿಕೋಪದಂತಾ ಸಂದರ್ಭಗಳಲ್ಲಿ ಚಿನೂಕ್​ ಹೆಲಿಕಾಪ್ಟರ್​ಗಳು ಸಹಕಾರಿಯಾಗಲಿವೆ.

ಸಧ್ಯ ನಾಲ್ಕು ಹೆಲಿಕಾಪ್ಟರ್​ಗಳನ್ನ ಅಮೆರಿಕ ರವಾನೆ ಮಾಡಿದ್ದು, 2020ರ ವೇಳೆಗೆ ಇನ್ನುಳಿದ ಹೆಲಿಕಾಪ್ಟರ್​ಗಳು ಭಾರತಕ್ಕೆ ಆಗಮಿಸಲಿವೆ.

ಮುಂದ್ರಾ(ಗುಜರಾತ್​): ಭಾನುವಾರ ಅಮೆರಿಕ ನಿರ್ಮಿತ ನಾಲ್ಕು ಚಿನೂಕ್​ ಹೆಲಿಕಾಪ್ಟ್​ರ್​ಗಳು ಗುಜರಾತ್​ನ ಮುಂದ್ರಾ ಬಂದರಿಗೆ ಆಗಮಿಸಿವೆ.

2015 ಸೆಪ್ಟೆಂಬರ್​ನಲ್ಲಿ ಭಾರತ ಸರ್ಕಾರ ಅಮೆರಿಕದೊಂದಿಗೆ 15 ಚಿನೂಕ್​ ಹೆಲಿಕಾಪ್ಟರ್​ ಹಾಗೂ ಅಪಾಚೆ ಹೆಲಿಕಾಪ್ಟರ್​ಗಳನ್ನ ಖರೀದಿ ಮಾಡಲು ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಮೊದಲ ಹಂತದಲ್ಲಿ 4 ಹೆಲಿಕಾಪ್ಟರ್​ಗಳು ಭಾರತಕ್ಕೆ ಕಾಲಿಟ್ಟಿವೆ.

ಬಹು ಸಾಮರ್ಥ್ಯವುಳ್ಳ ಈ ಚಿನೂಕ್​ ಹೆಲಿಕಾಪ್ಟರ್​ಗಳು ಭಾರತೀಯ ಸೇನೆಗೆ ಶಕ್ತಿ ತುಂಬಲಿವೆ. ಸೇನಾಪಡೆ, ಸೇನಾ ಉಪಕರಣಗಳು, ಇಂಧನವನ್ನ ಸಾಗಿಸಲು ಚಿನೂಕ್​ ಅನ್ನ ಬಳಸಬಹುದು. ಅಷ್ಟೇ ಅಲ್ಲದೆ ಪ್ರಕೃತಿ ವಿಕೋಪದಂತಾ ಸಂದರ್ಭಗಳಲ್ಲಿ ಚಿನೂಕ್​ ಹೆಲಿಕಾಪ್ಟರ್​ಗಳು ಸಹಕಾರಿಯಾಗಲಿವೆ.

ಸಧ್ಯ ನಾಲ್ಕು ಹೆಲಿಕಾಪ್ಟರ್​ಗಳನ್ನ ಅಮೆರಿಕ ರವಾನೆ ಮಾಡಿದ್ದು, 2020ರ ವೇಳೆಗೆ ಇನ್ನುಳಿದ ಹೆಲಿಕಾಪ್ಟರ್​ಗಳು ಭಾರತಕ್ಕೆ ಆಗಮಿಸಲಿವೆ.

Intro:Body:

ಟಾಪ್​- 17

ಸ್ಟೆಟ್- 19



ಬಿಎಸ್​ವೈ ಆಡಿಯೊ ಕ್ಲಿಪ್​ ಕಾಂಗ್ರೆಸ್​ ಪಾಲಿಗೆ ಬ್ರಹ್ಮಾಸ್ತ್ರ



ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೊ ಕ್ಲಿಪ್​ ಕಾಂಗ್ರೆಸ್‍ಗೆ ಹೋರಾಟದ ಬ್ರಹ್ಮಾಸ್ತ್ರವಾಗಿದೆ.



ಇಂದು ಸದನದಲ್ಲಿ ಇದೇ ವಿಚಾರ ಪ್ರಸ್ತಾಪಿಸಿ ಬಿಜೆಪಿ ಕಾಲೆಳೆಯಲು ನಿರ್ಧರಿಸಿರುವ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಹೇಳಿಕೆ ನೀಡುತ್ತಾರೆ. ಇದೀಗ ಬಿ.ಎಸ್. ಯಡಿಯೂರಪ್ಪ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವ ಸವಾಲೆಸೆಯುವ ಸಾಧ್ಯತೆ ಹೆಚ್ಚಾಗಿದೆ. 



ಉತ್ತರ ನೀಡುವ ಕಷ್ಟ ಕೂಡ ಬಿಜೆಪಿಗೆ ಎದುರಾಗಲಿದ್ದು, ಆಡಿಯೊ ಮೂಲಕ ಇಕ್ಕಟ್ಟಿಗೆ ಸಿಲುಕಿರುವ ಬಿಎಸ್‍ವೈ ಹಾಗೂ ಬಿಜೆಪಿ ರಾಜ್ಯ ನಾಯಕರು ಇದಕ್ಕೆ ಯಾವ ಉತ್ತರ ನೀಡುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ.



ಇಂದು ವಿಧಾನಸಭೆಯಲ್ಲಿ ಸ್ಪೀಕರ್ ರಮೇಶ್‍ಕುಮಾರ್ ಈ ವಿಚಾರ ಪ್ರಸ್ತಾಪಿಸುವುದಾಗಿ ತಿಳಿಸಿದ್ದು, ಅವರ ವಿರುದ್ಧವೇ ಆಮಿಷ ಒಡ್ಡುವ ಮಾತು ಕೇಳಿ ಬಂದಿರುವ ಕಾರಣ ಈ ವಿಚಾರವನ್ನು ಸ್ಪೀಕರ್ ರಮೇಶ್‍ಕುಮಾರ್ ಅತ್ಯಂತ ಸುಲಭವಾಗಿ ಬಿಟ್ಟು ಕೊಡುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. 



ತಮ್ಮ ಮೇಲೆ ಕೇಳಿ ಬಂದಿರುವ ಆರೋಪವನ್ನು ಸ್ಪೀಕರ್ ಗಂಭೀರವಾಗಿ ಪರಿಗಣಿಸಿದರೆ ಅದು ಯಡಿಯೂರಪ್ಪನವರಿಗೆ ತೊಂದರೆ ಎದುರಾಗಲಿದೆ.  ಕಾಂಗ್ರೆಸ್ ಅಸ್ತ್ರ ವಿಧಾನಸಭೆ ಹಾಗೂ ಲೋಕಸಭೆ ಎರಡೂ ಕಡೆ ಕಾಂಗ್ರೆಸ್ ನಾಯಕರು ವಿಚಾರ ಪ್ರಸ್ತಾಪಿಸುವ ಸಾಧ್ಯತೆ ಇದ್ದು, ಈ ಮೂಲಕ ಕಾಂಗ್ರೆಸ್ ಲೋಕಸಭೆಯಲ್ಲಿ ಕೂಡ ವಿಷಯ ಪ್ರಸ್ತಾಪಿಸಲಿದೆ.  ಇದಕ್ಕೆ ಅಗತ್ಯ ಸಿದ್ಧತೆ ನಡೆಸಿಕೊಂಡಿದ್ದಾರೆ. ಪಾರ್ಲಿಮೆಂಟ್ ಮುಂಭಾಗ ಪ್ರತಿಭಟನೆ ನಡೆಸಿ ಸದನದ ಒಳಗೆ ತೆರಳಿ ಬಿಎಸ್‍ವೈ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೂ ಒತ್ತಡ ಹೇರುವ ಸಾಧ್ಯತೆ ಇದೆ.  


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.