ನವದೆಹಲಿ: ಕಾಂಗ್ರೆಸ್ ನಾಯಕ ಮಣಿ ಶಂಕರ್ ಅಯ್ಯರ್ ಪಾಕಿಸ್ತಾನದಲ್ಲಿ ಭಾರತದ ವಿಚಾರವನ್ನು ಚರ್ಚೆ ಮಾಡಿ ಮತ್ತೆ ಸಂಕಷ್ಟವನ್ನು ಮೈಮೇಲೆ ಎಳೆದುಕೊಮಡಿದ್ದಾರೆ.
ಪಾಕಿಸ್ತಾನದ ಲಾಹೋರ್ನಲ್ಲಿ ನಡೆದ ಚರ್ಚೆಯೊಂದರಲ್ಲಿ ಪಾಲ್ಗೊಂಡಿದ್ದ ಮಣಿ ಶಂಕರ್ ಅಯ್ಯರ್ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸಂಬಂಧದಲ್ಲೇ ಬಿರುಕಿದೆ ಎಂಬ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಎನ್ಆರ್ಸಿ ಗೂ ಮುಂಚೆ ಎನ್ಪಿಆರ್ಅನ್ನು ಜಾರಿಗೊಳಿಸುವ ಆಲೋಚನೆ ಮಾಡಿರಲಿಲ್ಲ. ಆದರೆ ಗೃಹ ಸಚಿವ ಅಮಿತ್ ಶಾ ಮಾತ್ರ ಸಂಸತ್ತಿನಲ್ಲಿ ಈ ಬಗ್ಗೆ ಬರವಣಿಗೆ ಮೂಲಕ ಖಾತ್ರಿ ಪಡಿಸಿದ್ದಾರೆ. ಅವರಿಬ್ಬರ ಮಧ್ಯೆಯೇ ಹೊಂದಾಣಿಕೆಯಿಲ್ಲ. ಬಿರುಕಿದೆ ಎಂದು ಪಾಕ್ ನೆಲದಲ್ಲಿ ವಿವಾದಾತ್ಮಕ ಬಾಂಬ್ ಸಿಡಿದ್ದಾರೆ.
ಲಾಹೋರ್ನಲ್ಲಿ ನಡೆದ ಚರ್ಚೆಯಲ್ಲಿ ಪತ್ರಕರ್ತ ನಜಾಮ್ ಸೇತಿ ಕೂಡ ಪಾಲ್ಗೊಂಡಿದ್ದ ಹಿನ್ನಲೆ ಈ ಮಾಹಿತಿ ಲಭ್ಯವಾಗಿದೆ.