ETV Bharat / bharat

ಅತೃಪ್ತ ಶಾಸಕರ ಅರ್ಜಿ ವಿಚಾರಣೆ... ಎಲ್ಲರ ಚಿತ್ತ 'ಸುಪ್ರೀಂ'ನತ್ತ!

ಸುಪ್ರೀಂಕೋರ್ಟ್​ನ ಇಂದಿನ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ಅಡಗಿದ್ದು, ರಾಜಕೀಯ ಲೆಕ್ಕಚಾರಗಳು ತೀರ್ಪಿನ ನಂತರ ಚುರುಕುಗೊಳ್ಳಲಿದೆ.

author img

By

Published : Jul 16, 2019, 10:53 AM IST

Updated : Jul 16, 2019, 11:01 AM IST

ಸುಪ್ರೀಂಕೋರ್ಟ್‌

ನವದೆಹಲಿ: ರಾಜೀನಾಮೆ ಅಂಗೀಕರಿಸಲು ಸ್ಪೀಕರ್‌ಗೆ ನಿರ್ದೇಶನ ಕೋರಿ​ ಮೈತ್ರಿ ಸರ್ಕಾರದ 15 ಮಂದಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಆರಂಭವಾಗಿದೆ.

ಕೋರ್ಟ್​ ಹಾಲ್​ಗೆ ನ್ಯಾಯಮೂರ್ತಿಗಳು ಆಗಮಿಸಿದ್ದು, ಸ್ಪೀಕರ್​ ಹಾಗೂ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮುಖ್ಯ ನ್ಯಾ. ರಂಜನ್​ ಗೊಗೋಯಿ ಹಾಗೂ ನ್ಯಾ.ದೀಪಕ್​ ಗುಪ್ತ ಮತ್ತು ನ್ಯಾ. ಅನಿರುದ್ಧ ಬೋಸ್​ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಕಳೆದ ವಾರ ದೇಶದ ಅತ್ಯುನ್ನತ ಕೋರ್ಟ್ ಸ್ಪೀಕರ್‌ಗೆ ಆದೇಶಿಸಿತ್ತು. ರಾಜಕೀಯ ಬೆಳವಣಿಗೆಯ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

ಸುಪ್ರೀಂಕೋರ್ಟ್​ನ ಇಂದಿನ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ಅಡಗಿದ್ದು, ರಾಜಕೀಯ ಲೆಕ್ಕಚಾರಗಳು ತೀರ್ಪಿನ ನಂತರ ಚುರುಕುಗೊಳ್ಳಲಿದೆ.

ನವದೆಹಲಿ: ರಾಜೀನಾಮೆ ಅಂಗೀಕರಿಸಲು ಸ್ಪೀಕರ್‌ಗೆ ನಿರ್ದೇಶನ ಕೋರಿ​ ಮೈತ್ರಿ ಸರ್ಕಾರದ 15 ಮಂದಿ ಅತೃಪ್ತ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​ನಲ್ಲಿ ಆರಂಭವಾಗಿದೆ.

ಕೋರ್ಟ್​ ಹಾಲ್​ಗೆ ನ್ಯಾಯಮೂರ್ತಿಗಳು ಆಗಮಿಸಿದ್ದು, ಸ್ಪೀಕರ್​ ಹಾಗೂ ಅತೃಪ್ತ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಮುಖ್ಯ ನ್ಯಾ. ರಂಜನ್​ ಗೊಗೋಯಿ ಹಾಗೂ ನ್ಯಾ.ದೀಪಕ್​ ಗುಪ್ತ ಮತ್ತು ನ್ಯಾ. ಅನಿರುದ್ಧ ಬೋಸ್​ ಅವರನ್ನೊಳಗೊಂಡ ತ್ರಿಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

ಅತೃಪ್ತ ಶಾಸಕರ ರಾಜೀನಾಮೆ ಹಾಗೂ ಅನರ್ಹತೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಕಳೆದ ವಾರ ದೇಶದ ಅತ್ಯುನ್ನತ ಕೋರ್ಟ್ ಸ್ಪೀಕರ್‌ಗೆ ಆದೇಶಿಸಿತ್ತು. ರಾಜಕೀಯ ಬೆಳವಣಿಗೆಯ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು.

ಸುಪ್ರೀಂಕೋರ್ಟ್​ನ ಇಂದಿನ ತೀರ್ಪಿನ ಮೇಲೆ ಮೈತ್ರಿ ಸರ್ಕಾರದ ಭವಿಷ್ಯ ಅಡಗಿದ್ದು, ರಾಜಕೀಯ ಲೆಕ್ಕಚಾರಗಳು ತೀರ್ಪಿನ ನಂತರ ಚುರುಕುಗೊಳ್ಳಲಿದೆ.

Intro:Body:

supremcourt


Conclusion:
Last Updated : Jul 16, 2019, 11:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.