ETV Bharat / bharat

ಅಗ್ಗ ದರದ, ಪೋರ್ಟೆಬಲ್​ ವೆಂಟಿಲೇಟರ್ ಕಂಡು ಹಿಡಿದ ಐಐಟಿ ರೂರ್ಕಿ

author img

By

Published : Apr 3, 2020, 3:52 PM IST

ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾದಂತೆ ಅವರ ತುರ್ತು ಚಿಕಿತ್ಸೆಗೆ ಅವಶ್ಯಕವಾಗಿ ವೆಂಟಿಲೇಟರ್ ಬೇಕಾಗುತ್ತದೆ. ಆದರೆ ದುಬಾರಿ ಮೌಲ್ಯದ ವೆಂಟಿಲೇಟರ್​ಗಳ ವ್ಯವಸ್ಥೆ ಎಲ್ಲೆಡೆ ಸಿಗುವುದು ಕಷ್ಟವಾಗುತ್ತಿದೆ. ಇಂಥ ಸಮಯದಲ್ಲಿ ಕಡಿಮೆ ಖರ್ಚಿನ ಹಾಗೂ ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗಬಹುದಾದಂಥ ವೆಂಟಿಲೇಟರ್​ ಒಂದನ್ನು ಐಐಟಿ ರೂರ್ಕಿ ತಂತ್ರಜ್ಞರು ಸಿದ್ಧಪಡಿಸಿದ್ದಾರೆ.

IIT Roorkee develops low cost, portable ventilator
IIT Roorkee develops low cost, portable ventilator

ರೂರ್ಕಿ: ಕೊರೊನಾ ವೈರಸ್ ವಿರುದ್ಧ ದೇಶಾದ್ಯಂತ ಹೋರಾಟ ನಡೆದಿರುವ ಬೆನ್ನಲ್ಲೇ ಐಐಟಿ ರೂರ್ಕಿಯಿಂದ ಖುಷಿಯ ಸುದ್ದಿ ಹೊರಬಂದಿದೆ. ಐಐಟಿ ರೂರ್ಕಿ ತಂತ್ರಜ್ಞರು ಕಡಿಮೆ ಖರ್ಚಿನ ಹಾಗೂ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ (ಪೋರ್ಟೆಬಲ್​) ವೆಂಟಿಲೇಟರ್​ ಆವಿಷ್ಕರಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಈ ಆವಿಷ್ಕಾರ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.

ಈ ಪ್ರಾಣ ವಾಯುವಿನ ವಿಶೇಷತೆ ಏನು?

"ಪ್ರಾಣ-ವಾಯು" ಎಂಬ ಹೆಸರಿನ ಈ ಕ್ಲೋಸ್ಡ್​ ಲೂಪ್​ ವೆಂಟಿಲೇಟರನ್ನು ಎಐಐಎಂಎಸ್​ ಋಷಿಕೇಶ ಸಹಯೋಗದಲ್ಲಿ ನಿರ್ಮಿಸಲಾಗಿದ್ದು, ಇದು ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. ರೋಗಿಗೆ ಅಗತ್ಯವಿರುವಷ್ಟು ಆಕ್ಸಿಜನ್​ ಪೂರೈಸುವ ಪ್ರೈಂ ಮೂವರ್​ ನಿಯಂತ್ರಿತ ಆಪರೇಶನ್​ ಆಧರಿತವಾಗಿರುವ ಇದು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಟೈಡಲ್​ ವಾಲ್ಯೂಮ್​ ಹಾಗೂ ಪ್ರತಿ ನಿಮಿಷದ ಉಸಿರಾಟವನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ. ಎಲ್ಲ ವಯೋಮಾನದವರಿಗೂ ಇದು ಉಪಯುಕ್ತವಾಗಿದ್ದು, ವಯೋವೃದ್ಧರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಈಗಾಗಲೇ ರೋಗಿಗಳ ಮೇಲೆ ಯಶಸ್ವಿಯಾಗಿ ಇದರ ಮಾದರಿ ಪ್ರೊಟೊಟೈಪ್​ ಪರೀಕ್ಷೆ ನಡೆಸಲಾಗಿದೆ.

ಅಲ್ಲದೆ ಇದು ಕೆಲಸ ಮಾಡಲು ಕಾಂಪ್ರೆಸ್ಡ್ ಗಾಳಿಯ ಅವಶ್ಯಕತೆ ಇರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಆಸ್ಪತ್ರೆಯ ಯಾವುದೇ ನಿರ್ದಿಷ್ಟ ವಾರ್ಡ್​ ಒಂದನ್ನು ಐಸಿಯು ಆಗಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ. ರಿಯಲ್ ಟೈಂ ಸ್ಪೈರೋಮೆಟ್ರಿ ಮತ್ತು ಅಲಾರಂ ಅಳವಡಿಸಿರುವುದರಿಂದ ಸಂಪೂರ್ಣ ಸುರಕ್ಷಿತವೂ ಆಗಿದೆ.

ಐಐಟಿ ರೂರ್ಕಿಯ ಪ್ರೊ. ಅಕ್ಷಯ ದ್ವಿವೇದಿ, ಪ್ರೊ. ಅರೂಪ್​ ಕುಮಾರ ದಾಸ್​ ಹಾಗೂ ಋಷಿಕೇಶ ಎಐಐಎಂಎಸ್​ನ ಡಾ. ದೇವೇಂದ್ರ ತ್ರಿಪಾಠಿ ಇವರ ತಂಡ ವೆಂಟಿಲೇಟರ್​ ಅನ್ನು ಅಭಿವೃದ್ಧಿಪಡಿಸಿದೆ. ಕಳೆದ ಒಂದು ವಾರದ ಹಿಂದಷ್ಟೇ ಪ್ರಯೋಗಗಳನ್ನು ಆರಂಭಿಸಿದ್ದ ತಂಡ ಈಗ ವೆಂಟಿಲೇಟರ್​ ಆವಿಷ್ಕರಿಸಿದ್ದು ಶ್ಲಾಘನೀಯ.

ರೂರ್ಕಿ: ಕೊರೊನಾ ವೈರಸ್ ವಿರುದ್ಧ ದೇಶಾದ್ಯಂತ ಹೋರಾಟ ನಡೆದಿರುವ ಬೆನ್ನಲ್ಲೇ ಐಐಟಿ ರೂರ್ಕಿಯಿಂದ ಖುಷಿಯ ಸುದ್ದಿ ಹೊರಬಂದಿದೆ. ಐಐಟಿ ರೂರ್ಕಿ ತಂತ್ರಜ್ಞರು ಕಡಿಮೆ ಖರ್ಚಿನ ಹಾಗೂ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ (ಪೋರ್ಟೆಬಲ್​) ವೆಂಟಿಲೇಟರ್​ ಆವಿಷ್ಕರಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಈ ಆವಿಷ್ಕಾರ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.

ಈ ಪ್ರಾಣ ವಾಯುವಿನ ವಿಶೇಷತೆ ಏನು?

"ಪ್ರಾಣ-ವಾಯು" ಎಂಬ ಹೆಸರಿನ ಈ ಕ್ಲೋಸ್ಡ್​ ಲೂಪ್​ ವೆಂಟಿಲೇಟರನ್ನು ಎಐಐಎಂಎಸ್​ ಋಷಿಕೇಶ ಸಹಯೋಗದಲ್ಲಿ ನಿರ್ಮಿಸಲಾಗಿದ್ದು, ಇದು ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. ರೋಗಿಗೆ ಅಗತ್ಯವಿರುವಷ್ಟು ಆಕ್ಸಿಜನ್​ ಪೂರೈಸುವ ಪ್ರೈಂ ಮೂವರ್​ ನಿಯಂತ್ರಿತ ಆಪರೇಶನ್​ ಆಧರಿತವಾಗಿರುವ ಇದು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಟೈಡಲ್​ ವಾಲ್ಯೂಮ್​ ಹಾಗೂ ಪ್ರತಿ ನಿಮಿಷದ ಉಸಿರಾಟವನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ. ಎಲ್ಲ ವಯೋಮಾನದವರಿಗೂ ಇದು ಉಪಯುಕ್ತವಾಗಿದ್ದು, ವಯೋವೃದ್ಧರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಈಗಾಗಲೇ ರೋಗಿಗಳ ಮೇಲೆ ಯಶಸ್ವಿಯಾಗಿ ಇದರ ಮಾದರಿ ಪ್ರೊಟೊಟೈಪ್​ ಪರೀಕ್ಷೆ ನಡೆಸಲಾಗಿದೆ.

ಅಲ್ಲದೆ ಇದು ಕೆಲಸ ಮಾಡಲು ಕಾಂಪ್ರೆಸ್ಡ್ ಗಾಳಿಯ ಅವಶ್ಯಕತೆ ಇರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಆಸ್ಪತ್ರೆಯ ಯಾವುದೇ ನಿರ್ದಿಷ್ಟ ವಾರ್ಡ್​ ಒಂದನ್ನು ಐಸಿಯು ಆಗಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ. ರಿಯಲ್ ಟೈಂ ಸ್ಪೈರೋಮೆಟ್ರಿ ಮತ್ತು ಅಲಾರಂ ಅಳವಡಿಸಿರುವುದರಿಂದ ಸಂಪೂರ್ಣ ಸುರಕ್ಷಿತವೂ ಆಗಿದೆ.

ಐಐಟಿ ರೂರ್ಕಿಯ ಪ್ರೊ. ಅಕ್ಷಯ ದ್ವಿವೇದಿ, ಪ್ರೊ. ಅರೂಪ್​ ಕುಮಾರ ದಾಸ್​ ಹಾಗೂ ಋಷಿಕೇಶ ಎಐಐಎಂಎಸ್​ನ ಡಾ. ದೇವೇಂದ್ರ ತ್ರಿಪಾಠಿ ಇವರ ತಂಡ ವೆಂಟಿಲೇಟರ್​ ಅನ್ನು ಅಭಿವೃದ್ಧಿಪಡಿಸಿದೆ. ಕಳೆದ ಒಂದು ವಾರದ ಹಿಂದಷ್ಟೇ ಪ್ರಯೋಗಗಳನ್ನು ಆರಂಭಿಸಿದ್ದ ತಂಡ ಈಗ ವೆಂಟಿಲೇಟರ್​ ಆವಿಷ್ಕರಿಸಿದ್ದು ಶ್ಲಾಘನೀಯ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.