ETV Bharat / bharat

ನಾನು ಸತ್ಯವನ್ನೇ ಹೇಳಿದ್ದೇನೆ:  ಹೇಳಿಕೆ ಸಮರ್ಥಿಸಿಕೊಂಡ ಸ್ಯಾಮ್​ ಪಿತ್ರೋಡಾ - undefined

ಪುಲ್ವಾಮ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಾಕ್ಷಿ ಕೇಳಿ ಎಲ್ಲರ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಮ್ ಪಿತ್ರೋಡಾ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ನಾನು ಸತ್ಯವನ್ನೇ ಹೇಳಿದ್ದೇನೆ: ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಸ್ಯಾಮ್​ ಪಿತ್ರೋಡಾ
author img

By

Published : Apr 20, 2019, 5:00 PM IST

ನವದೆಹಲಿ: ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಬಗ್ಗೆ ಮತ್ತಷ್ಟು ದಾಖಲೆ ನೀಡುವಂತೆ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಮ್ ಪಿತ್ರೋಡಾ ಕೇಂದ್ರಕ್ಕೆ ಒತ್ತಾಯಿಸಿ ಟೀಕೆಗೆ ಗುರಿಯಾಗಿದ್ದರು.

ಇದೀಗ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ಸ್ಯಾಮ್​ ಪಿತ್ರೋಡಾ, ನಾನು ಸತ್ಯವನ್ನೇ ಹೇಳಿದ್ದೇನೆ, ನಾನು ಪ್ರಶ್ನೆಯನ್ನು ಕೇಳಿದ್ದೇನೆ ಮತ್ತು ಪ್ರಶ್ನೆ ಕೇಳಲು ಅರ್ಹನಾಗಿರುತ್ತೇನೆ. ಪ್ರಶ್ನೆ ಕೇಳಿದ ಕಾರಣಕ್ಕೆ ನಾನು ರಾಷ್ಟ್ರೀಯವಾದಿ ಅಲ್ಲ ಎಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ, ನನ್ನನ್ನ ಕೇಳಲು ನೀವು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

  • Sam Pitroda, Indian Overseas Congress Chief: I said the truth, I asked a question and I'm entitled to ask a question. Just because I asked a question, you can't label me that I'm not a nationalist, Who are you to ask me? That's when you need courage. https://t.co/NcFKhOFNk1

    — ANI (@ANI) April 20, 2019 " class="align-text-top noRightClick twitterSection" data=" ">

ಈ ಹಿಂದೆ ಮಾತನಾಡಿದ್ದ ಸ್ಯಾಮ್​ ಪಿತ್ರೋಡಾ ವಾಯುಸೇನೆ ದಾಳಿ ನಡೆಸಿದೆ ಹಾಗೂ 300 ಉಗ್ರರು ಹತರಾಗಿದ್ದಾರೆ ಎನ್ನುವುದೆಲ್ಲಾ ಸರಿ, ಆದರೆ ಈ ಕುರಿತಂತೆ ಮತ್ತಷ್ಟು ಪೂರಕ ದಾಖಲೆ ನೀಡಿ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಯುದಾಳಿ ಹಾಗೂ ಸತ್ತ ಉಗ್ರರ ಸಂಖ್ಯೆ ಬಗ್ಗೆ ಬಂದ ವರದಿಗಳನ್ನು ಗಮನಿಸಿದಾಗ ಕೆಲ ಅನುಮಾನಗಳು ಮೂಡಿವೆ. ನಿಜಕ್ಕೂ ವಾಯುದಾಳಿ ನಡೆದಿದೆಯೇ..? 300 ಉಗ್ರರು ಹತ್ಯೆಯಾಗಿದ್ದಾರಾ..? ಎಂದು ಸಂಶಯ ಮೂಡಿವೆ ಎಂದಿದ್ದರು

ಸ್ಯಾಮ್​ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕೆಂಡಾಮಂಡಲರಾಗಿದ್ದರು. ಈ ಬಗ್ಗೆ ಟ್ವೀಟ್​ ಮಾಡಿದ್ದ ಮೋದಿ, ನಾನು ಭಾರತೀಯರಲ್ಲಿ ಕೇಳಿಕೊಳ್ಳುತ್ತಿರುವುದು ಇಷ್ಟೆ. ಈ ರೀತಿಯ ಹೇಳಿಕೆಗಳನ್ನು ನೀಡುವ ಪ್ರತಿಪಕ್ಷಗಳನ್ನು ನೀವು ಪ್ರಶ್ನಿಸಿ.130 ಕೋಟಿ ಭಾರತೀಯರು ಪಾಕ್​ನ ನಡೆಯನ್ನು ಕ್ಷಮಿಸುವುದಲ್ಲ, ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಮರೆಯುವುದಿಲ್ಲ ಎಂಬುದನ್ನು ಒತ್ತಿ ಹೇಳಿ ಎಂದು ಟ್ವಿಟ್ಟರ್​ನಲ್ಲಿ ಟಾಂಗ್​ ಕೊಟ್ಟಿದ್ದರು.

  • Opposition insults our forces time and again.

    I appeal to my fellow Indians- question Opposition leaders on their statements.

    Tell them- 130 crore Indians will not forgive or forget the Opposition for their antics.

    India stands firmly with our forces. #JantaMaafNahiKaregi https://t.co/rwpFKMMeHY

    — Chowkidar Narendra Modi (@narendramodi) March 22, 2019 " class="align-text-top noRightClick twitterSection" data=" ">

ನವದೆಹಲಿ: ಪುಲ್ವಾಮ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆ ಬಗ್ಗೆ ಮತ್ತಷ್ಟು ದಾಖಲೆ ನೀಡುವಂತೆ ಕಾಂಗ್ರೆಸ್ ಸಾಗರೋತ್ತರ ಉಸ್ತುವಾರಿ ಸ್ಯಾಮ್ ಪಿತ್ರೋಡಾ ಕೇಂದ್ರಕ್ಕೆ ಒತ್ತಾಯಿಸಿ ಟೀಕೆಗೆ ಗುರಿಯಾಗಿದ್ದರು.

ಇದೀಗ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿರುವ ಸ್ಯಾಮ್​ ಪಿತ್ರೋಡಾ, ನಾನು ಸತ್ಯವನ್ನೇ ಹೇಳಿದ್ದೇನೆ, ನಾನು ಪ್ರಶ್ನೆಯನ್ನು ಕೇಳಿದ್ದೇನೆ ಮತ್ತು ಪ್ರಶ್ನೆ ಕೇಳಲು ಅರ್ಹನಾಗಿರುತ್ತೇನೆ. ಪ್ರಶ್ನೆ ಕೇಳಿದ ಕಾರಣಕ್ಕೆ ನಾನು ರಾಷ್ಟ್ರೀಯವಾದಿ ಅಲ್ಲ ಎಂದು ಹಣೆಪಟ್ಟಿ ಕಟ್ಟಲು ಸಾಧ್ಯವಿಲ್ಲ, ನನ್ನನ್ನ ಕೇಳಲು ನೀವು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

  • Sam Pitroda, Indian Overseas Congress Chief: I said the truth, I asked a question and I'm entitled to ask a question. Just because I asked a question, you can't label me that I'm not a nationalist, Who are you to ask me? That's when you need courage. https://t.co/NcFKhOFNk1

    — ANI (@ANI) April 20, 2019 " class="align-text-top noRightClick twitterSection" data=" ">

ಈ ಹಿಂದೆ ಮಾತನಾಡಿದ್ದ ಸ್ಯಾಮ್​ ಪಿತ್ರೋಡಾ ವಾಯುಸೇನೆ ದಾಳಿ ನಡೆಸಿದೆ ಹಾಗೂ 300 ಉಗ್ರರು ಹತರಾಗಿದ್ದಾರೆ ಎನ್ನುವುದೆಲ್ಲಾ ಸರಿ, ಆದರೆ ಈ ಕುರಿತಂತೆ ಮತ್ತಷ್ಟು ಪೂರಕ ದಾಖಲೆ ನೀಡಿ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಯುದಾಳಿ ಹಾಗೂ ಸತ್ತ ಉಗ್ರರ ಸಂಖ್ಯೆ ಬಗ್ಗೆ ಬಂದ ವರದಿಗಳನ್ನು ಗಮನಿಸಿದಾಗ ಕೆಲ ಅನುಮಾನಗಳು ಮೂಡಿವೆ. ನಿಜಕ್ಕೂ ವಾಯುದಾಳಿ ನಡೆದಿದೆಯೇ..? 300 ಉಗ್ರರು ಹತ್ಯೆಯಾಗಿದ್ದಾರಾ..? ಎಂದು ಸಂಶಯ ಮೂಡಿವೆ ಎಂದಿದ್ದರು

ಸ್ಯಾಮ್​ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಕೆಂಡಾಮಂಡಲರಾಗಿದ್ದರು. ಈ ಬಗ್ಗೆ ಟ್ವೀಟ್​ ಮಾಡಿದ್ದ ಮೋದಿ, ನಾನು ಭಾರತೀಯರಲ್ಲಿ ಕೇಳಿಕೊಳ್ಳುತ್ತಿರುವುದು ಇಷ್ಟೆ. ಈ ರೀತಿಯ ಹೇಳಿಕೆಗಳನ್ನು ನೀಡುವ ಪ್ರತಿಪಕ್ಷಗಳನ್ನು ನೀವು ಪ್ರಶ್ನಿಸಿ.130 ಕೋಟಿ ಭಾರತೀಯರು ಪಾಕ್​ನ ನಡೆಯನ್ನು ಕ್ಷಮಿಸುವುದಲ್ಲ, ವಿರೋಧ ಪಕ್ಷದ ನಾಯಕರ ಹೇಳಿಕೆಗಳನ್ನು ಮರೆಯುವುದಿಲ್ಲ ಎಂಬುದನ್ನು ಒತ್ತಿ ಹೇಳಿ ಎಂದು ಟ್ವಿಟ್ಟರ್​ನಲ್ಲಿ ಟಾಂಗ್​ ಕೊಟ್ಟಿದ್ದರು.

  • Opposition insults our forces time and again.

    I appeal to my fellow Indians- question Opposition leaders on their statements.

    Tell them- 130 crore Indians will not forgive or forget the Opposition for their antics.

    India stands firmly with our forces. #JantaMaafNahiKaregi https://t.co/rwpFKMMeHY

    — Chowkidar Narendra Modi (@narendramodi) March 22, 2019 " class="align-text-top noRightClick twitterSection" data=" ">
Intro:Body:

congress


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.