ನವದೆಹಲಿ: ಚಿಕಿತ್ಸೆಗೆ ಬರುವ ಪ್ರತಿ ರೋಗಿಯನ್ನೂ ಕೋವಿಡ್ -19 ಪರೀಕ್ಷೆಗಳಿಗೊಳಪಡಿಸುವ ಅಗತ್ಯವಿಲ್ಲ. ಮೊದಲು ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುಡಾನ್, ಅನೇಕ ಖಾಸಗಿ ಆಸ್ಪತ್ರೆಗಳು ಸಾಮಾನ್ಯ ರೋಗಿಗಳಿಗೆ ಡಯಾಲಿಸಿಸ್, ರಕ್ತ ವರ್ಗಾವಣೆ, ಕೀಮೋಥೆರಪಿ ಮತ್ತು ಸಾಂಸ್ಥಿಕ ವಿತರಣೆಗಳಂತಹ ನಿರ್ಣಾಯಕ ಸೇವೆಗಳನ್ನು ನೀಡಲೂ ಹಿಂಜರಿಯುತ್ತಿವೆ ಎಂಬ ವರದಿಗಳು ಕೇಂದ್ರಕ್ಕೆ ಬಂದಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರೋಗಿಗಳ ಸಂಪರ್ಕಕ್ಕೆ ಬರುವುದರಿಂದ ಸಿಬ್ಬಂದಿಗೆ ಕೋವಿಡ್ -19 ಹರಡಬಹುದು ಎಂಬ ಆತಂಕವಿರಬಹುದು. ಅಥವಾ ಆಸ್ಪತ್ರೆಗಳು ಪೂರ್ಣರೀತಿಯಲ್ಲಿ ಕಾರ್ಯನಿರ್ವಹಿಸದೆ ಇರಬಹುದು.
ಕೋವಿಡ್ -19 ಪರೀಕ್ಷೆಗೆ ಒತ್ತಾಯಿಸುವ ಬದಲು ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಬಹುದು ಎಂದು ಅವರು ಹೇಳಿದರು.