ETV Bharat / bharat

ರಾಜಧಾನಿಯಲ್ಲಿ ಮೋದಿ ಭೇಟಿ ಮಾಡಿದ ಹರಿಯಾಣ ಸಿಎಂ ಖಟ್ಟರ್​ - ಖಟ್ಟರ್​ ಮೋದಿ ಭೇಟಿ ಸುದ್ದಿ

ನಿನ್ನೆ​ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿದ್ದ ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್, ಇಂದು​ ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಮೋದಿ ಭೇಟಿ ಮಾಡಿದ ಹರಿಯಾಣ ಸಿಎಂ ಖಟ್ಟರ್
author img

By

Published : Oct 30, 2019, 5:03 PM IST

Updated : Oct 30, 2019, 5:28 PM IST

ನವದೆಹಲಿ: ಇಂದು ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಲ್ಲಿ ಯಶಸ್ವಿಯಾದ ಖಟ್ಟರ್,​ ನಿನ್ನೆ ದೆಹಲಿಯಲ್ಲಿ ಮೊದಲ ಸಂಪುಟ ಸಭೆ ನಡೆಸಿದ್ದರು. ಅಲ್ಲದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿದ್ದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದ್ದ ಬಿಜೆಪಿ, ಚುನಾವಣಾ ಫಲಿತಾಂಶದ ಬಳಿಕ ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಕಳೆದ ಭಾನುವಾರ ಖಟ್ಟರ್​ ಹಾಗೂ ದುಶ್ಯಂತ್​ ಚೌಟಾಲ, ಕ್ರಮವಾಗಿ ಸಿಎಂ ಹಾಗೂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದೇ ನವೆಂಬರ್​ ನಾಲ್ಕನೇ ತಾರೀಕಿನಿಂದ ಹರಿಯಾಣದಲ್ಲಿ ನೂತನ ಸರ್ಕಾರದ ಮೊದಲ ವಿಧಾನ ಸಭಾ ಕಲಾಪ ಆರಂಭಗೊಳ್ಳಲಿದೆ.

ನವದೆಹಲಿ: ಇಂದು ಹರಿಯಾಣ ಮುಖ್ಯಮಂತ್ರಿ ಮನೋಹರ್​ ಲಾಲ್​ ಖಟ್ಟರ್​ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಷ್ಟ್ರ ರಾಜಧಾನಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸತತ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಲ್ಲಿ ಯಶಸ್ವಿಯಾದ ಖಟ್ಟರ್,​ ನಿನ್ನೆ ದೆಹಲಿಯಲ್ಲಿ ಮೊದಲ ಸಂಪುಟ ಸಭೆ ನಡೆಸಿದ್ದರು. ಅಲ್ಲದೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರನ್ನು ಭೇಟಿ ಮಾಡಿದ್ದರು.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವಲ್ಲಿ ವಿಫಲವಾಗಿದ್ದ ಬಿಜೆಪಿ, ಚುನಾವಣಾ ಫಲಿತಾಂಶದ ಬಳಿಕ ಜೆಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆ. ಕಳೆದ ಭಾನುವಾರ ಖಟ್ಟರ್​ ಹಾಗೂ ದುಶ್ಯಂತ್​ ಚೌಟಾಲ, ಕ್ರಮವಾಗಿ ಸಿಎಂ ಹಾಗೂ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇದೇ ನವೆಂಬರ್​ ನಾಲ್ಕನೇ ತಾರೀಕಿನಿಂದ ಹರಿಯಾಣದಲ್ಲಿ ನೂತನ ಸರ್ಕಾರದ ಮೊದಲ ವಿಧಾನ ಸಭಾ ಕಲಾಪ ಆರಂಭಗೊಳ್ಳಲಿದೆ.

Intro:Body:

khattar


Conclusion:
Last Updated : Oct 30, 2019, 5:28 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.