ETV Bharat / bharat

ಅಪೌಷ್ಟಿಕತೆ ಕೊನೆಗೊಳಿಸಲು ಇದು ಸಕಾಲ: ಎಚ್ಚರಿಸಿದ ಜಾಗತಿಕ ಪೌಷ್ಟಿಕಾಂಶ ವರದಿ

author img

By

Published : Dec 9, 2020, 10:09 AM IST

ವಿಶ್ವಮಟ್ಟದಲ್ಲಿ ಅಪೌಷ್ಟಿಕತೆಯಿಂದ ಬಳಲುವವರ ಪ್ರಮಾಣ ಬೆಳೆಯುತ್ತಲೇ ಇದೆ. ಆಹಾರ ಭದ್ರತೆ ಮತ್ತು ಅಗತ್ಯ ಪೌಷ್ಟಿಕಾಂಶ ಪೂರೈಕೆಯನ್ನು ಖಾತರಿಗೊಳಿಸುವ ನೀತಿಗಳಿಗೆ ಹೊಸ ಧೋರಣೆಯ ಹಾಗೂ ತುರ್ತು ಸಂವೇದನೆಯ ಅಗತ್ಯವಿದೆ ಎಂಬುದನ್ನು 2020 ರ ಜಾಗತಿಕ ಪೌಷ್ಟಿಕಾಂಶ ವರದಿ ಎಚ್ಚರಿಸುತ್ತಿದೆ.

Global Nutrition Report 2020
ಜಾಗತಿಕ ಪೌಷ್ಟಿಕಾಂಶ ವರದಿ- 2020
  • ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆಯ ಮಟ್ಟ ಮುಂದುವರಿಯುತ್ತಲೇ ಇದ್ದು, ಪೌಷ್ಟಿಕಾಂಶ ಸೂಚಕಗಳಲ್ಲಿ ಕೆಲವು ಸುಧಾರಣೆಗಳ ಹೊರತಾಗಿಯೂ, 2025 ರ ವೇಳೆಗೆ ಜಾಗತಿಕ ಪೌಷ್ಠಿಕಾಂಶದ ಗುರಿಗಳನ್ನು ಮುಟ್ಟಲು ಈ ಪ್ರಗತಿ ಸಾಕಾಗುವುದಿಲ್ಲ ಎಂದು 2020 ರ ಜಾಗತಿಕ ಪೌಷ್ಟಿಕಾಂಶ ವರದಿ ಕಳವಳ ಹೊರಹಾಕಿದೆ.
  • 5 ವರ್ಷದೊಳಗಿನ 149.0 ಮಿಲಿಯನ್ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಂಡಿದೆ. ಇವರಲ್ಲಿ ಶೇ. 49.5 ರಷ್ಟು ಮಕ್ಕಳು ದೈಹಿಕವಾಗಿ ದುರ್ಬಲರಾಗಿದ್ದಾರೆ ಮತ್ತು 40.1 ಮಿಲಿಯನ್ ಮಕ್ಕಳು ಅಧಿಕ ತೂಕ ಹೊಂದಿದ್ದಾರೆ. ಹಾಗೂ 677.6 ಮಿಲಿಯನ್​​ ನಷ್ಟು ಬೊಜ್ಜು ಹೊಂದಿರುವ ವಯಸ್ಕರೂ ಇದ್ದಾರೆ ಎಂದು ​ ವರದಿ ಮಾಡಿದೆ.
  • 9 ಜನರಲ್ಲಿ ಒಬ್ಬರಂತೆ - ವಿಶ್ವಾದ್ಯಂತ ಸುಮಾರು 820 ಮಿಲಿಯನ್ ಜನರು ಹಸಿವಿನಿಂದ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2015 ರಿಂದಲೂ ಈ ಸಂಖ್ಯೆ ಹೆಚ್ಚಾಗುತ್ತಲೇ ಬಂದಿರುವುದು ದುರಂತ. ಅದರಲ್ಲೂ ದಕ್ಷಿಣ ಆಫ್ರಿಕಾ, ಪಶ್ಚಿಮ ಏಷ್ಯಾ,ಲ್ಯಾಟಿನ್​ ಅಮೆರಿಕಾದಲ್ಲಿ ಅಪೌಷ್ಟಿಕತೆಯ ದರ ಹೆಚ್ಚಾಗುತ್ತಲೇ ಇದೆ. ಸಂಘರ್ಷಗಳ ಪರಿಣಾಮ, ಆಹಾರದ ಅಭದ್ರತೆ, ಹವಾಮಾನ ವೈಪರೀತ್ಯ ಮತ್ತು ಆರ್ಥಿಕ ಹಿನ್ನಡೆ ಪರಿಣಾಮವಾಗಿ 53 ದೇಶಗಳಲ್ಲಿ ಸುಮಾರು 113 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ.
  • ವಿಶ್ವದ ಒಟ್ಟು ವಯಸ್ಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತಲೇ ಇದೆ.
  • ಬಾಲ್ಯಾವಸ್ಥೆಯಲ್ಲಿ ಬೆಳವಣಿಗೆಯ ಕುಂಠಿತವು ಜಾಗತಿಕವಾಗಿ 2012 ರಲ್ಲಿ 165.8 ದಶಲಕ್ಷದಿಂದ 2018 ರಲ್ಲಿ 149 ದಶಲಕ್ಷಕ್ಕೆ ಇಳಿದಿದೆ. ಇದು 10% ಸಾಪೇಕ್ಷ ಇಳಿಕೆ ಕಂಡಿರುವುದನ್ನು ಪ್ರತಿನಿಧಿಸುತ್ತದೆ.
  • ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಬಡದೇಶಗಳಲ್ಲಿ ಈ ದರವು 10 ಪಟ್ಟು ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಶ್ರೀಮಂತ ದೇಶಗಳಲ್ಲಿ ಅಧಿಕ ತೂಕ ಮತ್ತು ಬೊಜ್ಜು 5 ಪಟ್ಟು ಹೆಚ್ಚಾಗಿದೆ.
  • ಜಾಗತಿಕವಾಗಿ ಯಾವುದೇ ದೇಶ ಕೂಡ ಹೆಚ್ಚುತ್ತಿರುವ ಅಧಿಕ ತೂಕ ಮತ್ತು ಬೊಜ್ಜು ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದು ತಿಳಿದು ಬಂದಿದೆ.
  • ಬಡ ದೇಶಗಳಲ್ಲಿ ಪೌಷ್ಠಿಕ ಆಹಾರಗಳ ಬೆಲೆ ಹೆಚ್ಚಾಗಿದೆ.
  • ಗರ್ಭಾವಸ್ಥೆ ಮತ್ತು ಬಾಲ್ಯದಲ್ಲಿಯೇ ಕಳಪೆ ಆಹಾರ ನೀಡಿಕೆ, ಮಕ್ಕಳ ಜೀವನದ ಆರಂಭದಲ್ಲೇ ಪೌಷ್ಠಿಕಾಂಶದ ಕೊರತೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಇದು ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಯ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿದೆ.
  • ಉತ್ತಮ ಹಾಗೂ ಆರೋಗ್ಯಕರ ಘನ ಆಹಾರಗಳ ದರಗಳು, ಮೃದು ಆಹಾರ ಪರಿಚಯ ಮತ್ತು ಕನಿಷ್ಠ ಆಹಾರ ವೈವಿಧ್ಯತೆಯ ಪರಿಚಯ ಬಡ ಕುಟುಂಬಗಳು, ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಅವಿದ್ಯಾವಂತ ತಾಯಿಯರು ಕೂಡ ಹೆಚ್ಚಾಗಿರುವುದು ಮಕ್ಕಳ ಬೆಳವಣಿಗೆ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗುತ್ತಿದೆ.
  • ಜಾಗತಿಕ ಮತ್ತು ರಾಷ್ಟ್ರೀಯ ಮಾದರಿಗಳು ದೇಶಗಳು ಮತ್ತು ಸಮುದಾಯಗಳಲ್ಲಿನ ಅಸಮಾನತೆಗಳನ್ನು ಮರೆಮಾಚುತ್ತವೆ ಎಂದು ಹೊಸ ವಿಶ್ಲೇಷಣೆಯೊಂದು ವಿವರಿಸುತ್ತದೆ. ಇದು ದುರ್ಬಲ ಗುಂಪುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
  • ಕಳಪೆ ಆಹಾರ ಮತ್ತು ಅಪೌಷ್ಟಿಕತೆಯು ಕೇವಲ ವೈಯಕ್ತಿಕ ಆಯ್ಕೆಗಳ ವಿಷಯವಲ್ಲ
  • ಹೆಚ್ಚಿನ ಜನರು ಆರೋಗ್ಯಕರ ಆಹಾರ ಅಥವಾ ಗುಣಮಟ್ಟದ ಅಥವಾ ಪೌಷ್ಠಿಕಾಂಶದ ಆಹಾರ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಆಹಾರ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಪೂರಕ ಬದಲಾವಣೆಗಳಾಗಬೇಕಿದೆ.
  • ನಾವು ಆಹಾರ ವ್ಯವಸ್ಥೆಯಲ್ಲಿನ ಅಸಮಾನತೆಗಳನ್ನು ಪರಿಹರಿಸಬೇಕು ಮತ್ತು ಆರೋಗ್ಯಕರ, ಸುಸ್ಥಿರ ಆಹಾರವನ್ನು ಎಲ್ಲರಿಗೂ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಬೇಕು.
  • ಆರೋಗ್ಯ ವ್ಯವಸ್ಥೆಗಳಲ್ಲಿ ಪೌಷ್ಠಿಕಾಂಶವನ್ನು ಸಂಪೂರ್ಣವಾಗಿ ಸಂಯೋಜಿಸಬೇಕು ಮತ್ತು ಪೌಷ್ಠಿಕಾಂಶ ಭರಿತ ಆಹಾರ ಮತ್ತು ಅಪೌಷ್ಟಿಕತೆ ಹೋಗಲಾಡಿಸುವ ಮಾರ್ಗಗಳು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡಬೇಕು.
  • ಈಗ ಕಾರ್ಯಾಚರಣೆಯ ಸಮಯ. ಅಪೌಷ್ಟಿಕತೆಯನ್ನು ಕೊನೆಗೊಳಿಸಲು , ಪ್ರಗತಿಯನ್ನು ತಡೆಹಿಡಿಯುವ ಅಡೆತಡೆಗಳನ್ನು ನಿವಾರಿಸಲು ಮಧ್ಯಸ್ಥಗಾರರು ಸಮನ್ವಯದಿಂದ ಕೆಲಸ ಮಾಡಬೇಕು
  • ಸಮಾನ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಆಹಾರ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸಬೇಕು.
  • ವಿಶೇಷವಾಗಿ ಹೆಚ್ಚು ಅಪೌಷ್ಠಿಕತೆಗೆ ಒಳಗಾಗಿರುವ ಸಮುದಾಯಗಳಲ್ಲಿ ಪೌಷ್ಠಿಕಾಂಶದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು.
  • ಜಂಟಿ ಪ್ರಯತ್ನಗಳತ್ತ ಗಮನಹರಿಸಿದರೆ, ಜಾಗತಿಕ ಸವಾಲುಗಳು ಇದು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.
  • ಪೌಷ್ಠಿಕಾಂಶ ಬದ್ಧತೆಗಳನ್ನು ನವೀಕರಿಸಲು ಮತ್ತು ವಿಸ್ತರಿಸಲು ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಪ್ರಮುಖ ಕ್ಷಣಗಳನ್ನು ನಿಯಂತ್ರಿಸಬೇಕು.
  • ಇಲ್ಲಿ ಭಾರತವು ಅಧಿಕ ತೂಕ ಹೊಂದಿರುವ ಮತ್ತು ಬೆಳವಣಿಗೆ ಕುಂಠಿತಗೊಂಡಿರುವ ವಿಭಾಗದಲ್ಲಿ ಬರುತ್ತದೆ.
  • ನೈಜೀರಿಯಾ, ಇಂಡೋನೇಷ್ಯಾ ಮತ್ತು ಭಾರತದಲ್ಲಿ ಬೆಳವಣಿಗೆ ಕ್ಷೀಣಿಸುವಿಕೆಯಲ್ಲಿ ಹೆಚ್ಚಿನ ಅಸಮಾನತೆಗಳು ಕಂಡುಬಂದಿವೆ. ಅಲ್ಲಿ ಸಮುದಾಯಗಳಲ್ಲಿ ಅಪೌಷ್ಟಿಕತೆಯ ಮಟ್ಟ ಭಾರತಕ್ಕಿಂತ ನಾಲ್ಕು ಪಟ್ಟು ಬದಲಾಗಿದೆ.
  • ಭಾರತದಲ್ಲಿ, ಗರ್ಭ ಧರಿಸುವ ವಯಸ್ಸಿನ ಪ್ರತೀ ಇಬ್ಬರು ಮಹಿಳೆಯರಲ್ಲಿ ಇಬ್ಬರು ರಕ್ತಹೀನತೆಯಿಂದ ಬಳಲುತ್ತಾರೆ. ಐದು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಒಬ್ಬರು ಬೆಳವಣಿಗೆಯಲ್ಲಿ ಕುಂಠಿತಗೊಂಡಿದ್ದಾರೆ ಮತ್ತು ಐದು ವರ್ಷದೊಳಗಿನ ಒಂದು ಮಗುವಿನಲ್ಲಿ ದೈಹಿಕ ದುರ್ಬಲತೆ ಕಂಡು ಬರುತ್ತಿದ್ದು, ಈ ಅಂಶಗಳು ಬೆಳವಣಿಗೆ ಕುಂಠಿತದ ಅಸಮಾನತೆಗಳನ್ನು ಸ್ಪಷ್ಟಪಡಿಸುತ್ತವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಈ ಬೆಳವಣಿಗೆ ಕುಂಠಿತದ ಹರಡುವಿಕೆಯು ಶೇ. 10.1 ರಷ್ಟು ಹೆಚ್ಚಾಗಿದೆ.
  • ಅಧಿಕ ತೂಕ ಅಥವಾ ಬೊಜ್ಜಿನ ದರವು ವಯಸ್ಕ ಮಹಿಳೆಯರಲ್ಲಿ 20.7% ಮತ್ತು ವಯಸ್ಕ ಪುರುಷರಲ್ಲಿ 18.9% ರಷ್ಟಕ್ಕೆ ತಲುಪಿದೆ. ಕಡಿಮೆ ಪೌಷ್ಠಿಕಾಂಶ ಮತ್ತು ಅಧಿಕ ತೂಕ ಈ ಎರಡರಿಂದಾಗಿ ಭಾರತವು ಅಪೌಷ್ಟಿಕತೆಯ ಎರಡು ಗಾಢ ಸಮಸ್ಯೆಗಳನ್ನು ಎದುರಿಸುತ್ತಿದೆ.
  • ಭಾರತದಲ್ಲಿ ಇತ್ತೀಚಿನ ಟ್ರಾನ್ಸ್‌ಫಾರ್ಮೇಶನ್ ಆಫ್ ಆಸ್ಪಿರೇಷನಲ್ ಡಿಸ್ಟ್ರಿಕ್ಟ್ಸ್ ಇನ್​ಶಿಯೇಟಿವ್​ನ​ ಆರೋಗ್ಯವಂತರನ್ನು ಹೆಚ್ಚಿಸುವ ಪ್ರಯತ್ನವು, ಸಮನಾದ ಪೌಷ್ಠಿಕಾಂಶ ಸೇವೆಗಳ ಯಶಸ್ವಿ ಏಕೀಕರಣ ಮತ್ತು ವಿತರಣೆಯನ್ನು ಎತ್ತಿ ತೋರಿಸುತ್ತದೆ.
  • 2025 ರ ಜಾಗತಿಕ ಪೌಷ್ಟಿಕಾಂಶದ ಗುರಿ ಸಾಧಿಸುವಲ್ಲಿ ದೇಶದ ಪ್ರಗತಿಯ ಮಟ್ಟ
  • ಅಪೌಷ್ಟಿಕತೆಯನ್ನು ನಿಯಂತ್ರಿಸುವ ಕ್ರಮಗಳು:
  • ಆಹಾರ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಅನ್ಯಾಯಗಳನ್ನು ನಿಯಂತ್ರಿಸುವುದು.
  • ಕಳಪೆ ಆಹಾರ ಮತ್ತು ಅಪೌಷ್ಟಿಕತೆಯು ಪ್ರಸ್ತುತ ಸಾಮಾಜಿಕ ಸವಾಲುಗಳಲ್ಲಿ ದೊಡ್ಡದಾಗಿದೆ, ಇದು ಅಪಾರ ಆರೋಗ್ಯ, ಆರ್ಥಿಕ ಮತ್ತು ಪರಿಸರ ಹೊರೆಗಳಿಗೆ ಕಾರಣವಾಗುತ್ತದೆ.
  • ಮೊದಲಿಗೆ, ಉತ್ಪಾದನೆಯಿಂದ ಸೇವೆಯವರೆಗೆ ಆಹಾರ ವ್ಯವಸ್ಥೆಗಳಲ್ಲಿನ ಅಸಮಾನತೆಗಳನ್ನು ನಾವು ಪರಿಹರಿಸಬೇಕು. ಪ್ರಸ್ತುತ ಆಹಾರ ವ್ಯವಸ್ಥೆಗಳು ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಲು ಜನರಿಗೆ ಸಾಧ್ಯವಾಗುವುದಿಲ್ಲ. ಇಂದು ಬಹುಪಾಲು ಜನರು ಆರೋಗ್ಯಕರ ಆಹಾರವನ್ನು ಪ್ರವೇಶಿಸಲು ಅಥವಾ ಪಡೆಯಲು ಸಾಧ್ಯವಿಲ್ಲ.
  • ಅಸ್ತಿತ್ವದಲ್ಲಿರುವ ಕೃಷಿ ವ್ಯವಸ್ಥೆಗಳು ಹೆಚ್ಚಾಗಿ ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಹೆಚ್ಚು ವೈವಿಧ್ಯಮಯ ಮತ್ತು ಆರೋಗ್ಯಕರ ಆಹಾರವನ್ನು ಉತ್ಪಾದಿಸುವ ಬದಲು ಅಕ್ಕಿ, ಗೋಧಿ ಮತ್ತು ಮೆಕ್ಕೆಜೋಳದಂತಹ ಪ್ರಮುಖ ಧಾನ್ಯಗಳ ಮೇಲೆ ಕೇಂದ್ರೀಕರಿಸಿವೆ.
  • ಹವಾಮಾನ ತುರ್ತುಪರಿಸ್ಥಿತಿಯು ಆಹಾರ ವ್ಯವಸ್ಥೆಗಳನ್ನು ಪುನರ್​​ ವಿಮರ್ಶಿಸುವಲ್ಲಿ ನಿರ್ಣಾಯಕವಾಗಿಸುತ್ತದೆ.

ಆರೋಗ್ಯ ವ್ಯವಸ್ಥೆಗಳಲ್ಲಿನ ಪೌಷ್ಠಿಕಾಂಶದ ಅಸಮಾನತೆಗಳನ್ನು ಮೊದಲು ಪರಿಹರಿಸಬೇಕು.

ಎಲ್ಲಾ ರೀತಿಯ ಅಪೌಷ್ಟಿಕತೆ ಅನಾರೋಗ್ಯ ಮತ್ತು ಸಾವಿಗೆ ಪ್ರಮುಖ ಕಾರಣವಾಗಿದೆ, ಮತ್ತು ಆಹಾರ-ಸಂಬಂಧಿತ ಎನ್‌ಸಿಡಿಗಳ ತ್ವರಿತ ಏರಿಕೆಯು ಆರೋಗ್ಯ ವ್ಯವಸ್ಥೆಗಳ ಮೇಲೆ ಅಸಹನೀಯ ಒತ್ತಡವನ್ನುಂಟುಮಾಡುತ್ತಿದೆ. ಆದರೂ, ಹೆಚ್ಚಿನ ಜನರು ಅಪೌಷ್ಟಿಕತೆ ತಡೆಗಟ್ಟುವ ಅಥವಾ ಚಿಕಿತ್ಸೆಗಾಗಿ ಗುಣಮಟ್ಟದ ಪೌಷ್ಠಿಕಾಂಶ ಪಡೆಯಲು ಸಾಧ್ಯವಿಲ್ಲ. ವಿಶ್ವಾದ್ಯಂತ, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 5 ವರ್ಷದೊಳಗಿನ 16.6 ಮಿಲಿಯನ್ ಮಕ್ಕಳಲ್ಲಿ ಕಾಲು ಭಾಗದಷ್ಟು ಜನರು ಮಾತ್ರ 2017 ರಲ್ಲಿ ಚಿಕಿತ್ಸೆಯನ್ನು ಪಡೆದರು. ಇದು ಅಪೌಷ್ಟಿಕತೆಯೆಂಬ ಹೊರಲಾರದ ಹೊರೆಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸಿತು.

ಪೌಷ್ಠಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಹೂಡಿಕೆಗಳು:

ಪೌಷ್ಟಿಕತೆ ವಿಚಾರದಲ್ಲಿ ಜಾಗತಿಕ ಗುರಿಗಳನ್ನು ತಲುಪುವುದು ಮತ್ತು ಅಪೌಷ್ಟಿಕತೆಯನ್ನು ಕೊನೆಗೊಳಿಸಲು ಅಗತ್ಯವಾದ ಕ್ಪಿಪ್ರ ಕ್ರಮಗಳ ಚಾಲನೆಯು ಎಲ್ಲಾ ವಲಯಗಳು ಮತ್ತು ದೇಶಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಇಲ್ಲಿ ಸರ್ಕಾರಗಳು ಅನುದಾನ ನೀಡುವುದು ಕೂಡ ಮುಖ್ಯವಾಗಿದೆ. ಇದೇ ವೇಳೆ, ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸರ್ಕಾರಗಳಿಗೆ ಸಂಪನ್ಮೂಲಗಳ ಕೊರತೆಯಿರುವಲ್ಲಿ ಇಂಟರ್​ನ್ಯಾಷನಲ್​ ಡೋನರ್​ ಸಮುದಾಯ ಕೈ ಜೋಡಿಸುವುದು ಅವಶ್ಯವಾಗಿದೆ.

ಪೌಷ್ಟಿಕ ಆಹಾರದ ವ್ಯವಸ್ಥೆ:

ಆರೋಗ್ಯಕರ ಮತ್ತು ಸುಸ್ಥಿರವಾಗಿ ಉತ್ಪತ್ತಿಯಾಗುವ ಆಹಾರವು ಎಲ್ಲರಿಗೂ ಹಂಚಿಕೆಯಾಗುವಂತೆ, ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು. ಮತ್ತು ಪೌಷ್ಟಿಕ ಆಹಾರ ಪ್ರತಿಯೊಬ್ಬರ ಆಯ್ಕೆ ಎಂಬುದನ್ನು ಎತ್ತಿ ಹಿಡಿಯಲು ಆಹಾರ ವ್ಯವಸ್ಥೆಯ ಎಲ್ಲಾ ಹಂತಗಳಲ್ಲೂ ಒಟ್ಟಾಗಿ ಕೆಲಸ ಮಾಡಬೇಕು.

ಆರೋಗ್ಯ ವ್ಯವಸ್ಥೆ:

ಜೀವ ಉಳಿಸಲು ಮತ್ತು ಆರೋಗ್ಯ ವೆಚ್ಚವನ್ನು ಕಡಿತಗೊಳಿಸಲು, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ಆರೋಗ್ಯ ಸೇವೆಯ ಸಹಯೋಗದೊಂದಿಗೆ ಕೆಲಸ ಮಾಡಬೇಕು.

ಪೌಷ್ಠಿಕಾಂಶ ಸಮನ್ವಯ, ಹಣಕಾಸು ಮತ್ತು ಹೊಣೆಗಾರಿಕೆ:

ಹೆಚ್ಚು ಅಪೌಷ್ಟಿಕತೆ ಪೀಡಿತ ಸಮುದಾಯಗಳು ಜನರಿಗೆಂದೇ ಸಂಪನ್ಮೂಲಗಳು ಮತ್ತು ಕಾರ್ಯಕ್ರಮಗಳನ್ನು ನಿರ್ದೇಶಿಸುವುದರ ಮೇಲೆ ಕೇಂದ್ರೀಕರಿಸಿದ ಪೂರಕ ಹಣ ಮತ್ತು ಹೊಣೆಗಾರಿಕೆ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ವಲಯಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು.

ಜಾಗತಿಕ ಪೌಷ್ಟಿಕಾಂಶ ವರದಿಯನ್ನು ಗಮನಿಸಿದರೆ, ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿದ್ದರೂ, ನಮ್ಮಲ್ಲಿ ಹಸಿವು ಮತ್ತು ತೀವ್ರತರನಾದ ಅಪೌಷ್ಟಿಕತೆಯನ್ನು ನಿವಾರಿಸಲಾಗದಿರುವುದು ಒಂದು ದುರಂತವೇ ಸರಿ. ಆದ್ದರಿಂದ ಸರ್ಕಾರವು ಅಗತ್ಯವಿರುವಷ್ಟು ಆಹಾರ ಮತ್ತು ಪೌಷ್ಟಿಕತೆಯನ್ನು ಖಾತರಿಪಡಿಸುವುದಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ಅದಕ್ಕಾಗಿ ಪೌಷ್ಟಿಕಾಂಶಗಳನ್ನು ಒದಗಿಸ ಬೇಕಾದ ಸರ್ಕಾರಿ ಮಧ್ಯಪ್ರವೇಶಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಹೂಡಿಕೆಯನ್ನು ಮಾಡಬೇಕು. ಆ ಮೂಲಕ ಮಾನವನ ಶಕ್ತಿ ಸಾಮರ್ಥ್ಯಗಳಿಗೆ ಜೀವ ತುಂಬಬೇಕು.

  • ಜಾಗತಿಕ ಮಟ್ಟದಲ್ಲಿ ಅಪೌಷ್ಟಿಕತೆಯ ಮಟ್ಟ ಮುಂದುವರಿಯುತ್ತಲೇ ಇದ್ದು, ಪೌಷ್ಟಿಕಾಂಶ ಸೂಚಕಗಳಲ್ಲಿ ಕೆಲವು ಸುಧಾರಣೆಗಳ ಹೊರತಾಗಿಯೂ, 2025 ರ ವೇಳೆಗೆ ಜಾಗತಿಕ ಪೌಷ್ಠಿಕಾಂಶದ ಗುರಿಗಳನ್ನು ಮುಟ್ಟಲು ಈ ಪ್ರಗತಿ ಸಾಕಾಗುವುದಿಲ್ಲ ಎಂದು 2020 ರ ಜಾಗತಿಕ ಪೌಷ್ಟಿಕಾಂಶ ವರದಿ ಕಳವಳ ಹೊರಹಾಕಿದೆ.
  • 5 ವರ್ಷದೊಳಗಿನ 149.0 ಮಿಲಿಯನ್ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಂಡಿದೆ. ಇವರಲ್ಲಿ ಶೇ. 49.5 ರಷ್ಟು ಮಕ್ಕಳು ದೈಹಿಕವಾಗಿ ದುರ್ಬಲರಾಗಿದ್ದಾರೆ ಮತ್ತು 40.1 ಮಿಲಿಯನ್ ಮಕ್ಕಳು ಅಧಿಕ ತೂಕ ಹೊಂದಿದ್ದಾರೆ. ಹಾಗೂ 677.6 ಮಿಲಿಯನ್​​ ನಷ್ಟು ಬೊಜ್ಜು ಹೊಂದಿರುವ ವಯಸ್ಕರೂ ಇದ್ದಾರೆ ಎಂದು ​ ವರದಿ ಮಾಡಿದೆ.
  • 9 ಜನರಲ್ಲಿ ಒಬ್ಬರಂತೆ - ವಿಶ್ವಾದ್ಯಂತ ಸುಮಾರು 820 ಮಿಲಿಯನ್ ಜನರು ಹಸಿವಿನಿಂದ ಅಥವಾ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2015 ರಿಂದಲೂ ಈ ಸಂಖ್ಯೆ ಹೆಚ್ಚಾಗುತ್ತಲೇ ಬಂದಿರುವುದು ದುರಂತ. ಅದರಲ್ಲೂ ದಕ್ಷಿಣ ಆಫ್ರಿಕಾ, ಪಶ್ಚಿಮ ಏಷ್ಯಾ,ಲ್ಯಾಟಿನ್​ ಅಮೆರಿಕಾದಲ್ಲಿ ಅಪೌಷ್ಟಿಕತೆಯ ದರ ಹೆಚ್ಚಾಗುತ್ತಲೇ ಇದೆ. ಸಂಘರ್ಷಗಳ ಪರಿಣಾಮ, ಆಹಾರದ ಅಭದ್ರತೆ, ಹವಾಮಾನ ವೈಪರೀತ್ಯ ಮತ್ತು ಆರ್ಥಿಕ ಹಿನ್ನಡೆ ಪರಿಣಾಮವಾಗಿ 53 ದೇಶಗಳಲ್ಲಿ ಸುಮಾರು 113 ಮಿಲಿಯನ್ ಜನರು ತೀವ್ರ ಹಸಿವಿನಿಂದ ಬಳಲುತ್ತಿದ್ದಾರೆ.
  • ವಿಶ್ವದ ಒಟ್ಟು ವಯಸ್ಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಅಧಿಕ ತೂಕ ಅಥವಾ ಬೊಜ್ಜು ಹೊಂದಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಈ ಪ್ರಮಾಣ ಹೆಚ್ಚಾಗುತ್ತಲೇ ಇದೆ.
  • ಬಾಲ್ಯಾವಸ್ಥೆಯಲ್ಲಿ ಬೆಳವಣಿಗೆಯ ಕುಂಠಿತವು ಜಾಗತಿಕವಾಗಿ 2012 ರಲ್ಲಿ 165.8 ದಶಲಕ್ಷದಿಂದ 2018 ರಲ್ಲಿ 149 ದಶಲಕ್ಷಕ್ಕೆ ಇಳಿದಿದೆ. ಇದು 10% ಸಾಪೇಕ್ಷ ಇಳಿಕೆ ಕಂಡಿರುವುದನ್ನು ಪ್ರತಿನಿಧಿಸುತ್ತದೆ.
  • ಶ್ರೀಮಂತ ದೇಶಗಳಿಗೆ ಹೋಲಿಸಿದರೆ ಬಡದೇಶಗಳಲ್ಲಿ ಈ ದರವು 10 ಪಟ್ಟು ಹೆಚ್ಚಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ, ಶ್ರೀಮಂತ ದೇಶಗಳಲ್ಲಿ ಅಧಿಕ ತೂಕ ಮತ್ತು ಬೊಜ್ಜು 5 ಪಟ್ಟು ಹೆಚ್ಚಾಗಿದೆ.
  • ಜಾಗತಿಕವಾಗಿ ಯಾವುದೇ ದೇಶ ಕೂಡ ಹೆಚ್ಚುತ್ತಿರುವ ಅಧಿಕ ತೂಕ ಮತ್ತು ಬೊಜ್ಜು ಪ್ರವೃತ್ತಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿಲ್ಲ ಎಂಬುದು ತಿಳಿದು ಬಂದಿದೆ.
  • ಬಡ ದೇಶಗಳಲ್ಲಿ ಪೌಷ್ಠಿಕ ಆಹಾರಗಳ ಬೆಲೆ ಹೆಚ್ಚಾಗಿದೆ.
  • ಗರ್ಭಾವಸ್ಥೆ ಮತ್ತು ಬಾಲ್ಯದಲ್ಲಿಯೇ ಕಳಪೆ ಆಹಾರ ನೀಡಿಕೆ, ಮಕ್ಕಳ ಜೀವನದ ಆರಂಭದಲ್ಲೇ ಪೌಷ್ಠಿಕಾಂಶದ ಕೊರತೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಇದು ಮಕ್ಕಳ ದೈಹಿಕ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಯ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿದೆ.
  • ಉತ್ತಮ ಹಾಗೂ ಆರೋಗ್ಯಕರ ಘನ ಆಹಾರಗಳ ದರಗಳು, ಮೃದು ಆಹಾರ ಪರಿಚಯ ಮತ್ತು ಕನಿಷ್ಠ ಆಹಾರ ವೈವಿಧ್ಯತೆಯ ಪರಿಚಯ ಬಡ ಕುಟುಂಬಗಳು, ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಅವಿದ್ಯಾವಂತ ತಾಯಿಯರು ಕೂಡ ಹೆಚ್ಚಾಗಿರುವುದು ಮಕ್ಕಳ ಬೆಳವಣಿಗೆ ಗಣನೀಯವಾಗಿ ಕಡಿಮೆಯಾಗಲು ಕಾರಣವಾಗುತ್ತಿದೆ.
  • ಜಾಗತಿಕ ಮತ್ತು ರಾಷ್ಟ್ರೀಯ ಮಾದರಿಗಳು ದೇಶಗಳು ಮತ್ತು ಸಮುದಾಯಗಳಲ್ಲಿನ ಅಸಮಾನತೆಗಳನ್ನು ಮರೆಮಾಚುತ್ತವೆ ಎಂದು ಹೊಸ ವಿಶ್ಲೇಷಣೆಯೊಂದು ವಿವರಿಸುತ್ತದೆ. ಇದು ದುರ್ಬಲ ಗುಂಪುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
  • ಕಳಪೆ ಆಹಾರ ಮತ್ತು ಅಪೌಷ್ಟಿಕತೆಯು ಕೇವಲ ವೈಯಕ್ತಿಕ ಆಯ್ಕೆಗಳ ವಿಷಯವಲ್ಲ
  • ಹೆಚ್ಚಿನ ಜನರು ಆರೋಗ್ಯಕರ ಆಹಾರ ಅಥವಾ ಗುಣಮಟ್ಟದ ಅಥವಾ ಪೌಷ್ಠಿಕಾಂಶದ ಆಹಾರ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಆಹಾರ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿ ಪೂರಕ ಬದಲಾವಣೆಗಳಾಗಬೇಕಿದೆ.
  • ನಾವು ಆಹಾರ ವ್ಯವಸ್ಥೆಯಲ್ಲಿನ ಅಸಮಾನತೆಗಳನ್ನು ಪರಿಹರಿಸಬೇಕು ಮತ್ತು ಆರೋಗ್ಯಕರ, ಸುಸ್ಥಿರ ಆಹಾರವನ್ನು ಎಲ್ಲರಿಗೂ ಸುಲಭವಾಗಿ ಮತ್ತು ಕೈಗೆಟುಕುವಂತೆ ಮಾಡಬೇಕು.
  • ಆರೋಗ್ಯ ವ್ಯವಸ್ಥೆಗಳಲ್ಲಿ ಪೌಷ್ಠಿಕಾಂಶವನ್ನು ಸಂಪೂರ್ಣವಾಗಿ ಸಂಯೋಜಿಸಬೇಕು ಮತ್ತು ಪೌಷ್ಠಿಕಾಂಶ ಭರಿತ ಆಹಾರ ಮತ್ತು ಅಪೌಷ್ಟಿಕತೆ ಹೋಗಲಾಡಿಸುವ ಮಾರ್ಗಗಳು ಸಾರ್ವತ್ರಿಕವಾಗಿ ಲಭ್ಯವಾಗುವಂತೆ ಮಾಡಬೇಕು.
  • ಈಗ ಕಾರ್ಯಾಚರಣೆಯ ಸಮಯ. ಅಪೌಷ್ಟಿಕತೆಯನ್ನು ಕೊನೆಗೊಳಿಸಲು , ಪ್ರಗತಿಯನ್ನು ತಡೆಹಿಡಿಯುವ ಅಡೆತಡೆಗಳನ್ನು ನಿವಾರಿಸಲು ಮಧ್ಯಸ್ಥಗಾರರು ಸಮನ್ವಯದಿಂದ ಕೆಲಸ ಮಾಡಬೇಕು
  • ಸಮಾನ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಆಹಾರ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸಬೇಕು.
  • ವಿಶೇಷವಾಗಿ ಹೆಚ್ಚು ಅಪೌಷ್ಠಿಕತೆಗೆ ಒಳಗಾಗಿರುವ ಸಮುದಾಯಗಳಲ್ಲಿ ಪೌಷ್ಠಿಕಾಂಶದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕು.
  • ಜಂಟಿ ಪ್ರಯತ್ನಗಳತ್ತ ಗಮನಹರಿಸಿದರೆ, ಜಾಗತಿಕ ಸವಾಲುಗಳು ಇದು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ತೋರಿಸುತ್ತದೆ.
  • ಪೌಷ್ಠಿಕಾಂಶ ಬದ್ಧತೆಗಳನ್ನು ನವೀಕರಿಸಲು ಮತ್ತು ವಿಸ್ತರಿಸಲು ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಪ್ರಮುಖ ಕ್ಷಣಗಳನ್ನು ನಿಯಂತ್ರಿಸಬೇಕು.
  • ಇಲ್ಲಿ ಭಾರತವು ಅಧಿಕ ತೂಕ ಹೊಂದಿರುವ ಮತ್ತು ಬೆಳವಣಿಗೆ ಕುಂಠಿತಗೊಂಡಿರುವ ವಿಭಾಗದಲ್ಲಿ ಬರುತ್ತದೆ.
  • ನೈಜೀರಿಯಾ, ಇಂಡೋನೇಷ್ಯಾ ಮತ್ತು ಭಾರತದಲ್ಲಿ ಬೆಳವಣಿಗೆ ಕ್ಷೀಣಿಸುವಿಕೆಯಲ್ಲಿ ಹೆಚ್ಚಿನ ಅಸಮಾನತೆಗಳು ಕಂಡುಬಂದಿವೆ. ಅಲ್ಲಿ ಸಮುದಾಯಗಳಲ್ಲಿ ಅಪೌಷ್ಟಿಕತೆಯ ಮಟ್ಟ ಭಾರತಕ್ಕಿಂತ ನಾಲ್ಕು ಪಟ್ಟು ಬದಲಾಗಿದೆ.
  • ಭಾರತದಲ್ಲಿ, ಗರ್ಭ ಧರಿಸುವ ವಯಸ್ಸಿನ ಪ್ರತೀ ಇಬ್ಬರು ಮಹಿಳೆಯರಲ್ಲಿ ಇಬ್ಬರು ರಕ್ತಹೀನತೆಯಿಂದ ಬಳಲುತ್ತಾರೆ. ಐದು ವರ್ಷದೊಳಗಿನ ಮೂವರು ಮಕ್ಕಳಲ್ಲಿ ಒಬ್ಬರು ಬೆಳವಣಿಗೆಯಲ್ಲಿ ಕುಂಠಿತಗೊಂಡಿದ್ದಾರೆ ಮತ್ತು ಐದು ವರ್ಷದೊಳಗಿನ ಒಂದು ಮಗುವಿನಲ್ಲಿ ದೈಹಿಕ ದುರ್ಬಲತೆ ಕಂಡು ಬರುತ್ತಿದ್ದು, ಈ ಅಂಶಗಳು ಬೆಳವಣಿಗೆ ಕುಂಠಿತದ ಅಸಮಾನತೆಗಳನ್ನು ಸ್ಪಷ್ಟಪಡಿಸುತ್ತವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಈ ಬೆಳವಣಿಗೆ ಕುಂಠಿತದ ಹರಡುವಿಕೆಯು ಶೇ. 10.1 ರಷ್ಟು ಹೆಚ್ಚಾಗಿದೆ.
  • ಅಧಿಕ ತೂಕ ಅಥವಾ ಬೊಜ್ಜಿನ ದರವು ವಯಸ್ಕ ಮಹಿಳೆಯರಲ್ಲಿ 20.7% ಮತ್ತು ವಯಸ್ಕ ಪುರುಷರಲ್ಲಿ 18.9% ರಷ್ಟಕ್ಕೆ ತಲುಪಿದೆ. ಕಡಿಮೆ ಪೌಷ್ಠಿಕಾಂಶ ಮತ್ತು ಅಧಿಕ ತೂಕ ಈ ಎರಡರಿಂದಾಗಿ ಭಾರತವು ಅಪೌಷ್ಟಿಕತೆಯ ಎರಡು ಗಾಢ ಸಮಸ್ಯೆಗಳನ್ನು ಎದುರಿಸುತ್ತಿದೆ.
  • ಭಾರತದಲ್ಲಿ ಇತ್ತೀಚಿನ ಟ್ರಾನ್ಸ್‌ಫಾರ್ಮೇಶನ್ ಆಫ್ ಆಸ್ಪಿರೇಷನಲ್ ಡಿಸ್ಟ್ರಿಕ್ಟ್ಸ್ ಇನ್​ಶಿಯೇಟಿವ್​ನ​ ಆರೋಗ್ಯವಂತರನ್ನು ಹೆಚ್ಚಿಸುವ ಪ್ರಯತ್ನವು, ಸಮನಾದ ಪೌಷ್ಠಿಕಾಂಶ ಸೇವೆಗಳ ಯಶಸ್ವಿ ಏಕೀಕರಣ ಮತ್ತು ವಿತರಣೆಯನ್ನು ಎತ್ತಿ ತೋರಿಸುತ್ತದೆ.
  • 2025 ರ ಜಾಗತಿಕ ಪೌಷ್ಟಿಕಾಂಶದ ಗುರಿ ಸಾಧಿಸುವಲ್ಲಿ ದೇಶದ ಪ್ರಗತಿಯ ಮಟ್ಟ
  • ಅಪೌಷ್ಟಿಕತೆಯನ್ನು ನಿಯಂತ್ರಿಸುವ ಕ್ರಮಗಳು:
  • ಆಹಾರ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿನ ಅನ್ಯಾಯಗಳನ್ನು ನಿಯಂತ್ರಿಸುವುದು.
  • ಕಳಪೆ ಆಹಾರ ಮತ್ತು ಅಪೌಷ್ಟಿಕತೆಯು ಪ್ರಸ್ತುತ ಸಾಮಾಜಿಕ ಸವಾಲುಗಳಲ್ಲಿ ದೊಡ್ಡದಾಗಿದೆ, ಇದು ಅಪಾರ ಆರೋಗ್ಯ, ಆರ್ಥಿಕ ಮತ್ತು ಪರಿಸರ ಹೊರೆಗಳಿಗೆ ಕಾರಣವಾಗುತ್ತದೆ.
  • ಮೊದಲಿಗೆ, ಉತ್ಪಾದನೆಯಿಂದ ಸೇವೆಯವರೆಗೆ ಆಹಾರ ವ್ಯವಸ್ಥೆಗಳಲ್ಲಿನ ಅಸಮಾನತೆಗಳನ್ನು ನಾವು ಪರಿಹರಿಸಬೇಕು. ಪ್ರಸ್ತುತ ಆಹಾರ ವ್ಯವಸ್ಥೆಗಳು ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಲು ಜನರಿಗೆ ಸಾಧ್ಯವಾಗುವುದಿಲ್ಲ. ಇಂದು ಬಹುಪಾಲು ಜನರು ಆರೋಗ್ಯಕರ ಆಹಾರವನ್ನು ಪ್ರವೇಶಿಸಲು ಅಥವಾ ಪಡೆಯಲು ಸಾಧ್ಯವಿಲ್ಲ.
  • ಅಸ್ತಿತ್ವದಲ್ಲಿರುವ ಕೃಷಿ ವ್ಯವಸ್ಥೆಗಳು ಹೆಚ್ಚಾಗಿ ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಹೆಚ್ಚು ವೈವಿಧ್ಯಮಯ ಮತ್ತು ಆರೋಗ್ಯಕರ ಆಹಾರವನ್ನು ಉತ್ಪಾದಿಸುವ ಬದಲು ಅಕ್ಕಿ, ಗೋಧಿ ಮತ್ತು ಮೆಕ್ಕೆಜೋಳದಂತಹ ಪ್ರಮುಖ ಧಾನ್ಯಗಳ ಮೇಲೆ ಕೇಂದ್ರೀಕರಿಸಿವೆ.
  • ಹವಾಮಾನ ತುರ್ತುಪರಿಸ್ಥಿತಿಯು ಆಹಾರ ವ್ಯವಸ್ಥೆಗಳನ್ನು ಪುನರ್​​ ವಿಮರ್ಶಿಸುವಲ್ಲಿ ನಿರ್ಣಾಯಕವಾಗಿಸುತ್ತದೆ.

ಆರೋಗ್ಯ ವ್ಯವಸ್ಥೆಗಳಲ್ಲಿನ ಪೌಷ್ಠಿಕಾಂಶದ ಅಸಮಾನತೆಗಳನ್ನು ಮೊದಲು ಪರಿಹರಿಸಬೇಕು.

ಎಲ್ಲಾ ರೀತಿಯ ಅಪೌಷ್ಟಿಕತೆ ಅನಾರೋಗ್ಯ ಮತ್ತು ಸಾವಿಗೆ ಪ್ರಮುಖ ಕಾರಣವಾಗಿದೆ, ಮತ್ತು ಆಹಾರ-ಸಂಬಂಧಿತ ಎನ್‌ಸಿಡಿಗಳ ತ್ವರಿತ ಏರಿಕೆಯು ಆರೋಗ್ಯ ವ್ಯವಸ್ಥೆಗಳ ಮೇಲೆ ಅಸಹನೀಯ ಒತ್ತಡವನ್ನುಂಟುಮಾಡುತ್ತಿದೆ. ಆದರೂ, ಹೆಚ್ಚಿನ ಜನರು ಅಪೌಷ್ಟಿಕತೆ ತಡೆಗಟ್ಟುವ ಅಥವಾ ಚಿಕಿತ್ಸೆಗಾಗಿ ಗುಣಮಟ್ಟದ ಪೌಷ್ಠಿಕಾಂಶ ಪಡೆಯಲು ಸಾಧ್ಯವಿಲ್ಲ. ವಿಶ್ವಾದ್ಯಂತ, ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 5 ವರ್ಷದೊಳಗಿನ 16.6 ಮಿಲಿಯನ್ ಮಕ್ಕಳಲ್ಲಿ ಕಾಲು ಭಾಗದಷ್ಟು ಜನರು ಮಾತ್ರ 2017 ರಲ್ಲಿ ಚಿಕಿತ್ಸೆಯನ್ನು ಪಡೆದರು. ಇದು ಅಪೌಷ್ಟಿಕತೆಯೆಂಬ ಹೊರಲಾರದ ಹೊರೆಯನ್ನು ಪರಿಹರಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸಿತು.

ಪೌಷ್ಠಿಕಾಂಶದ ಫಲಿತಾಂಶಗಳನ್ನು ಸುಧಾರಿಸುವ ಹೂಡಿಕೆಗಳು:

ಪೌಷ್ಟಿಕತೆ ವಿಚಾರದಲ್ಲಿ ಜಾಗತಿಕ ಗುರಿಗಳನ್ನು ತಲುಪುವುದು ಮತ್ತು ಅಪೌಷ್ಟಿಕತೆಯನ್ನು ಕೊನೆಗೊಳಿಸಲು ಅಗತ್ಯವಾದ ಕ್ಪಿಪ್ರ ಕ್ರಮಗಳ ಚಾಲನೆಯು ಎಲ್ಲಾ ವಲಯಗಳು ಮತ್ತು ದೇಶಗಳ ಸಾಮೂಹಿಕ ಜವಾಬ್ದಾರಿಯಾಗಿದೆ. ಇಲ್ಲಿ ಸರ್ಕಾರಗಳು ಅನುದಾನ ನೀಡುವುದು ಕೂಡ ಮುಖ್ಯವಾಗಿದೆ. ಇದೇ ವೇಳೆ, ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸರ್ಕಾರಗಳಿಗೆ ಸಂಪನ್ಮೂಲಗಳ ಕೊರತೆಯಿರುವಲ್ಲಿ ಇಂಟರ್​ನ್ಯಾಷನಲ್​ ಡೋನರ್​ ಸಮುದಾಯ ಕೈ ಜೋಡಿಸುವುದು ಅವಶ್ಯವಾಗಿದೆ.

ಪೌಷ್ಟಿಕ ಆಹಾರದ ವ್ಯವಸ್ಥೆ:

ಆರೋಗ್ಯಕರ ಮತ್ತು ಸುಸ್ಥಿರವಾಗಿ ಉತ್ಪತ್ತಿಯಾಗುವ ಆಹಾರವು ಎಲ್ಲರಿಗೂ ಹಂಚಿಕೆಯಾಗುವಂತೆ, ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕು. ಮತ್ತು ಪೌಷ್ಟಿಕ ಆಹಾರ ಪ್ರತಿಯೊಬ್ಬರ ಆಯ್ಕೆ ಎಂಬುದನ್ನು ಎತ್ತಿ ಹಿಡಿಯಲು ಆಹಾರ ವ್ಯವಸ್ಥೆಯ ಎಲ್ಲಾ ಹಂತಗಳಲ್ಲೂ ಒಟ್ಟಾಗಿ ಕೆಲಸ ಮಾಡಬೇಕು.

ಆರೋಗ್ಯ ವ್ಯವಸ್ಥೆ:

ಜೀವ ಉಳಿಸಲು ಮತ್ತು ಆರೋಗ್ಯ ವೆಚ್ಚವನ್ನು ಕಡಿತಗೊಳಿಸಲು, ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಮತ್ತು ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವ ಮೂಲಕ ಆರೋಗ್ಯ ಸೇವೆಯ ಸಹಯೋಗದೊಂದಿಗೆ ಕೆಲಸ ಮಾಡಬೇಕು.

ಪೌಷ್ಠಿಕಾಂಶ ಸಮನ್ವಯ, ಹಣಕಾಸು ಮತ್ತು ಹೊಣೆಗಾರಿಕೆ:

ಹೆಚ್ಚು ಅಪೌಷ್ಟಿಕತೆ ಪೀಡಿತ ಸಮುದಾಯಗಳು ಜನರಿಗೆಂದೇ ಸಂಪನ್ಮೂಲಗಳು ಮತ್ತು ಕಾರ್ಯಕ್ರಮಗಳನ್ನು ನಿರ್ದೇಶಿಸುವುದರ ಮೇಲೆ ಕೇಂದ್ರೀಕರಿಸಿದ ಪೂರಕ ಹಣ ಮತ್ತು ಹೊಣೆಗಾರಿಕೆ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಲು ಎಲ್ಲಾ ವಲಯಗಳು ಸಹಭಾಗಿತ್ವದಲ್ಲಿ ಕೆಲಸ ಮಾಡಬೇಕು.

ಜಾಗತಿಕ ಪೌಷ್ಟಿಕಾಂಶ ವರದಿಯನ್ನು ಗಮನಿಸಿದರೆ, ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿದ್ದರೂ, ನಮ್ಮಲ್ಲಿ ಹಸಿವು ಮತ್ತು ತೀವ್ರತರನಾದ ಅಪೌಷ್ಟಿಕತೆಯನ್ನು ನಿವಾರಿಸಲಾಗದಿರುವುದು ಒಂದು ದುರಂತವೇ ಸರಿ. ಆದ್ದರಿಂದ ಸರ್ಕಾರವು ಅಗತ್ಯವಿರುವಷ್ಟು ಆಹಾರ ಮತ್ತು ಪೌಷ್ಟಿಕತೆಯನ್ನು ಖಾತರಿಪಡಿಸುವುದಕ್ಕೆ ಅತ್ಯಂತ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು. ಅದಕ್ಕಾಗಿ ಪೌಷ್ಟಿಕಾಂಶಗಳನ್ನು ಒದಗಿಸ ಬೇಕಾದ ಸರ್ಕಾರಿ ಮಧ್ಯಪ್ರವೇಶಗಳಿಗೆ ಎಷ್ಟು ಅಗತ್ಯವಿದೆಯೋ ಅಷ್ಟು ಹೂಡಿಕೆಯನ್ನು ಮಾಡಬೇಕು. ಆ ಮೂಲಕ ಮಾನವನ ಶಕ್ತಿ ಸಾಮರ್ಥ್ಯಗಳಿಗೆ ಜೀವ ತುಂಬಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.