ETV Bharat / bharat

ಫೇಸ್​ಬುಕ್​​ನಲ್ಲಿ ಲವ್​​...ಮನೆ ಬಿಟ್ಟು ಹೋಗಿ ಪಾರ್ಶ್ವವಾಯು ಪೀಡಿತ ವ್ಯಕ್ತಿ ಮದುವೆಯಾದ ಯುವತಿ!

ಮನೆಯಲ್ಲಿ ಬೇಡ ಎಂದು ಹೇಳಿದರೂ ಹಠ ಹಿಡಿದ ಯುವತಿಯೊಬ್ಬಳು ಪ್ರೀತಿ ಬಲೆಯಲ್ಲಿ ಬಿದ್ದು ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ನಡೆದಿದೆ.

author img

By

Published : Mar 5, 2020, 8:20 AM IST

Girl meets paralysed youth on Facebook
Girl meets paralysed youth on Facebook

ತ್ರಿಶೂರ್​(ಕೇರಳ): ಎಲ್ಲವೂ ಸರಿಯಾಗಿದ್ದು, ಜೀವನ ನಡೆಸುವ ವ್ಯಕ್ತಿಯೊಂದಿಗೆ ಮದುವೆಯಾಗಲು ಇಂದಿನ ಯುವತಿಯರು ಹಿಂದೆ ಮುಂದೆ ನೋಡ್ತಾರೆ. ಅಂತಹುದ್ದರಲ್ಲಿ ಇಲ್ಲೊಬ್ಬ ಯುವತಿ ಪಾರ್ಶ್ವವಾಯು ಪೀಡಿತ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದೆ.

ಫೇಸ್​ಬುಕ್​​ನಲ್ಲಿ ಲವ್, ಮನೆ ಬಿಟ್ಟು ಹೋಗಿ ಮದುವೆ

ಕೇರಳದ ತ್ರಿಶೂರ್​ದಲ್ಲಿ ಈ ಘಟನೆ ನಡೆದಿದೆ. ಕಳೆದ ಆರು ವರ್ಷಗಳ ಹಿಂದೆ ತೇಜ್​ಕಾಡ್​ದಲ್ಲಿ ನಡೆದಿದ್ದ ಬೈಕ್​ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಂದಿನಿಂದ ಗಾಲಿ ಕುರ್ಚಿ ಮೇಲೆ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದರು. ಮೂಲಭೂತ ಅವಶ್ಯಕತೆಗಾಗಿ ಇನ್ನೊಬ್ಬರನ್ನ ಅವಲಂಬಿಸಬೇಕಾಗಿತ್ತು. ಇಷ್ಟಾದರೂ ಹೊರಗಡೆ ಪ್ರಪಂಚದಿಂದ ವಂಚಿತರಾಗದೇ ಹಬ್ಬ- ಜಾತ್ರೆಗಳಲ್ಲಿ ಭಾಗಿಯಾಗುತ್ತಿದ್ದರು. ಅದೇ ವಿಡಿಯೋವೊಂದನ್ನ ತಮ್ಮ ಫೇಸ್​ಬುಕ್​​ನಲ್ಲಿ ಹಾಕಿಕೊಂಡಿದ್ದರು. ಅದನ್ನ ನೋಡಿರುವ ತಿರುವನಂತಪುರಂನ ಶಾಹ್ನಾ ಎಂಬ ಯುವತಿ ಆತನ ಮೊಬೈಲ್​ ನಂಬರ್​ ಪಡೆದುಕೊಂಡು ಫೋನ್​ ಮಾಡಿದ್ದಾಳೆ. ಕೆಲ ದಿನಗಳ ಕಾಲ ಆತನೊಂದಿಗೆ ಮಾತನಾಡಿರುವ ಯುವತಿ ತದನಂತರ ಮದುವೆಯಾಗಬೇಕೆಂಬ ಆಸೆ ಹೊರಹಾಕಿದ್ದಾಳೆ.

ಆದರೆ, ತನ್ನ ಪರಿಸ್ಥಿತಿ ಬಗ್ಗೆ ಪ್ರಣವ್​ ಮಾಹಿತಿ ನೀಡಿದ್ದಾನೆ. ಇಷ್ಟಾದರೂ ಆತನನ್ನು ಮೆಚ್ಚಿಕೊಂಡಿರುವ ಯುವತಿ ಮದುವೆಯಾಗುವ ಹಠ ಹಿಡಿದಿದ್ದಾಳೆ. ಇದಾದ ಬಳಿಕ ಇದೇ ವಿಷಯವನ್ನ ತನ್ನ ಕುಟುಂಬಸ್ಥರ ಮುಂದೆ ಹೇಳಿದ್ದು, ಅವರು ಬೆಚ್ಚಿಬಿದ್ದಿದ್ದಾರೆ. ಇಷ್ಟಾದರೂ ಹುಡುಗನ ಭೇಟಿಯಾಗಿರುವ ಶಾಹ್ನಾ ಕೊಡುಂಗಲ್ಲೂರಿನ ದೇವಸ್ಥಾನವೊಂದರಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.

ತ್ರಿಶೂರ್​(ಕೇರಳ): ಎಲ್ಲವೂ ಸರಿಯಾಗಿದ್ದು, ಜೀವನ ನಡೆಸುವ ವ್ಯಕ್ತಿಯೊಂದಿಗೆ ಮದುವೆಯಾಗಲು ಇಂದಿನ ಯುವತಿಯರು ಹಿಂದೆ ಮುಂದೆ ನೋಡ್ತಾರೆ. ಅಂತಹುದ್ದರಲ್ಲಿ ಇಲ್ಲೊಬ್ಬ ಯುವತಿ ಪಾರ್ಶ್ವವಾಯು ಪೀಡಿತ ಯುವಕನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅಪರೂಪದ ಘಟನೆ ನಡೆದಿದೆ.

ಫೇಸ್​ಬುಕ್​​ನಲ್ಲಿ ಲವ್, ಮನೆ ಬಿಟ್ಟು ಹೋಗಿ ಮದುವೆ

ಕೇರಳದ ತ್ರಿಶೂರ್​ದಲ್ಲಿ ಈ ಘಟನೆ ನಡೆದಿದೆ. ಕಳೆದ ಆರು ವರ್ಷಗಳ ಹಿಂದೆ ತೇಜ್​ಕಾಡ್​ದಲ್ಲಿ ನಡೆದಿದ್ದ ಬೈಕ್​ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಂದಿನಿಂದ ಗಾಲಿ ಕುರ್ಚಿ ಮೇಲೆ ಕುಳಿತುಕೊಂಡು ಜೀವನ ಸಾಗಿಸುತ್ತಿದ್ದರು. ಮೂಲಭೂತ ಅವಶ್ಯಕತೆಗಾಗಿ ಇನ್ನೊಬ್ಬರನ್ನ ಅವಲಂಬಿಸಬೇಕಾಗಿತ್ತು. ಇಷ್ಟಾದರೂ ಹೊರಗಡೆ ಪ್ರಪಂಚದಿಂದ ವಂಚಿತರಾಗದೇ ಹಬ್ಬ- ಜಾತ್ರೆಗಳಲ್ಲಿ ಭಾಗಿಯಾಗುತ್ತಿದ್ದರು. ಅದೇ ವಿಡಿಯೋವೊಂದನ್ನ ತಮ್ಮ ಫೇಸ್​ಬುಕ್​​ನಲ್ಲಿ ಹಾಕಿಕೊಂಡಿದ್ದರು. ಅದನ್ನ ನೋಡಿರುವ ತಿರುವನಂತಪುರಂನ ಶಾಹ್ನಾ ಎಂಬ ಯುವತಿ ಆತನ ಮೊಬೈಲ್​ ನಂಬರ್​ ಪಡೆದುಕೊಂಡು ಫೋನ್​ ಮಾಡಿದ್ದಾಳೆ. ಕೆಲ ದಿನಗಳ ಕಾಲ ಆತನೊಂದಿಗೆ ಮಾತನಾಡಿರುವ ಯುವತಿ ತದನಂತರ ಮದುವೆಯಾಗಬೇಕೆಂಬ ಆಸೆ ಹೊರಹಾಕಿದ್ದಾಳೆ.

ಆದರೆ, ತನ್ನ ಪರಿಸ್ಥಿತಿ ಬಗ್ಗೆ ಪ್ರಣವ್​ ಮಾಹಿತಿ ನೀಡಿದ್ದಾನೆ. ಇಷ್ಟಾದರೂ ಆತನನ್ನು ಮೆಚ್ಚಿಕೊಂಡಿರುವ ಯುವತಿ ಮದುವೆಯಾಗುವ ಹಠ ಹಿಡಿದಿದ್ದಾಳೆ. ಇದಾದ ಬಳಿಕ ಇದೇ ವಿಷಯವನ್ನ ತನ್ನ ಕುಟುಂಬಸ್ಥರ ಮುಂದೆ ಹೇಳಿದ್ದು, ಅವರು ಬೆಚ್ಚಿಬಿದ್ದಿದ್ದಾರೆ. ಇಷ್ಟಾದರೂ ಹುಡುಗನ ಭೇಟಿಯಾಗಿರುವ ಶಾಹ್ನಾ ಕೊಡುಂಗಲ್ಲೂರಿನ ದೇವಸ್ಥಾನವೊಂದರಲ್ಲಿ ನಡೆದ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.