ETV Bharat / bharat

ರೈತ ಆಂದೋಲನ: ದೆಹಲಿ ಗಡಿಯಲ್ಲಿ ಮಧ್ಯರಾತ್ರಿಯವರೆಗೂ ಇಂಟರ್​ನೆಟ್​​ ಬಂದ್​​

author img

By

Published : Feb 6, 2021, 7:09 PM IST

ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿ ತಪ್ಪಿಸುವ ಹಿತದೃಷ್ಟಿಯಿಂದ ರೈತರ ಪ್ರತಿಭಟನೆಯ ಸ್ಥಳದಲ್ಲಿ ಇಂಟರ್​​​ನೆಟ್ ಬಂದ್ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ghazipur-and-tikri-borders-of-delhi
ದೆಹಲಿ ಗಡಿಯಲ್ಲಿ ಮಧ್ಯರಾತ್ರಿಯವರೆಗೂ ಇಂಟರ್​ನೆಟ್​​ ಬಂದ್​​

ನವದೆಹಲಿ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ದೆಹಲಿಯ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಇಂಟರ್​​​​​ನೆಟ್​ ಸೇವೆಗಳನ್ನು ಗೃಹ ಸಚಿವಾಲಯ ಸ್ಥಗಿತಗೊಳಿಸಿದೆ. ರೈತರ 'ಚಕ್ಕಾ ಜಾಮ್' ಕರೆಯ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯವರೆಗೆ 24 ಗಂಟೆಗಳ ಕಾಲ ಇಂಟರ್​​​ನೆಟ್ ಸ್ಥಗಿತಗೊಳಿಸಿದೆ.

ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ಅಂತರ್ಜಾಲ ಸೇವೆ ರದ್ದು ಮಾಡುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಂಹೆಚ್​ಎ ತಿಳಿಸಿದೆ.

ವಿವಿಧ ರೈತ ಸಂಘಟನೆಗಳು ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಚಕ್ಕಾ ಜಾಮ್​ (ಹೆದ್ದಾರಿ ಬಂದ್) ಮಾಡಿ ಪ್ರತಿಭಟಿಸಲು ಕರೆ ನೀಡಿದ್ದವು.

ಇದನ್ನೂ ಓದಿ: ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣ: ಅರ್ನಬ್​ ಗೋಸ್ವಾಮಿಗೆ ಅಲಿಬಾಗ್ ಕೋರ್ಟ್​ ಚಾಟಿ..!

ನವದೆಹಲಿ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ದೆಹಲಿಯ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಗಳಲ್ಲಿ ಇಂಟರ್​​​​​ನೆಟ್​ ಸೇವೆಗಳನ್ನು ಗೃಹ ಸಚಿವಾಲಯ ಸ್ಥಗಿತಗೊಳಿಸಿದೆ. ರೈತರ 'ಚಕ್ಕಾ ಜಾಮ್' ಕರೆಯ ಹಿನ್ನೆಲೆಯಲ್ಲಿ ಶನಿವಾರ ರಾತ್ರಿಯವರೆಗೆ 24 ಗಂಟೆಗಳ ಕಾಲ ಇಂಟರ್​​​ನೆಟ್ ಸ್ಥಗಿತಗೊಳಿಸಿದೆ.

ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಮತ್ತು ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ತಪ್ಪಿಸುವ ಹಿತದೃಷ್ಟಿಯಿಂದ ಸಿಂಘು, ಗಾಜಿಪುರ ಮತ್ತು ಟಿಕ್ರಿ ಗಡಿಯಲ್ಲಿ ಅಂತರ್ಜಾಲ ಸೇವೆ ರದ್ದು ಮಾಡುವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಂಹೆಚ್​ಎ ತಿಳಿಸಿದೆ.

ವಿವಿಧ ರೈತ ಸಂಘಟನೆಗಳು ಇಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಚಕ್ಕಾ ಜಾಮ್​ (ಹೆದ್ದಾರಿ ಬಂದ್) ಮಾಡಿ ಪ್ರತಿಭಟಿಸಲು ಕರೆ ನೀಡಿದ್ದವು.

ಇದನ್ನೂ ಓದಿ: ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣ: ಅರ್ನಬ್​ ಗೋಸ್ವಾಮಿಗೆ ಅಲಿಬಾಗ್ ಕೋರ್ಟ್​ ಚಾಟಿ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.