ETV Bharat / bharat

ಭೀಕರ ರಸ್ತೆ ಅಪಘಾತ: ಹುಟ್ಟುಹಬ್ಬದ ಸಂತೋಷಕೂಟದ ಬೆನ್ನಲ್ಲೇ ಐವರು ಯುವಕರ ದುರ್ಮರಣ

author img

By

Published : Sep 2, 2020, 10:51 AM IST

ಕಾರೊಂದು ಮರಳಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಹುಟ್ಟುಹಬ್ಬದ ಸಂತೋಷಕೂಟದಿಂದ ಬರುತ್ತಿದ್ದ ಐವರು ಸ್ಥಳದಲ್ಲೇ ಅಸುನೀಗಿದ್ದಾರೆ. ವಾರಂಗಲ್ ಗ್ರಾಮೀಣ ಜಿಲ್ಲೆಯ ದಮರ ಮಂಡಲದ ಪೆಸರಕೊಂಡ ಕ್ರಾಸ್ ಬಳಿ ಈ ಅಪಘಾತ ಸಂಭವಿಸಿದೆ.

ROAD ACCIDENT IN WARANGAL RURAL DISTRICT
ಭೀಕರ ರಸ್ತೆ ಅಪಘಾತ

ವಾರಂಗಲ್​(ತೆಲಂಗಾಣ): ವಾರಂಗಲ್ ಗ್ರಾಮೀಣ ಜಿಲ್ಲೆಯ ದಮರ ಮಂಡಲದ ಪೆಸರಕೊಂಡ ಕ್ರಾಸ್ ಬಳಿ ಸೋಮವಾರ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ಪೋಚಮ್ಮ ಮೈದಾನದ ಐವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತದಲ್ಲಿ ಐವರು ದುರ್ಮರಣ

ವೇಗವಾಗಿ ಕಾರು ಚಲಾಯಿಸುತ್ತಿದ್ದ ಪರಿಣಾಮ ಮುಂದೆ ಬರುತ್ತಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದಿದೆ. ಹುಟ್ಟುಹಬ್ಬದ ಸಂತೋಷಕೂಟದಿಂದ ಬರುತ್ತಿದ್ದ ಐವರು ಅಪಘಾತದಲ್ಲಿ ಅಸುನೀಗಿದ್ದಾರೆ. ವಾರಂಗಲ್ ನಗರ ಜಿಲ್ಲೆಯ ಪೋಚಮ್ಮ ಮೈದಾನದ ಪವನ್, ರಾಕೇಶ್, ರೋಹಿತ್, ಸಬೀರ್, ಚಂದು ಎಂಬ ಐವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೃತದೇಹಗಳನ್ನು ಎಂಜಿಎಂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ವಾರಂಗಲ್​(ತೆಲಂಗಾಣ): ವಾರಂಗಲ್ ಗ್ರಾಮೀಣ ಜಿಲ್ಲೆಯ ದಮರ ಮಂಡಲದ ಪೆಸರಕೊಂಡ ಕ್ರಾಸ್ ಬಳಿ ಸೋಮವಾರ ಮಧ್ಯರಾತ್ರಿ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಜಿಲ್ಲೆಯ ಪೋಚಮ್ಮ ಮೈದಾನದ ಐವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಭೀಕರ ರಸ್ತೆ ಅಪಘಾತದಲ್ಲಿ ಐವರು ದುರ್ಮರಣ

ವೇಗವಾಗಿ ಕಾರು ಚಲಾಯಿಸುತ್ತಿದ್ದ ಪರಿಣಾಮ ಮುಂದೆ ಬರುತ್ತಿದ್ದ ಮರಳಿನ ಲಾರಿಗೆ ಡಿಕ್ಕಿ ಹೊಡೆದಿದೆ. ಹುಟ್ಟುಹಬ್ಬದ ಸಂತೋಷಕೂಟದಿಂದ ಬರುತ್ತಿದ್ದ ಐವರು ಅಪಘಾತದಲ್ಲಿ ಅಸುನೀಗಿದ್ದಾರೆ. ವಾರಂಗಲ್ ನಗರ ಜಿಲ್ಲೆಯ ಪೋಚಮ್ಮ ಮೈದಾನದ ಪವನ್, ರಾಕೇಶ್, ರೋಹಿತ್, ಸಬೀರ್, ಚಂದು ಎಂಬ ಐವರು ಯುವಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮೃತದೇಹಗಳನ್ನು ಎಂಜಿಎಂ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.