ಚಂಡೀಗಢ: ಲಾಕ್ಡೌನ್ ವೇಳೆ ವಾಹನದಲ್ಲಿ ಚಲಾಯಿಸುತ್ತಿದ್ದವರ ಬಳಿ ಪಾಸ್ ಕೇಳಿದ್ದಕ್ಕಾಗಿ ಎಎಸ್ಐ ಕೈ ಕತ್ತರಿಸಿ, ಮತ್ತಿಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜೊತೆಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಇಂದು ನಸುಕಿನ ಜಾವ ಚೆಕ್ಪೋಸ್ಟ್ ಬಳಿ ಎಎಸ್ಐ ಹರ್ಜೀತ್ ಸಿಂಗ್ ಸೇರಿದಂತೆ ಅನೇಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವಾಹನದಲ್ಲಿ ಬಂದ ಐವರು ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬ್ಯಾರಿಕೇಡ್ ಮುರಿದು ಪರಾರಿಯಾಗಿದ್ದರು. ಇವರೆಲ್ಲರೂ ಸಿಖ್ನ ನಿಹಂಗರು ಎಂದು ಗುರುತಿಸಲಾಗಿತ್ತು.
ವಾಹನ ತಡೆದಿದ್ದಕ್ಕೆ ಎಸ್ಐ ಕೈ ಕತ್ತರಿಸಿ, ಪೇದೆಗಳ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ!
ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಪತ್ತೆಗಾಗಿ ಪಂಜಾಬ್ ಪೊಲೀಸರು ಬಲೆ ಬೀಸಿದ್ದರು. ಇದೀಗ ಐವರು ನಿಹಂಗರು ಸೇರಿದಂತೆ 11 ಮಂದಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ಕೈಗೆ ಪಟಿಯಾಲದಲ್ಲಿ ಯಶಸ್ವಿ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.