ನಬ್ರಾಂಗ್ಪುರ್ /ಒಡಿಶಾ: ತಂದೆಯನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ಸಿಗದ ಹಿನ್ನೆಲೆ ಮಗ ತನ್ನ ಮೃತ ತಂದೆಯ ಶವವನ್ನು ಬೈಕ್ನಲ್ಲೇ ಕೊಂಡೊಯ್ದ ಘಟನೆ ಒಡಿಶಾದ ನಬ್ರಾಂಗ್ಪುರ್ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ನಬ್ರಾಂಗ್ಪುರ್ ಜಿಲ್ಲೆಯ ಉಮರ್ಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೇರೆ ಊರಿಗೆ ಕೆಲಸಕ್ಕೆಂದು ಹೋಗುತ್ತಿದ್ದ ಬಲಿಶಾಂತ ಎಂಬುವರು ಕಾಯಿಲೆಯಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರಗೆ ಸೇರಿಸಲು ಎಷ್ಟೇ ಫೋನ್ ಮಾಡಿದರೂ ಆ್ಯಂಬ್ಯುಲೆನ್ಸ್ ಬರಲೇ ಇಲ್ಲ. ಈ ಹಿನ್ನೆಲೆ ನಿನ್ನೆ ರಾತ್ರಿ ಅಲ್ಲಿಯೇ ಸಾವನ್ನಪ್ಪಿದ್ದರು. ಹೀಗಾಗಿ ಸ್ನೇಹಿತರ ಸಹಾಯದೊಂದಿಗೆ ಮೃತ ಬಲಿಶಾಂತ ಪುತ್ರ ತಂದೆಯ ಶವವನ್ನು ಬೈಕ್ನಲ್ಲಿ ಕೊಂಡೊಯ್ದಿದ್ದಾನೆ.
ಒಡಿಶಾದಲ್ಲಿ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಈ ಹಿಂದೆಯೂ ಕೂಡ ಆ್ಯಂಬುಲೆನ್ಸ್ ಅಲಭ್ಯದಿಂದಾಗಿ ಇಲ್ಲಿನ ಜನ ಸಾಕಷ್ಟು ತೊಂದರೆ ಅನುಭವಿಸಿರೋದು ವರದಿಯಾಗಿತ್ತು.