ETV Bharat / bharat

ರಾತ್ರೋರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ತಂದೆ - ಮಗನ ಮೇಲೆ ಗುಂಡಿನ ದಾಳಿ

ಬಿಹಾರದ ಉಜಿಯಾರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಸರಿ ಗ್ರಾಮದಲ್ಲಿ ಭೀಕರ ಘಟನೆ ನಡೆದಿದೆ. ಮಲಗಿದ್ದ ತಂದೆ - ಮಗನ ಮೇಲೆ ದುಷ್ಟರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

author img

By

Published : Aug 21, 2020, 12:53 PM IST

ತಂದೆ-ಮಗನ ಮೇಲೆ ಗುಂಡಿನ ದಾಳಿ
ತಂದೆ-ಮಗನ ಮೇಲೆ ಗುಂಡಿನ ದಾಳಿ

ಸಮಸ್ತಿಪುರ(ಬಿಹಾರ): ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ತಂದೆ ಮಗನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಉಜಿಯಾರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಸರಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂದೆ-ಮಗನ ಮೇಲೆ ಗುಂಡಿನ ದಾಳಿ

ಮಹೇಸರಿ ಗ್ರಾಮದ ನಿವಾಸಿ ವೀರೇಂದ್ರ ಪಾಸ್ವಾನ್, ನಾಗರಪಂಚಮಿ ದಿನದಂದು ಗ್ರಾಮದ ಕೆಲವು ಯುವಕರೊಂದಿಗೆ ಗಲಾಟೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾದ ದುಷ್ಕರ್ಮಿಗಳು ರಾತ್ರೋರಾತ್ರಿ ಮನೆಗೆ ನುಗ್ಗಿ ಮಲಗಿದ್ದ ವೀರೇಂದ್ರ ಪಾಸ್ವಾನ್​ ಹಾಗೂ ಆತನ ಮಗ ರೂಪೇಶ್​ ಮೇಲೆ ದಾಳಿ ನಡೆಸಿದ್ದಾರೆ.

ಘಟನೆಯ ವೇಳೆ ಗುಂಡಿನ ಶಬ್ದ ಕೇಳಿ ಹೊರಬಂದ ಗ್ರಾಮಸ್ಥರು, ಚಿಕಿತ್ಸೆಗಾಗಿ ತಂದೆ ಮಗನನ್ನು ಸದರ್​ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅದಾಗಲೇ ವೀರೇಂದ್ರ ಪಾಸ್ವಾನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ರೂಪೇಶ್​ಗೆ ಪ್ರಥಮ ಚಿಕಿತ್ಸೆ ನೀಡಿ ಡಿಎಂಸಿಎಚ್‌ಗೆ ಕಳುಹಿಸಲಾಯಿತು.

ಘಟನೆಯಿಂದ ಪಾಸ್ವಾನ್​ ಕುಟುಂಬಸ್ಥರು ಕಂಗಾಲಾಗಿದ್ದು, ಅಪರಾಧಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಸಮಸ್ತಿಪುರ(ಬಿಹಾರ): ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ತಂದೆ ಮಗನ ಮೇಲೆ ನಿರ್ದಾಕ್ಷಿಣ್ಯವಾಗಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ಉಜಿಯಾರ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಸರಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ತಂದೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಂದೆ-ಮಗನ ಮೇಲೆ ಗುಂಡಿನ ದಾಳಿ

ಮಹೇಸರಿ ಗ್ರಾಮದ ನಿವಾಸಿ ವೀರೇಂದ್ರ ಪಾಸ್ವಾನ್, ನಾಗರಪಂಚಮಿ ದಿನದಂದು ಗ್ರಾಮದ ಕೆಲವು ಯುವಕರೊಂದಿಗೆ ಗಲಾಟೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾದ ದುಷ್ಕರ್ಮಿಗಳು ರಾತ್ರೋರಾತ್ರಿ ಮನೆಗೆ ನುಗ್ಗಿ ಮಲಗಿದ್ದ ವೀರೇಂದ್ರ ಪಾಸ್ವಾನ್​ ಹಾಗೂ ಆತನ ಮಗ ರೂಪೇಶ್​ ಮೇಲೆ ದಾಳಿ ನಡೆಸಿದ್ದಾರೆ.

ಘಟನೆಯ ವೇಳೆ ಗುಂಡಿನ ಶಬ್ದ ಕೇಳಿ ಹೊರಬಂದ ಗ್ರಾಮಸ್ಥರು, ಚಿಕಿತ್ಸೆಗಾಗಿ ತಂದೆ ಮಗನನ್ನು ಸದರ್​ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅದಾಗಲೇ ವೀರೇಂದ್ರ ಪಾಸ್ವಾನ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ರೂಪೇಶ್​ಗೆ ಪ್ರಥಮ ಚಿಕಿತ್ಸೆ ನೀಡಿ ಡಿಎಂಸಿಎಚ್‌ಗೆ ಕಳುಹಿಸಲಾಯಿತು.

ಘಟನೆಯಿಂದ ಪಾಸ್ವಾನ್​ ಕುಟುಂಬಸ್ಥರು ಕಂಗಾಲಾಗಿದ್ದು, ಅಪರಾಧಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇನ್ನು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.