ETV Bharat / bharat

ಶ್ರೀನಗರಕ್ಕೆ ತೆರಳಿದ್ದ ರಾಹುಲ್​ ಗಾಂಧಿ ನಿಯೋಗ ವಾಪಸ್​​... ವಿಮಾನ ನಿಲ್ದಾಣದಿಂದಲೇ ಮರಳಿದ ಟೀಂ!

author img

By

Published : Aug 24, 2019, 5:52 PM IST

Updated : Aug 24, 2019, 6:27 PM IST

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಇದೇ ಮೊದಲ ಬಾರಿಗೆ ರಾಹುಲ್​ ಗಾಂಧಿ ನೇತೃತ್ವದ ನಿಯೋಗ ಕಣಿವೆ ನಾಡಿಗೆ ಭೇಟಿ ನೀಡಲು ಮುಂದಾಗಿತ್ತು. ಆದರೆ ಶ್ರೀನಗರ ಏರ್​ಪೋರ್ಟ್​​ನಿಂದ ಅವರನ್ನ ದೆಹಲಿಗೆ ವಾಪಸ್​ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ರಾಹುಲ್​ ಗಾಂಧಿ ಟೀಂ

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧತಿ ಬಳಿಕ ಕಣಿವೆ ನಾಡಿಗೆ ಪ್ರಯಾಣ ಬೆಳೆಸಿದ್ದ ರಾಹುಲ್​ ಗಾಂಧಿ ನೇತೃತ್ವದ ತಂಡ ಶ್ರೀನಗರ ವಿಮಾನ ನಿಲ್ದಾಣದಿಂದ ದೆಹಲಿಯತ್ತ ವಾಪಸ್​ ಆಗಿದೆ ಎಂದು ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.

ರಾಹುಲ್​ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕರಾದ ಡಿ. ರಾಜಾ, ಶರದ್​ ಯಾದವ್​, ಮಜೀನ್​ ಮೆನನ್​ ಮತ್ತು ಮನೋಜ್​ ಜಾ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಶ್ರೀನಗರದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಇವರನ್ನ ಮುಂದೆ ಪ್ರಯಾಣ ಬೆಳೆಸದಂತೆ ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ರಾಹುಲ್​ ಗಾಂಧಿ ಟೀಂ

ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಶ್ರೀನಗರಕ್ಕೆ ಹೊರಟ ರಾಹುಲ್ ಗಾಂಧಿ!

ಯಾವುದೇ ಕಾರಣಕ್ಕೂ ರಾಜಕೀಯ ಮುಖಂಡರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಬಾರದು. ಇದರಿಂದ ಇಲ್ಲಿನ ಜನರು ತೊಂದರೆಗೆ ಒಳಗಾಗುತ್ತಾರೆ ಎಂದು ಜಮ್ಮು-ಕಾಶ್ಮೀರ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್​ ಮಾಡಿತ್ತು. ಈ ನಡುವೆಯೂ ವಿರೋಧ ಪಕ್ಷಗಳ ನಿಯೋಗ ಇಲ್ಲಿನ ಜನರೊಂದಿಗೆ ವಾಸ್ತವ ಪರಿಸ್ಥಿತಿ ಚರ್ಚೆ ನಡೆಸಲು ಕಣಿವೆ ರಾಜ್ಯಕ್ಕೆ ತೆರಳಿದೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಅಲ್ಲಿ ಹಿಂಸಾತ್ಮಕ ಕೃತ್ಯ ಹೆಚ್ಚಾಗಿ ನಡೆಯುತ್ತಿದ್ದು, ಪ್ರತಿದಿನ ಸಾವು-ನೋವು ಸಂಭವಿಸುತ್ತಿವೆ ಎಂಬ ಮಾತನ್ನು ಈ ಹಿಂದೆ ಖುದ್ದಾಗಿ ರಾಹುಲ್​ ಗಾಂಧಿ ಹೇಳಿದ್ದರು. ಇದರ ಮಧ್ಯೆ ತಾವು ಕಣಿವೆ ನಾಡಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದರು. ಇನ್ನು ಶ್ರೀನಗರದಿಂದ ಈ ನಿಯೋಗವನ್ನ ವಾಪಸ್​ ಕಳಿಸಿರುವುದಕ್ಕಾಗಿ ಗುಲಾಮ್​ ನಬಿ ಆಜಾದ್​,ಶರದ್​ ಯಾದವ್​, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆರ್ಟಿಕಲ್​ 370 ರದ್ದುಗೊಳ್ಳುತ್ತಿದ್ದಂತೆ ಕಾಂಗ್ರೆಸ್​ನ ಗುಲಾಬ್​ ನಬಿ ಆಜಾದ್​ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಶ್ರೀನಗರ ಏರ್​ಪೋರ್ಟ್​​ನಿಂದ ಅವರನ್ನ ವಾಪಸ್​ ಕಳುಹಿಸಲಾಗಿತ್ತು.

ಇದೇ ವೇಳೆ ಮಾತನಾಡಿರುವ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ಮಾತನಾಡಿದ್ದು, ಕಣಿವೆ ನಾಡಿಗೆ ಸದ್ಯ ರಾಹುಲ್​ ಗಾಂಧಿ ಅವಶ್ಯಕತೆ ಇಲ್ಲ. ಪಾರ್ಲಿಮೆಂಟ್​ನಲ್ಲಿ ಅವರ ಸಹದ್ಯೋಗಿಗಳು ಮಾತನಾಡುವಾಗ ಅವರ ಅವಶ್ಯಕತೆ ಇದೆ. ಇಲ್ಲಿ ಬಂದು ಅವರು ರಾಜಕೀಯ ನಡೆಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧತಿ ಬಳಿಕ ಕಣಿವೆ ನಾಡಿಗೆ ಪ್ರಯಾಣ ಬೆಳೆಸಿದ್ದ ರಾಹುಲ್​ ಗಾಂಧಿ ನೇತೃತ್ವದ ತಂಡ ಶ್ರೀನಗರ ವಿಮಾನ ನಿಲ್ದಾಣದಿಂದ ದೆಹಲಿಯತ್ತ ವಾಪಸ್​ ಆಗಿದೆ ಎಂದು ಸುದ್ದಿಸಂಸ್ಥೆವೊಂದು ವರದಿ ಮಾಡಿದೆ.

ರಾಹುಲ್​ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕರಾದ ಡಿ. ರಾಜಾ, ಶರದ್​ ಯಾದವ್​, ಮಜೀನ್​ ಮೆನನ್​ ಮತ್ತು ಮನೋಜ್​ ಜಾ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಶ್ರೀನಗರದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಇವರನ್ನ ಮುಂದೆ ಪ್ರಯಾಣ ಬೆಳೆಸದಂತೆ ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.

ರಾಹುಲ್​ ಗಾಂಧಿ ಟೀಂ

ಕಾಶ್ಮೀರದ ಅಧಿಕಾರಿಗಳ ವಿರೋಧದ ನಡುವೆಯೂ ಶ್ರೀನಗರಕ್ಕೆ ಹೊರಟ ರಾಹುಲ್ ಗಾಂಧಿ!

ಯಾವುದೇ ಕಾರಣಕ್ಕೂ ರಾಜಕೀಯ ಮುಖಂಡರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಬಾರದು. ಇದರಿಂದ ಇಲ್ಲಿನ ಜನರು ತೊಂದರೆಗೆ ಒಳಗಾಗುತ್ತಾರೆ ಎಂದು ಜಮ್ಮು-ಕಾಶ್ಮೀರ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್​ ಮಾಡಿತ್ತು. ಈ ನಡುವೆಯೂ ವಿರೋಧ ಪಕ್ಷಗಳ ನಿಯೋಗ ಇಲ್ಲಿನ ಜನರೊಂದಿಗೆ ವಾಸ್ತವ ಪರಿಸ್ಥಿತಿ ಚರ್ಚೆ ನಡೆಸಲು ಕಣಿವೆ ರಾಜ್ಯಕ್ಕೆ ತೆರಳಿದೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಅಲ್ಲಿ ಹಿಂಸಾತ್ಮಕ ಕೃತ್ಯ ಹೆಚ್ಚಾಗಿ ನಡೆಯುತ್ತಿದ್ದು, ಪ್ರತಿದಿನ ಸಾವು-ನೋವು ಸಂಭವಿಸುತ್ತಿವೆ ಎಂಬ ಮಾತನ್ನು ಈ ಹಿಂದೆ ಖುದ್ದಾಗಿ ರಾಹುಲ್​ ಗಾಂಧಿ ಹೇಳಿದ್ದರು. ಇದರ ಮಧ್ಯೆ ತಾವು ಕಣಿವೆ ನಾಡಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದರು. ಇನ್ನು ಶ್ರೀನಗರದಿಂದ ಈ ನಿಯೋಗವನ್ನ ವಾಪಸ್​ ಕಳಿಸಿರುವುದಕ್ಕಾಗಿ ಗುಲಾಮ್​ ನಬಿ ಆಜಾದ್​,ಶರದ್​ ಯಾದವ್​, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಆರ್ಟಿಕಲ್​ 370 ರದ್ದುಗೊಳ್ಳುತ್ತಿದ್ದಂತೆ ಕಾಂಗ್ರೆಸ್​ನ ಗುಲಾಬ್​ ನಬಿ ಆಜಾದ್​ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಶ್ರೀನಗರ ಏರ್​ಪೋರ್ಟ್​​ನಿಂದ ಅವರನ್ನ ವಾಪಸ್​ ಕಳುಹಿಸಲಾಗಿತ್ತು.

ಇದೇ ವೇಳೆ ಮಾತನಾಡಿರುವ ಜಮ್ಮು-ಕಾಶ್ಮೀರ ರಾಜ್ಯಪಾಲ ಸತ್ಯಪಾಲ್​ ಮಲಿಕ್​ ಮಾತನಾಡಿದ್ದು, ಕಣಿವೆ ನಾಡಿಗೆ ಸದ್ಯ ರಾಹುಲ್​ ಗಾಂಧಿ ಅವಶ್ಯಕತೆ ಇಲ್ಲ. ಪಾರ್ಲಿಮೆಂಟ್​ನಲ್ಲಿ ಅವರ ಸಹದ್ಯೋಗಿಗಳು ಮಾತನಾಡುವಾಗ ಅವರ ಅವಶ್ಯಕತೆ ಇದೆ. ಇಲ್ಲಿ ಬಂದು ಅವರು ರಾಜಕೀಯ ನಡೆಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.

Intro:Body:

ಶ್ರೀನಗರಕ್ಕೆ ತೆರಳಿದ್ದ ರಾಹುಲ್​ ಗಾಂಧಿ ನಿಯೋಗ ವಾಪಸ್​​... ವಿಮಾನ ನಿಲ್ದಾಣದಿಂದ ಮರಳಿದ ಬಂದ ಟೀಂ! 





ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ಧತಿ ಬಳಿಕ ಕಣಿವೆ ನಾಡಿಗೆ ಪ್ರಯಾಣ ಬೆಳೆಸಿದ್ದ ರಾಹುಲ್​ ಗಾಂಧಿ ನೇತೃತ್ವದ ತಂಡ ಶ್ರೀನಗರ ವಿಮಾನ ನಿಲ್ದಾಣದಿಂದ ದೆಹಲಿಯತ್ತ ವಾಪಸ್​ ಆಗಿದೆ ಎಂದು ಸುದ್ದಿಸಂಸ್ಥೆವೊಂದು ವರದಿ ಮಾಡಿದೆ. 



ರಾಹುಲ್​ ಗಾಂಧಿ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕರಾದ ಡಿ. ರಾಜಾ, ಶರದ್​ ಯಾದವ್​, ಮಜೀನ್​ ಮೆನನ್​ ಮತ್ತು ಮನೋಜ್​ ಜಾ ಜಮ್ಮು-ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಶ್ರೀನಗರದ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆ ಇವರನ್ನ ಮುಂದೆ ಪ್ರಯಾಣ ಬೆಳೆಸದಂತೆ ತಡೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದೆ. 



ಯಾವುದೇ ಕಾರಣಕ್ಕೂ ರಾಜಕೀಯ ಮುಖಂಡರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಬಾರದು. ಇದರಿಂದ ಇಲ್ಲಿನ ಜನರು ತೊಂದರೆಗೆ ಒಳಗಾಗುತ್ತಾರೆ ಎಂದು ಜಮ್ಮು-ಕಾಶ್ಮೀರ ಸಾರ್ವಜನಿಕ ಸಂಪರ್ಕ ಇಲಾಖೆ ಟ್ವೀಟ್​ ಮಾಡಿತ್ತು. ಈ ನಡುವೆಯೂ ವಿರೋಧ ಪಕ್ಷಗಳ ನಿಯೋಗ ಇಲ್ಲಿನ ಜನರೊಂದಿಗೆ ವಾಸ್ತವ ಪರಿಸ್ಥಿತಿ ಚರ್ಚೆ ನಡೆಸಲು ಕಣಿವೆ ರಾಜ್ಯಕ್ಕೆ ತೆರಳಿದೆ.



ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್​ 370 ರದ್ದುಗೊಂಡ ಬಳಿಕ ಅಲ್ಲಿ ಹಿಂಸಾತ್ಮಕ ಕೃತ್ಯ ಹೆಚ್ಚಾಗಿ ನಡೆಯುತ್ತಿದ್ದು, ಪ್ರತಿದಿನ ಸಾವು-ನೋವು ಸಂಭವಿಸುತ್ತಿವೆ ಎಂಬ ಮಾತನ್ನು ಈ ಹಿಂದೆ ಖುದ್ದಾಗಿ ರಾಹುಲ್​ ಗಾಂಧಿ ಹೇಳಿದ್ದರು. ಇದರ ಮಧ್ಯೆ ತಾವು ಕಣಿವೆ ನಾಡಿಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿದ್ದರು. ಇನ್ನು ಶ್ರೀನಗರದಿಂದ ಈ ನಿಯೋಗವನ್ನ ವಾಪಸ್​ ಕಳಿಸಿರುವುದಕ್ಕಾಗಿ ಗುಲಾಮ್​ ನಬಿ ಆಜಾದ್​,ಶರದ್​ ಯಾದವ್​, ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. 


Conclusion:
Last Updated : Aug 24, 2019, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.