ETV Bharat / bharat

ಪಂಜಾಬ್‌ ಕಳ್ಳಭಟ್ಟಿ ದುರಂತ: ಸಾವಿನ ಸಂಖ್ಯೆ 86ಕ್ಕೇರಿಕೆ, 7 ಅಬಕಾರಿ, 6 ಪೊಲೀಸರ ಅಮಾನತು

author img

By

Published : Aug 1, 2020, 9:24 PM IST

ಪಂಜಾಬ್​ನ ವಿವಿಧ ಪ್ರದೇಶಗಳಲ್ಲಿ ಕಳ್ಳಭಟ್ಟಿ ಸೇವನೆ ಮಾಡಿ ಸಾವನ್ನಪ್ಪುತ್ತಿರುವವರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ.

Chief Minister Amarinder Singh
Chief Minister Amarinder Singh

ಚಂಡೀಗಢ (ಪಂಜಾಬ್​): ಕಳ್ಳಭಟ್ಟಿ ಸೇವನೆ ಮಾಡಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 86ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಕ್ಕೆ ಅಲ್ಲಿನ ಸರ್ಕಾರ ತಲಾ 2 ಲಕ್ಷ ರೂ ಘೋಷಣೆ ಮಾಡಿದೆ.

ಪ್ರಕರಣದ ಸಮಗ್ರ ತನಿಖೆಗೆ ಈಗಾಗಲೇ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಆದೇಶ ನೀಡಿದ್ದು, ಮೂರು ನಗರಗಳಾದ ಅಮೃತಸರ್​​, ಗುರುದಾಸ್ಪುರ್​ ಹಾಗೂ ಠರನ್‌ನಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಇದರ ಜತೆಗೆ 25 ಜನರನ್ನು ಬಂಧಿಸಲಾಗಿದ್ದು, 750 ಲೀಟರ್​ ಕಳ್ಳಭಟ್ಟಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಅಬಕಾರಿ ಅಧಿಕಾರಿಗಳು, ಇಬ್ಬರು ಡಿಎಸ್​​ಪಿ ಸೇರಿ ಆರು ಮಂದಿ ಪೊಲೀಸ್​ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಳ್ಳಭಟ್ಟಿ ಸೇವನೆ ಮಾಡಿ ಅಮೃತಸರದಲ್ಲಿ 12 ಮಂದಿ ಗುರುದಾಸ್ಪುರ್​ದಲ್ಲಿ 11 ಮಂದಿ ಸೇರಿ ಇಲ್ಲಿಯವರೆಗೆ 86 ಜನರು ಬಲಿಯಾಗಿದ್ದಾರೆ.

ಚಂಡೀಗಢ (ಪಂಜಾಬ್​): ಕಳ್ಳಭಟ್ಟಿ ಸೇವನೆ ಮಾಡಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 86ಕ್ಕೆ ಏರಿಕೆಯಾಗಿದ್ದು, ಮೃತರ ಕುಟುಂಬಕ್ಕೆ ಅಲ್ಲಿನ ಸರ್ಕಾರ ತಲಾ 2 ಲಕ್ಷ ರೂ ಘೋಷಣೆ ಮಾಡಿದೆ.

ಪ್ರಕರಣದ ಸಮಗ್ರ ತನಿಖೆಗೆ ಈಗಾಗಲೇ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್​​ ಆದೇಶ ನೀಡಿದ್ದು, ಮೂರು ನಗರಗಳಾದ ಅಮೃತಸರ್​​, ಗುರುದಾಸ್ಪುರ್​ ಹಾಗೂ ಠರನ್‌ನಲ್ಲಿ 100ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಇದರ ಜತೆಗೆ 25 ಜನರನ್ನು ಬಂಧಿಸಲಾಗಿದ್ದು, 750 ಲೀಟರ್​ ಕಳ್ಳಭಟ್ಟಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಅಬಕಾರಿ ಅಧಿಕಾರಿಗಳು, ಇಬ್ಬರು ಡಿಎಸ್​​ಪಿ ಸೇರಿ ಆರು ಮಂದಿ ಪೊಲೀಸ್​ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕಳ್ಳಭಟ್ಟಿ ಸೇವನೆ ಮಾಡಿ ಅಮೃತಸರದಲ್ಲಿ 12 ಮಂದಿ ಗುರುದಾಸ್ಪುರ್​ದಲ್ಲಿ 11 ಮಂದಿ ಸೇರಿ ಇಲ್ಲಿಯವರೆಗೆ 86 ಜನರು ಬಲಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.