ETV Bharat / bharat

ಕೊರೊನಾ ಬಗ್ಗೆ ಕ್ರಿಕೆಟ್​ ದೇವರ​ ಕಿವಿಮಾತು... ಏನಂತಾರೆ ನೀವೇ ನೋಡಿ!

author img

By

Published : Mar 18, 2020, 10:07 PM IST

ಧೈರ್ಯವಾಗಿರಿ. ಯಾವುದೇ ವದಂತಿಗಳನ್ನು ನಂಬಬೇಡಿ. ನಾವೆಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೋರಾಡೋಣ. ಕೊರೊನಾವನ್ನು ಧೈರ್ಯದಿಂದ ಎದುರಿಸೋಣ ಎಂಬ ಸಂದೇಶ ನೀಡಿದ್ದಾರೆ ಕ್ರಿಕೆಟ್​ ದೇವರು.

Sachin Tendulkar
ಸಚಿನ್​ ತೆಂಡೂಲ್ಕರ್

ಮುಂಬೈ: ವಿಶ್ವವ್ಯಾಪಿಯಾಗಿ ಕೊರೊನಾ ವೈರಸ್​ ಬಾಧಿಸಿದೆ. ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ನಾವೆಲ್ಲರೂ ಕೊರೊನಾ ಬಗ್ಗೆ ಚಿಂತಿತರಾಗಿದ್ದೇವೆ ಹಾಗಾಗಿ ಕೆಲ ವಿಷಯಗಳ ಬಗ್ಗೆ ನಾವು ಗಮನವಿಡಬೇಕೆಂದು ಹೇಳಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣದಿಂದ ಆದಷ್ಟು ಸಾಮಾಜಿಕವಾಗಿ ನಡೆಯುವ ಕಾರ್ಯಕ್ರಮಗಳಿಂದ ದೂರವಿರಿ ಎಂದು ಕ್ರಿಕೆಟ್​ ದೇವರು ಸಾರ್ವಜನಿಕರಿಗೆ ಮನವಿ ಜತೆ ಸಲಹೆ ನೀಡಿದ್ದಾರೆ.

ಎರಡನೇಯದಾಗಿ ಯಾರಾದ್ರೂ ಹುಷಾರಿಲ್ಲದೆ ಇದ್ರೆ ಅಂತವರಿಗೆ ವೈದ್ಯರ ಬಳಿಗೆ ತೆರಳುವಂತೆ ಸೂಚಿಸಿ. ನಿಮಗೇ ಏನಾದರೂ ಜ್ವರ, ಶೀತ, ಗಂಟಲು ನೋವಿನಂತಹ ಲಕ್ಷಣ ಕಂಡುಬಂದರೆ ಖಂಡಿತವಾಗಿ ಡಾಕ್ಟರ್​ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ, ದಯವಿಟ್ಟು ನಿರ್ಲಕ್ಷಿಸದಿರಿ. ಏನಾದರೂ ತುರ್ತು ಸಂದರ್ಭವಾದರೆ 1075 ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿ. ಇನ್ನು ಪ್ರತಿಯೊಬ್ಬರೂ ಸ್ವಚ್ಚತೆಗೆ ಗಮನ ನೀಡಿ. ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಚಗೊಳಿಸುತ್ತಿರಿ, ಕನಿಷ್ಠ 20 ಸೆಕೆಂಡ್​ಗಳಷ್ಟು ಕಾಲ ಕೈಗಳನ್ನು ಸ್ವಚ್ಚಗೊಳಿಸಿ.

ಕೊನೇಯದಾಗಿ ಏನಂದ್ರೆ ಧೈರ್ಯವಾಗಿರಿ. ಯಾವುದೇ ವದಂತಿಗಳನ್ನು ನಂಬಬೇಡಿ. ನಾವೆಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೋರಾಡೋಣ. ಕೊರೊನಾವನ್ನು ಧೈರ್ಯದಿಂದ ಎದುರಿಸೋಣ ಎಂಬ ಸಂದೇಶ ನೀಡಿದ್ದಾರೆ.

ಮುಂಬೈ: ವಿಶ್ವವ್ಯಾಪಿಯಾಗಿ ಕೊರೊನಾ ವೈರಸ್​ ಬಾಧಿಸಿದೆ. ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಅವರು ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ನಾವೆಲ್ಲರೂ ಕೊರೊನಾ ಬಗ್ಗೆ ಚಿಂತಿತರಾಗಿದ್ದೇವೆ ಹಾಗಾಗಿ ಕೆಲ ವಿಷಯಗಳ ಬಗ್ಗೆ ನಾವು ಗಮನವಿಡಬೇಕೆಂದು ಹೇಳಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣದಿಂದ ಆದಷ್ಟು ಸಾಮಾಜಿಕವಾಗಿ ನಡೆಯುವ ಕಾರ್ಯಕ್ರಮಗಳಿಂದ ದೂರವಿರಿ ಎಂದು ಕ್ರಿಕೆಟ್​ ದೇವರು ಸಾರ್ವಜನಿಕರಿಗೆ ಮನವಿ ಜತೆ ಸಲಹೆ ನೀಡಿದ್ದಾರೆ.

ಎರಡನೇಯದಾಗಿ ಯಾರಾದ್ರೂ ಹುಷಾರಿಲ್ಲದೆ ಇದ್ರೆ ಅಂತವರಿಗೆ ವೈದ್ಯರ ಬಳಿಗೆ ತೆರಳುವಂತೆ ಸೂಚಿಸಿ. ನಿಮಗೇ ಏನಾದರೂ ಜ್ವರ, ಶೀತ, ಗಂಟಲು ನೋವಿನಂತಹ ಲಕ್ಷಣ ಕಂಡುಬಂದರೆ ಖಂಡಿತವಾಗಿ ಡಾಕ್ಟರ್​ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ, ದಯವಿಟ್ಟು ನಿರ್ಲಕ್ಷಿಸದಿರಿ. ಏನಾದರೂ ತುರ್ತು ಸಂದರ್ಭವಾದರೆ 1075 ಹೆಲ್ಪ್​ಲೈನ್​ ನಂಬರ್​ಗೆ ಕರೆ ಮಾಡಿ. ಇನ್ನು ಪ್ರತಿಯೊಬ್ಬರೂ ಸ್ವಚ್ಚತೆಗೆ ಗಮನ ನೀಡಿ. ಆಗಾಗ ಕೈಗಳನ್ನು ಸಾಬೂನಿನಿಂದ ಸ್ವಚ್ಚಗೊಳಿಸುತ್ತಿರಿ, ಕನಿಷ್ಠ 20 ಸೆಕೆಂಡ್​ಗಳಷ್ಟು ಕಾಲ ಕೈಗಳನ್ನು ಸ್ವಚ್ಚಗೊಳಿಸಿ.

ಕೊನೇಯದಾಗಿ ಏನಂದ್ರೆ ಧೈರ್ಯವಾಗಿರಿ. ಯಾವುದೇ ವದಂತಿಗಳನ್ನು ನಂಬಬೇಡಿ. ನಾವೆಲ್ಲರೂ ಒಂದಾಗಿ ಕೊರೊನಾ ವಿರುದ್ಧ ಹೋರಾಡೋಣ. ಕೊರೊನಾವನ್ನು ಧೈರ್ಯದಿಂದ ಎದುರಿಸೋಣ ಎಂಬ ಸಂದೇಶ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.