ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸಚಿವ ಸಂಪುಟ ವಿಸ್ತರಿಸಿದ್ದು, ತಮ್ಮ ಸೋದರ ಸಂಬಂಧಿ ಹರೀಶ್ ರಾವ್ಗೆ ಹಣಕಾಸು ಖಾತೆ ನೀಡಿದ್ದಾರೆ.
ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ನೂತನ 6 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ತಮ್ಮ ಸೋದರಳಿಯನಾದ ಟಿ ಹರೀಶ್ ರಾವ್ಗೆ ಹಣಕಾಸು ಖಾತೆ ನೀಡಿದ್ದಾರೆ.
ಸಿಎಂ ಕೆಸಿಆರ್ ಶಿಫಾರಸಿನ ಮೇರೆಗೆ, ತೆಲಂಗಾಣ ರಾಜ್ಯಪಾಲೆ ಡಾ. ತಮಿಳಿಸಾಯಿ ಸೌಂದರ್ರಾಜನ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಇದರೊಂದಿಗೆ ಸಿಎಂ ತಮ್ಮ ಪುತ್ರ ಕೆ. ತಾರಕ ರಾಮರಾವ್ ಅವರಿಗೆ ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ, ಕೈಗಾರಿಕೆಗಳು- ಐಟಿ ಮತ್ತು ಕಮ್ಯುನಿಕೇಷನ್ ಹೊಣೆ ನೀಡಿದ್ದಾರೆ. ಇದರೊಂದಿಗೆ ಸತ್ಯವತಿ ರಾಥೋಡ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುವ್ವಾಡ ಅಜಯ್ ಕುಮಾರ್ಗೆ ಸಾರಿಗೆ ಇಲಾಖೆ, ಜಿ ಜಗದೀಶ್ ರೆಡ್ಡಿಗೆ ಇಂಧನ ಇಲಾಖೆಯ ಜವಾಬ್ದಾರಿ ವಹಿಸಿದ್ದಾರೆ. ಇನ್ನು, ಸಬಿತಾ ಇಂದ್ರಾ ರೆಡ್ಡಿ ಅವರನ್ನು ಶಿಕ್ಷಣ ಸಚಿವರಾನ್ನಾಗಿ ಮಾಡಿದ್ದಾರೆ.