ETV Bharat / bharat

ಪೌರತ್ವ ತಿದ್ದುಪಡಿ ಮಸೂದೆ: ನಾಳೆ ಸಂಸತ್ತಿನ ಮೇಲ್ಮನೆಯಲ್ಲಿ ಮಂಡನೆ, ಪ್ರತಿಪಕ್ಷಗಳ ಆಕ್ರೋಶ

author img

By

Published : Dec 10, 2019, 10:34 PM IST

ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದ್ದು ನಾಳೆ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಮಸೂದೆಯ ಬಗ್ಗೆ ದೇಶದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿವೆ.

Citizenship Bill has smooth sail in Lok Sabha
Citizenship Bill has smooth sail in Lok Sabha

ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಸೋಮವಾರ ತಡರಾತ್ರಿ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಇದೀಗ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ನಾಳೆ ಮಧ್ಯಾಹ್ನ 2 ಗಂಟೆಗೆ (ಬುಧವಾರ) ರಾಜ್ಯಸಭೆಯಲ್ಲಿ ವಿವಾದಿತ ಮಸೂದೆ ಮಂಡನೆಯಾಗಲಿದೆ.

ಲೋಕಸಭೆಯಲ್ಲಿ ಮಸೂದೆಯನ್ನು ಗೃಹ ಸಚಿವ ಅಮಿತ್​ ಶಾ ಮಂಡಿಸಿದ್ದರು. ಇಲ್ಲಿ ಸತತ 12 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ಸೋಮವಾರ ರಾತ್ರಿ ಅಂಗೀಕರಿಸಲ್ಪಟ್ಟಿತ್ತು. ಮಸೂದೆ ಪರವಾಗಿ 293 ಸದಸ್ಯರು ಮತಗಳು ಬಿದ್ದರೆ, 82 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

ಆದರೀಗ ಮಸೂದೆಗೆ ಲೋಕಸಭೆ ಅನುಮೋದನೆ ದೊರೆತ ಪರಿಣಾಮ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಸೋಶಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯಲ್ಲಿ ಪಾಕ್‌ ಮೂಲದ ಹಿಂದೂಗಳ ಸಂಭ್ರಮ:
ದೆಹಲಿಯ ಮಜ್ನುಕಾ ಟಿಲಾ ಪ್ರದೇಶದಲ್ಲಿ ವಾಸಿಸಿರುವ ಪಾಕಿಸ್ತಾನ ಮೂಲಕ ಹಿಂದೂಗಳು ಈ ಮಸೂದೆಗೆ ಅನುಮೋದನೆ ದೊರೆತಿದ್ದಕ್ಕೆ ಸಂಭ್ರಮಿಸಿದರು.

ಮಸೂದೆಗೆ ಬೆಂಬಲ ನೀಡಲ್ಲ: ಶಿವಸೇನೆ ನಿಲುವು

ಪೌರತ್ವ ತಿದ್ದುಪಡಿ ಮಸೂದೆ ಪರ ಮತ ಚಲಾಯಿಸಿದ್ದ ಶಿವಸೇನಾ, ಇದೀಗ ವಿರೋಧ ವ್ಯಕ್ತಪಡಿಸಿದೆ. 'ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕೊಡುವವರೆಗೂ ರಾಜ್ಯಸಭೆಯಲ್ಲಿ ಈ ಮಸೂದೆಗೆ ಶಿವಸೇನೆ ಬೆಂಬಲಿಸುವುದಿಲ್ಲ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ದೇಶ ವಿಭಜನೆಗೆ ಯತ್ನ: ತೇಜಸ್ವಿ ಯಾದವ್ ಆರೋಪ

ಇದು ದೇಶವನ್ನು ವಿಭಜಿಸುವ ಮಸೂದೆ. ಇದನ್ನು ಬಲವಾಗಿ ವಿರೋಧಿಸಿ ಅದರ ವಿರುದ್ಧ ಹೋರಾಡುತ್ತೇವೆ. ಮಸೂದೆಯನ್ನು ಬೆಂಬಲಿಸುವ ಮೂಲಕ ಸಿಎಂ ನಿತೀಶ್​​​​ಕುಮಾರ್ ಅವರು ಮತ್ತೆ ಬಿಹಾರದ ಜನರಿಗೆ ದ್ರೋಹ ಎಸಗಿದ್ದಾರೆ. ಏಕೆಂದರೆ ಅವರು ಬಿಜೆಪಿ ಮತ್ತು ಆರ್​​ಎಸ್​ಎಸ್‌ಗೆ ಹೆದರುತ್ತಾರೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಕಿಡಿಕಾರಿದ್ದಾರೆ.

ಅಸಾದುದ್ದೀನ್ ಓವೈಸಿ ಕಿಡಿನುಡಿ:

ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆ ಜಾತ್ಯತೀತತೆ ಮತ್ತು ಸಂವಿಂಧಾನದ ವಿಧಿ 14ರ ವಿರುದ್ಧವಾಗಿದೆ. ಇದು ಅವಕಾಶವಾದದ ರಾಜಕೀಯ ಎಂದು ಸಂಸದ ಅಸಾದುದ್ದೀನ್​ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಸೋಮವಾರ ತಡರಾತ್ರಿ ಲೋಕಸಭೆಯಲ್ಲಿ ಅಂಗೀಕಾರ ದೊರೆತಿರುವ ಪೌರತ್ವ ತಿದ್ದುಪಡಿ ಮಸೂದೆಗೆ ಇದೀಗ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದೆ. ಅಲ್ಲದೆ, ನಾಳೆ ಮಧ್ಯಾಹ್ನ 2 ಗಂಟೆಗೆ (ಬುಧವಾರ) ರಾಜ್ಯಸಭೆಯಲ್ಲಿ ವಿವಾದಿತ ಮಸೂದೆ ಮಂಡನೆಯಾಗಲಿದೆ.

ಲೋಕಸಭೆಯಲ್ಲಿ ಮಸೂದೆಯನ್ನು ಗೃಹ ಸಚಿವ ಅಮಿತ್​ ಶಾ ಮಂಡಿಸಿದ್ದರು. ಇಲ್ಲಿ ಸತತ 12 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದ ಬಳಿಕ ಸೋಮವಾರ ರಾತ್ರಿ ಅಂಗೀಕರಿಸಲ್ಪಟ್ಟಿತ್ತು. ಮಸೂದೆ ಪರವಾಗಿ 293 ಸದಸ್ಯರು ಮತಗಳು ಬಿದ್ದರೆ, 82 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

ಆದರೀಗ ಮಸೂದೆಗೆ ಲೋಕಸಭೆ ಅನುಮೋದನೆ ದೊರೆತ ಪರಿಣಾಮ ದೇಶದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಪೌರತ್ವ ತಿದ್ದುಪಡಿ ಮಸೂದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಸೋಶಿಯಲ್​ ಡೆಮಾಕ್ರಟಿಕ್​ ಪಾರ್ಟಿ ಆಫ್​ ಇಂಡಿಯಾ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯಲ್ಲಿ ಪಾಕ್‌ ಮೂಲದ ಹಿಂದೂಗಳ ಸಂಭ್ರಮ:
ದೆಹಲಿಯ ಮಜ್ನುಕಾ ಟಿಲಾ ಪ್ರದೇಶದಲ್ಲಿ ವಾಸಿಸಿರುವ ಪಾಕಿಸ್ತಾನ ಮೂಲಕ ಹಿಂದೂಗಳು ಈ ಮಸೂದೆಗೆ ಅನುಮೋದನೆ ದೊರೆತಿದ್ದಕ್ಕೆ ಸಂಭ್ರಮಿಸಿದರು.

ಮಸೂದೆಗೆ ಬೆಂಬಲ ನೀಡಲ್ಲ: ಶಿವಸೇನೆ ನಿಲುವು

ಪೌರತ್ವ ತಿದ್ದುಪಡಿ ಮಸೂದೆ ಪರ ಮತ ಚಲಾಯಿಸಿದ್ದ ಶಿವಸೇನಾ, ಇದೀಗ ವಿರೋಧ ವ್ಯಕ್ತಪಡಿಸಿದೆ. 'ಲೋಕಸಭೆಯಲ್ಲಿ ಕೇಳಿದ್ದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕೊಡುವವರೆಗೂ ರಾಜ್ಯಸಭೆಯಲ್ಲಿ ಈ ಮಸೂದೆಗೆ ಶಿವಸೇನೆ ಬೆಂಬಲಿಸುವುದಿಲ್ಲ' ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ದೇಶ ವಿಭಜನೆಗೆ ಯತ್ನ: ತೇಜಸ್ವಿ ಯಾದವ್ ಆರೋಪ

ಇದು ದೇಶವನ್ನು ವಿಭಜಿಸುವ ಮಸೂದೆ. ಇದನ್ನು ಬಲವಾಗಿ ವಿರೋಧಿಸಿ ಅದರ ವಿರುದ್ಧ ಹೋರಾಡುತ್ತೇವೆ. ಮಸೂದೆಯನ್ನು ಬೆಂಬಲಿಸುವ ಮೂಲಕ ಸಿಎಂ ನಿತೀಶ್​​​​ಕುಮಾರ್ ಅವರು ಮತ್ತೆ ಬಿಹಾರದ ಜನರಿಗೆ ದ್ರೋಹ ಎಸಗಿದ್ದಾರೆ. ಏಕೆಂದರೆ ಅವರು ಬಿಜೆಪಿ ಮತ್ತು ಆರ್​​ಎಸ್​ಎಸ್‌ಗೆ ಹೆದರುತ್ತಾರೆ ಎಂದು ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಕಿಡಿಕಾರಿದ್ದಾರೆ.

ಅಸಾದುದ್ದೀನ್ ಓವೈಸಿ ಕಿಡಿನುಡಿ:

ಕೇಂದ್ರ ಸರ್ಕಾರದ ಉದ್ದೇಶಿತ ಮಸೂದೆ ಜಾತ್ಯತೀತತೆ ಮತ್ತು ಸಂವಿಂಧಾನದ ವಿಧಿ 14ರ ವಿರುದ್ಧವಾಗಿದೆ. ಇದು ಅವಕಾಶವಾದದ ರಾಜಕೀಯ ಎಂದು ಸಂಸದ ಅಸಾದುದ್ದೀನ್​ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.