ETV Bharat / bharat

ಅಂದು ನಕ್ಸಲರಾಗಿದ್ದವರೇ ಈಗ ಮನ ಪರಿವರ್ತನೆಯಾಗಿ ಪೊಲೀಸ್ ಕಾನ್ಸ್​ಟೇಬಲ್​ಗಳಾದರು.. - ನಕ್ಸಲರ ಪುನರ್ವಸತಿ ಯೋಜನೆ ಕಾರ್ಯಕ್ರಮ

ನಕ್ಸಲರ ಪುನರ್ವಸತಿ ಯೋಜನೆಯಡಿಯಲ್ಲಿ ಪೊಲೀಸರಿಗೆ ಶರಣಾಗಿದ್ದ ನಕ್ಸಲರು ಪೊಲೀಸ್ ತರಬೇತಿ ಪಡೆದು ಈಗ ಪೊಲೀಸ್ ಪಡೆಯ ಭಾಗವಾಗಿದ್ದಾರೆ..

surrendered Maoists sworn in to serve country
ಕಾನ್ಸ್​ಟೇಬಲ್​​ಗಳಾದ ನಕ್ಸಲರು
author img

By

Published : Nov 25, 2020, 8:09 PM IST

ಬಸ್ತಾರ್ (ಛತ್ತೀಸ್​ಗಢ): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರಿಗೆ ಶರಣಾಗಿದ್ದ 58 ಮಾವೋವಾದಿಗಳು ಸೇರಿದಂತೆ 127 ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದು, ಕಾನ್ಸ್​ಟೇಬಲ್​ಗಳಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

ಛತ್ತೀಸ್​ಗಢ ಸರ್ಕಾರದ ನಕ್ಸಲರ ಪುನರ್ವಸತಿ ಯೋಜನೆಯಡಿಯಲ್ಲಿ ಪೊಲೀಸರಿಗೆ ಶರಣಾಗಿದ್ದ ನಕ್ಸಲರು ಪೊಲೀಸ್ ತರಬೇತಿ ಪಡೆದು ಈಗ ಪೊಲೀಸ್ ಪಡೆಯ ಭಾಗವಾಗಿದ್ದಾರೆ. ಇದರಿಂದ ಮಾವೋವಾದಿಗಳಿಗೆ ಹಾಗೂ ಬುಡಕಟ್ಟು ವಿರೋಧಿ ಸಿದ್ಧಾಂತ ಹೊಂದಿದ್ದವರಿಗೆ ಭ್ರಮನಿರಸನವಾಗಿದೆ ಎಂದು ಕಾನ್ಸ್​ಟೇಬಲ್​ ಆಗಿ ನೇಮಕಗೊಂಡವರು ಹೇಳಿಕೊಂಡಿದ್ದಾರೆ.

ಬುಡಕಟ್ಟು ಸಮುದಾಯದವರ ಬೆಂಬಲವನ್ನು ಪಡೆಯಲು ಬಸ್ತಾರ್ ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದರು. ಈಗ ಮಾಜಿ ನಕ್ಸಲರಿಗೆ ಕಾನ್ಸ್​​ಟೇಬಲ್​ಗಳಾಗಿ ಕೆಲಸ ನೀಡುವ ಮೂಲಕ ಉಳಿದ ನಕ್ಸಲರಿಗೆ ಭರವಸೆ ನೀಡುತ್ತಿದ್ದಾರೆ.

ತರಬೇತಿ ಪಡೆದ ನಕ್ಸಲರನ್ನು ಕಾನ್‌ಸ್ಟೇಬಲ್‌ಗಳನ್ನಾಗಿ ಮಾಡಿ, ನಕ್ಸಲ್​ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವುದು ನಮ್ಮ ಧ್ಯೇಯದ ಭಾಗವಾಗಲಿದೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ಶರಣಾದ ನಕ್ಸಲರನ್ನು 127 ನಕ್ಸಲೈಟ್‌ಗಳನ್ನು ಕಳೆದ 2 ವರ್ಷಗಳಿಂದ ಬೋಧಗಟ್ ಪಿಟಿಎಸ್‌ನಲ್ಲಿ ಇರಿಸಲಾಗಿತ್ತು. ಇದಾದ ನಂತರ 11 ತಿಂಗಳ ಕಠಿಣ ತರಬೇತಿ ನೀಡಲಾಗಿತ್ತು. ಇದರ ಜೊತೆಗೆ ಕಾನೂನು ಮಾಹಿತಿ ಮತ್ತು ಮಾನವ ಹಕ್ಕುಗಳ ತರಬೇತಿಯನ್ನು ನೀಡಿ ಕಾನ್ಸ್​ಟೇಬಲ್​ಗಳನ್ನಾಗಿ ನೇಮಿಸಲಾಗಿದೆ ಎಂದು ಡಾ. ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ಬಸ್ತಾರ್ (ಛತ್ತೀಸ್​ಗಢ): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರಿಗೆ ಶರಣಾಗಿದ್ದ 58 ಮಾವೋವಾದಿಗಳು ಸೇರಿದಂತೆ 127 ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದು, ಕಾನ್ಸ್​ಟೇಬಲ್​ಗಳಾಗಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದಾರೆ.

ಛತ್ತೀಸ್​ಗಢ ಸರ್ಕಾರದ ನಕ್ಸಲರ ಪುನರ್ವಸತಿ ಯೋಜನೆಯಡಿಯಲ್ಲಿ ಪೊಲೀಸರಿಗೆ ಶರಣಾಗಿದ್ದ ನಕ್ಸಲರು ಪೊಲೀಸ್ ತರಬೇತಿ ಪಡೆದು ಈಗ ಪೊಲೀಸ್ ಪಡೆಯ ಭಾಗವಾಗಿದ್ದಾರೆ. ಇದರಿಂದ ಮಾವೋವಾದಿಗಳಿಗೆ ಹಾಗೂ ಬುಡಕಟ್ಟು ವಿರೋಧಿ ಸಿದ್ಧಾಂತ ಹೊಂದಿದ್ದವರಿಗೆ ಭ್ರಮನಿರಸನವಾಗಿದೆ ಎಂದು ಕಾನ್ಸ್​ಟೇಬಲ್​ ಆಗಿ ನೇಮಕಗೊಂಡವರು ಹೇಳಿಕೊಂಡಿದ್ದಾರೆ.

ಬುಡಕಟ್ಟು ಸಮುದಾಯದವರ ಬೆಂಬಲವನ್ನು ಪಡೆಯಲು ಬಸ್ತಾರ್ ಪೊಲೀಸರು ಸಾಕಷ್ಟು ಶ್ರಮ ವಹಿಸಿದ್ದರು. ಈಗ ಮಾಜಿ ನಕ್ಸಲರಿಗೆ ಕಾನ್ಸ್​​ಟೇಬಲ್​ಗಳಾಗಿ ಕೆಲಸ ನೀಡುವ ಮೂಲಕ ಉಳಿದ ನಕ್ಸಲರಿಗೆ ಭರವಸೆ ನೀಡುತ್ತಿದ್ದಾರೆ.

ತರಬೇತಿ ಪಡೆದ ನಕ್ಸಲರನ್ನು ಕಾನ್‌ಸ್ಟೇಬಲ್‌ಗಳನ್ನಾಗಿ ಮಾಡಿ, ನಕ್ಸಲ್​ ಪೀಡಿತ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವುದು ನಮ್ಮ ಧ್ಯೇಯದ ಭಾಗವಾಗಲಿದೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ಶರಣಾದ ನಕ್ಸಲರನ್ನು 127 ನಕ್ಸಲೈಟ್‌ಗಳನ್ನು ಕಳೆದ 2 ವರ್ಷಗಳಿಂದ ಬೋಧಗಟ್ ಪಿಟಿಎಸ್‌ನಲ್ಲಿ ಇರಿಸಲಾಗಿತ್ತು. ಇದಾದ ನಂತರ 11 ತಿಂಗಳ ಕಠಿಣ ತರಬೇತಿ ನೀಡಲಾಗಿತ್ತು. ಇದರ ಜೊತೆಗೆ ಕಾನೂನು ಮಾಹಿತಿ ಮತ್ತು ಮಾನವ ಹಕ್ಕುಗಳ ತರಬೇತಿಯನ್ನು ನೀಡಿ ಕಾನ್ಸ್​ಟೇಬಲ್​ಗಳನ್ನಾಗಿ ನೇಮಿಸಲಾಗಿದೆ ಎಂದು ಡಾ. ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.