ಹೈದರಾಬಾದ್: ಮುನ್ನಡೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಮ್ಯಾಜಿಕ್ ನಂಬರ್ ದಾಟಿದ್ದು, ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿದೆ. ಕೇಂದ್ರದಲ್ಲಿ ತೃತೀಯರಂಗದ ಪ್ರಮುಖ ನಾಯಕರಲ್ಲಿ ಗುರುತಿಸಿಕೊಂಡಿದ್ದ ಚಂದ್ರಬಾಬು ನಾಯ್ಡುಗೆ ಈಗಿನ ಲೆಕ್ಕಾಚಾರ ಮುಜುಗರ ತಂದಿದೆ.
ಈ ನಡುವೆ ಆಂಧ್ರದಲ್ಲಿ ಭಾರಿ ಹವಾ ಕ್ರಿಯೇಟ್ ಮಾಡಿದ್ದ ಪವನ್ ಕಲ್ಯಾಣ್ ಅಣ್ಣನಂತೆ ಪ್ಲಾಪ್ ಶೋ ನಡೆಸಿದ್ದಾರೆ. ಇವರ ಜನಸೇನಾ ಪಾರ್ಟಿ ಸದ್ಯಕ್ಕೆ ಖಾತೆ ತೆರೆಯಲು ವಿಫಲವಾಗಿದೆ.
ಇನ್ನೊಂದೆಡೆ ಕೇಂದ್ರದ ವಿರುದ್ಧ ಸಿಡಿದೆದ್ದಿದ್ದ ಚಂದ್ರಬಾಬು ನಾಯ್ಡು ವೈಎಸ್ಆರ್ ಕಾಂಗ್ರೆಸ್ ಹೋರಾಟದ ಮುಂದೆ ಮಂಕಾಗಿ ಗರ್ವಭಂಗ ಎದುರಿಸುತ್ತಿದ್ದಾರೆ.
ಕಳೆದ ಬಾರಿ ಚಂದ್ರಬಾಬು ನಾಯ್ಡು ಜೊತೆ ಹೊಂದಾಣಿಕೆ ಮಾಡಿಕೊಂಡ ಪರಿಣಾಮ ಒಂದಿಷ್ಟು ಸ್ಥಾನ ಪಡೆದ ಬಿಜೆಪಿ ಈ ಬಾರಿ ಅಲ್ಲಿ ಸೊನ್ನೆ ಸುತ್ತಿದೆ. ಇನ್ನೊಂದೆಡೆ, ಕಾಂಗ್ರೆಸ್ ಸಹ ಖಾತೆ ತೆರೆಯಲು ವಿಫಲವಾಗಿದೆ. ಎರಡೂ ರಾಜಕೀಯ ಪಕ್ಷಗಳು ಆಂಧ್ರದಲ್ಲಿ ಮಕಾಡೆ ಮಲಗಿವೆ.