ETV Bharat / bharat

ಹಥ್ರಾಸ್​ ಸಂತ್ರೆಸ್ತೆಯ ಕುಟುಂಬದವರ ವಿಚಾರಣೆ ನಡೆಸಿದ ಸಿಬಿಐ

author img

By

Published : Oct 18, 2020, 7:36 AM IST

ಕೇಂದ್ರ ತನಿಖಾ ದಳ (ಸಿಬಿಐ) ಶನಿವಾರ ಹಥ್ರಾಸ್ ಘಟನೆಯ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.

CBI
ಸಿಬಿಐ

ಹಥ್ರಾಸ್​( ಉತ್ತರ ಪ್ರದೇಶ): ಹಥ್ರಾಸ್ ಸಾಮೂಹಿಕ​ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಲಿತ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಐದು ಗಂಟೆಗಳ ಕಾಲ ಕೇಂದ್ರೀಯ ತನಿಖಾ ದಳ ಶನಿವಾರ ಮತ್ತೊಮ್ಮೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಶನಿವಾರ ಮಧ್ಯಾಹ್ನ ಬೂಲ್ಗರಿ ಗ್ರಾಮಕ್ಕೆ ತಲುಪಿದ ಸಿಬಿಐ ಅಧಿಕಾರಿಗಳ ತಂಡ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಸುಮಾರು ಐದು ಗಂಟೆಗಳ ಕಾಲ ಅಲ್ಲೇ ಉಳಿದುಕೊಂಡು ಸಂತ್ರಸ್ತೆ ಅತ್ತಿಗೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಘಟನೆ ನಡೆದ ದಿನ ಅಂದರೆ ಸೆಪ್ಟಂಬರ್ 14 ರಂದು ಮನೆಯಲ್ಲಿ ಯಾರೆಲ್ಲಾ ಇದ್ದರು ಎಂಬೆಲ್ಲಾ ಮಾಹಿತಿಯನ್ನು ಅಧಿಕಾರಿಗಳು, ಕುಟುಂಬದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

"ಅಧಿಕಾರಿಗಳು ನನ್ನ ಬಳಿ ಹೆಚ್ಚೇನು ಪ್ರಶ್ನೆಗಳನ್ನು ಕೇಳಲಿಲ್ಲ. ಚೋಟು ಬಗ್ಗೆ ವಿಚಾರಿಸಿದರು, ಆದರೆ, ಆತನ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದೆ, ಅಲ್ಲದೇ ಮನೆಯಿಂದ ಸಂತ್ರಸ್ತೆಯ ಬಟ್ಟೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋದರು. ವಿಚಾರಣೆ ವೇಳೆ ನಾವು ಯಾವುದೇ ರೀತಿಯ ಒತ್ತಡ ಎದುರಿಸಲಿಲ್ಲ" ಎಂದು ಸಂತ್ರಸ್ತೆಯ ಅತ್ತಿಗೆ ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರದ ಅಧಿಸೂಚನೆಯ ನಂತರ ಸಿಬಿಐ ಈ ಪ್ರಕರಣವನ್ನು ಭಾನುವಾರ ವಹಿಸಿಕೊಂಡಿದೆ. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹೆಸರಿಸಲಾದ ನಾಲ್ವರು ಆರೋಪಿಗಳ ಕುಟುಂಬ ಸದಸ್ಯರ ಹೇಳಿಕೆಗಳನ್ನು ಸಿಬಿಐ ಗುರುವಾರ ದಾಖಲಿಸಿದೆ.

ಮಂಗಳವಾರ, ಸಿಬಿಐ ತಂಡವು ಆರು ಗಂಟೆಗಳ ಕಾಲ ಬೂಲ್ಗರಿ ಗ್ರಾಮದಲ್ಲಿ ಕಳೆದಿದ್ದು, ಅಪರಾಧದ ಸ್ಥಳ, ಅವಳನ್ನು ಅಂತ್ಯಕ್ರಿಯೆ ಮಾಡಿದ ಸ್ಥಳ ಮತ್ತು ಆಕೆಯ ಮನೆಗೆ ಭೇಟಿ ನೀಡಿ ಆಕೆಯ ರಕ್ತ ಸಂಬಂಧಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಹಥ್ರಾಸ್​ನಲ್ಲೇ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಉತ್ತರ ಪ್ರದೇಶ ಪೊಲೀಸರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿದೆ.

ಹಥ್ರಾಸ್​( ಉತ್ತರ ಪ್ರದೇಶ): ಹಥ್ರಾಸ್ ಸಾಮೂಹಿಕ​ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ದಲಿತ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಐದು ಗಂಟೆಗಳ ಕಾಲ ಕೇಂದ್ರೀಯ ತನಿಖಾ ದಳ ಶನಿವಾರ ಮತ್ತೊಮ್ಮೆ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.

ಶನಿವಾರ ಮಧ್ಯಾಹ್ನ ಬೂಲ್ಗರಿ ಗ್ರಾಮಕ್ಕೆ ತಲುಪಿದ ಸಿಬಿಐ ಅಧಿಕಾರಿಗಳ ತಂಡ, ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿ, ಸುಮಾರು ಐದು ಗಂಟೆಗಳ ಕಾಲ ಅಲ್ಲೇ ಉಳಿದುಕೊಂಡು ಸಂತ್ರಸ್ತೆ ಅತ್ತಿಗೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಘಟನೆ ನಡೆದ ದಿನ ಅಂದರೆ ಸೆಪ್ಟಂಬರ್ 14 ರಂದು ಮನೆಯಲ್ಲಿ ಯಾರೆಲ್ಲಾ ಇದ್ದರು ಎಂಬೆಲ್ಲಾ ಮಾಹಿತಿಯನ್ನು ಅಧಿಕಾರಿಗಳು, ಕುಟುಂಬದವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.

"ಅಧಿಕಾರಿಗಳು ನನ್ನ ಬಳಿ ಹೆಚ್ಚೇನು ಪ್ರಶ್ನೆಗಳನ್ನು ಕೇಳಲಿಲ್ಲ. ಚೋಟು ಬಗ್ಗೆ ವಿಚಾರಿಸಿದರು, ಆದರೆ, ಆತನ ಬಗ್ಗೆ ನನಗೆ ಯಾವುದೇ ಮಾಹಿತಿ ಗೊತ್ತಿಲ್ಲ ಎಂದು ತಿಳಿಸಿದೆ, ಅಲ್ಲದೇ ಮನೆಯಿಂದ ಸಂತ್ರಸ್ತೆಯ ಬಟ್ಟೆಯನ್ನು ಅಧಿಕಾರಿಗಳು ತೆಗೆದುಕೊಂಡು ಹೋದರು. ವಿಚಾರಣೆ ವೇಳೆ ನಾವು ಯಾವುದೇ ರೀತಿಯ ಒತ್ತಡ ಎದುರಿಸಲಿಲ್ಲ" ಎಂದು ಸಂತ್ರಸ್ತೆಯ ಅತ್ತಿಗೆ ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಕೋರಿಕೆಯ ಮೇರೆಗೆ ಕೇಂದ್ರದ ಅಧಿಸೂಚನೆಯ ನಂತರ ಸಿಬಿಐ ಈ ಪ್ರಕರಣವನ್ನು ಭಾನುವಾರ ವಹಿಸಿಕೊಂಡಿದೆ. ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಹೆಸರಿಸಲಾದ ನಾಲ್ವರು ಆರೋಪಿಗಳ ಕುಟುಂಬ ಸದಸ್ಯರ ಹೇಳಿಕೆಗಳನ್ನು ಸಿಬಿಐ ಗುರುವಾರ ದಾಖಲಿಸಿದೆ.

ಮಂಗಳವಾರ, ಸಿಬಿಐ ತಂಡವು ಆರು ಗಂಟೆಗಳ ಕಾಲ ಬೂಲ್ಗರಿ ಗ್ರಾಮದಲ್ಲಿ ಕಳೆದಿದ್ದು, ಅಪರಾಧದ ಸ್ಥಳ, ಅವಳನ್ನು ಅಂತ್ಯಕ್ರಿಯೆ ಮಾಡಿದ ಸ್ಥಳ ಮತ್ತು ಆಕೆಯ ಮನೆಗೆ ಭೇಟಿ ನೀಡಿ ಆಕೆಯ ರಕ್ತ ಸಂಬಂಧಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ.

ಕಳೆದ ನಾಲ್ಕು ದಿನಗಳಿಂದ ಹಥ್ರಾಸ್​ನಲ್ಲೇ ಉಳಿದುಕೊಂಡಿರುವ ಅಧಿಕಾರಿಗಳ ತಂಡ ಉತ್ತರ ಪ್ರದೇಶ ಪೊಲೀಸರಿಂದ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.