ETV Bharat / bharat

ಜಿಎಸ್​ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​

author img

By

Published : Feb 1, 2020, 11:51 AM IST

ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಸರ್ಕಾರ ಇಂದು ತನ್ನ ಎರಡನೇ ಬಜೆಟ್​ ಮಂಡಿಸುತ್ತಿದೆ. ಈ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಜಿಎಸ್​ಟಿಯ ಕುರಿತು ಹಲವು ಅಂಶಗಳನ್ನು ಸದನದ ಮುಂದಿಟ್ಟಿದ್ದಾರೆ.

Budget 2020: FM Sitharaman on GST
ಜಿಎಸ್​ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ

ನವದೆಹಲಿ : ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಸರ್ಕಾರ ಇಂದು ತನ್ನ ಎರಡನೇ ಬಜೆಟ್​ ಮಂಡಿಸುತ್ತಿದೆ. ಈ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಜಿಎಸ್​ಟಿಯ ಕುರಿತು ಹಲವು ಅಂಶಗಳನ್ನು ಸದನದ ಮುಂದಿಟ್ಟಿದ್ದಾರೆ.

ಕಡಿಮೆಯಾದ ಜಿಎಸ್​ಟಿ ದರಗಳ ಕಾರಣದಿಂದ ದೇಶದಲ್ಲಿ ಕುಟುಂಬವೊಂದು ಈಗ ತನ್ನ ಮಾಸಿಕ ಖರ್ಚಿನ ಸುಮಾರು ಶೇ.4 ರಷ್ಟನ್ನು ಉಳಿತಾಯ ಮಾಡಬಹುದಾಗಿದೆ. ಜಿಎಸ್​ಟಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ. ಜಿಎಸ್‌ಟಿಯಿಂದ ಗ್ರಾಹಕರಿಗೆ ವಾರ್ಷಿಕ 1 ಲಕ್ಷ ಕೋಟಿ ರೂಪಾಯಿ ಲಾಭವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

Budget 2020: FM Sitharaman on GST
ಜಿಎಸ್​ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ

ಜಿಎಸ್​ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ. ಜಿಎಸ್‌ಟಿಯಿಂದಾಗಿ ಟ್ರಕ್ ಮತ್ತು ಲಾಜಿಸ್ಟಿಕ್ಸ್ ವಹಿವಾಟು ಶೇ20 ರಷ್ಟು ಕಡಿಮೆಯಾಗಿದೆ. 2006-2016ರ ನಡುವೆ 271 ಮಿಲಿಯನ್ ಜನರನ್ನು ಬಡತನ ರೇಖೆಯಿಂದ ಮೇಲೆತರಲಾಗಿದೆ. ನಾವು ಈಗ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂದರು.

‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್’​ ಗಳಿಂದ ಮಾರ್ಗದರ್ಶಿಸಲ್ಪಟ್ಟ ನಾವು ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದ್ದೇವೆ. ನೇರ ಲಾಭ ಯೋಜನೆ, ಆಯುಷ್ಮಾನ್ ಭಾರತ್, ಉಜ್ವಾಲ್​ ಯೋಜನೆ, ಸಾಲ ಬೆಂಬಲ, ಡಿಜಿಟಲ್ ನುಗ್ಗುವಿಕೆ ಮತ್ತು ಕೈಗೆಟುಕುವ ವಸತಿಯಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಎಸ್​ಟಿ ಕೌನ್ಸಿಲ್ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾವು 15 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ಸೇರಿಸಿದ್ದೇವೆ ಎಂದು ಹಣಕಾಸು ಸಚಿವೆ ತಮ್ಮ ಬಜೆಟ್​ ಮಂಡನೆಯಲ್ಲಿ ತಿಳಿಸಿದರು.

ನವದೆಹಲಿ : ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ಸರ್ಕಾರ ಇಂದು ತನ್ನ ಎರಡನೇ ಬಜೆಟ್​ ಮಂಡಿಸುತ್ತಿದೆ. ಈ ವೇಳೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಜಿಎಸ್​ಟಿಯ ಕುರಿತು ಹಲವು ಅಂಶಗಳನ್ನು ಸದನದ ಮುಂದಿಟ್ಟಿದ್ದಾರೆ.

ಕಡಿಮೆಯಾದ ಜಿಎಸ್​ಟಿ ದರಗಳ ಕಾರಣದಿಂದ ದೇಶದಲ್ಲಿ ಕುಟುಂಬವೊಂದು ಈಗ ತನ್ನ ಮಾಸಿಕ ಖರ್ಚಿನ ಸುಮಾರು ಶೇ.4 ರಷ್ಟನ್ನು ಉಳಿತಾಯ ಮಾಡಬಹುದಾಗಿದೆ. ಜಿಎಸ್​ಟಿ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ದಕ್ಷತೆಯ ಲಾಭವನ್ನು ಗಳಿಸಿದೆ. ಜಿಎಸ್‌ಟಿಯಿಂದ ಗ್ರಾಹಕರಿಗೆ ವಾರ್ಷಿಕ 1 ಲಕ್ಷ ಕೋಟಿ ರೂಪಾಯಿ ಲಾಭವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದರು.

Budget 2020: FM Sitharaman on GST
ಜಿಎಸ್​ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ

ಜಿಎಸ್​ಟಿ ದೇಶವನ್ನು ಆರ್ಥಿಕವಾಗಿ ಸಂಯೋಜಿಸಿದೆ. ಜಿಎಸ್‌ಟಿಯಿಂದಾಗಿ ಟ್ರಕ್ ಮತ್ತು ಲಾಜಿಸ್ಟಿಕ್ಸ್ ವಹಿವಾಟು ಶೇ20 ರಷ್ಟು ಕಡಿಮೆಯಾಗಿದೆ. 2006-2016ರ ನಡುವೆ 271 ಮಿಲಿಯನ್ ಜನರನ್ನು ಬಡತನ ರೇಖೆಯಿಂದ ಮೇಲೆತರಲಾಗಿದೆ. ನಾವು ಈಗ ವಿಶ್ವದ 5 ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಎಂದರು.

‘ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್’​ ಗಳಿಂದ ಮಾರ್ಗದರ್ಶಿಸಲ್ಪಟ್ಟ ನಾವು ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಿದ್ದೇವೆ. ನೇರ ಲಾಭ ಯೋಜನೆ, ಆಯುಷ್ಮಾನ್ ಭಾರತ್, ಉಜ್ವಾಲ್​ ಯೋಜನೆ, ಸಾಲ ಬೆಂಬಲ, ಡಿಜಿಟಲ್ ನುಗ್ಗುವಿಕೆ ಮತ್ತು ಕೈಗೆಟುಕುವ ವಸತಿಯಂತಹ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಎಸ್​ಟಿ ಕೌನ್ಸಿಲ್ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಾವು 15 ಲಕ್ಷ ಹೊಸ ತೆರಿಗೆ ಪಾವತಿದಾರರನ್ನು ಸೇರಿಸಿದ್ದೇವೆ ಎಂದು ಹಣಕಾಸು ಸಚಿವೆ ತಮ್ಮ ಬಜೆಟ್​ ಮಂಡನೆಯಲ್ಲಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.