ಭೋಂಗಿರ್(ತೆಲಂಗಾಣ): 8 ನೇ ತರಗತಿ ಓದುತ್ತಿದ್ದ 13 ವರ್ಷದ ಬಾಲಕನೊಬ್ಬ ರಾಮಣ್ಣಾಪೇಟ್ನ ರೈಲ್ವೇ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬಾಲಕನ ಶಾಲೆಯಲ್ಲಿ ತರಗತಿ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಬಾಲಕ ಸೋತಿದ್ದನಂತೆ. ಇದರಿಂದ ನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬಾಲಕನ ಶವವು ರಾಮಣ್ಣಾಪೇಟ್ನ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಸಂಜೆ ಬಾಲಕ ನಾಪತ್ತೆಯಾಗಿರುವ ಬಗ್ಗೆ ನಮಗೆ ಪೋಷಕರಿಂದ ದೂರು ಬಂದಿತ್ತು. ಆ ಕ್ಷಣವೇ ಕಾರ್ಯಪ್ರವೃತ್ತರಾದ ನಾವು ಬಾಲಕನ ಪತ್ತೆಗೆ ಮುಂದಾದೆವು. ಆದರೆ ಬಾಲಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾನೆ ಎಂದು ಭೋಂಗಿರ್ ಡಿಸಿಪಿ ನಾರಾಯಾಣ ರೆಡ್ಡಿ ತಿಳಿಸಿದ್ದಾರೆ.
ಶಾಲೆಯಲ್ಲಿ ನಡೆದ ತರಗತಿ ನಾಯಕನ ಚುನಾವಣೆಯಲ್ಲಿ ಬಾಲಕ ಒಬ್ಬ ಬಾಲಕಿ ವಿರುದ್ಧ ಸೋತಿದ್ದ. ಹೀಗಾಗಿ ಬಾಲಕ ಮಾನಸಿಕವಾಗಿ ಕುಗ್ಗಿದ್ದ. ಇದರಿಂದಲೇ ನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಾರಾಯಾಣ ರೆಡ್ಡಿ ಹೇಳಿದ್ದಾರೆ.