ETV Bharat / bharat

ವಿಷಾಹಾರ ಸೇವಿಸಿ ನ್ಯಾಯಾಧೀಶ, ಪುತ್ರ ಸಾವು

author img

By

Published : Jul 26, 2020, 5:44 PM IST

ವಿಷಾಹಾರ ಸೇವಿಸಿ ಮಹಾರಾಷ್ಟ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಧ್ಯಪ್ರದೇಶದ ಬೆತುಲ್ ನ್ಯಾಯಾಧೀಶ ಹಾಗೂ ಅವರ ಪುತ್ರ ಮೃತಪಟ್ಟಿದ್ದಾರೆ.

poisoning
ಬೆತುಲ್ ನ್ಯಾಯಾಧೀಶ

ಮಧ್ಯಪ್ರದೇಶ: ವಿಷಾಹಾರ ಸೇವಿಸಿ ಮಧ್ಯಪ್ರದೇಶದ ಬೆತುಲ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಅವರ ಪುತ್ರ ಮೃತಪಟ್ಟಿದ್ದಾರೆ.

ವಿಷಾಹಾರ ಸೇವಿಸಿ ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯಲ್ಲಿ ಬೆತುಲ್​​ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಹೇಂದ್ರ ತ್ರಿಪಾಠಿ ಹಾಗೂ ಅವರ ಮಗ ಅಭಿಯಾನ ರಾಜ್ (33) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮಗ ಮತ್ತು ಇಂದು ಬೆಳಗ್ಗೆ ತಂದೆ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರದ್ಧಾ ಜೋಶಿ ತಿಳಿಸಿದ್ದಾರೆ.

ಜುಲೈ 20 ರಂದು ಕುಟುಂಬ ಸದಸ್ಯರೊಂದಿಗೆ ಊಟ ಮಾಡಿದ್ದ ಇಬ್ಬರಿಗೆ ಆರೋಗ್ಯ ಏರುಪೇರಾಗಿದ್ದರಿಂದ ಅವರನ್ನು ಜುಲೈ 23 ರಂದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದರಿಂದ ಶನಿವಾರ ರಾತ್ರಿ ನಾಗ್ಪುರದ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.

ನಾಗ್ಪುರದಲ್ಲೆ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಬೆತುಲ್​ಗೆ ಕಳುಹಿಸಲಾಗುವುದು ಎಂದು ಶ್ರದ್ಧಾ ಜೋಶಿ ಹೇಳಿದ್ದಾರೆ.

ಮಧ್ಯಪ್ರದೇಶ: ವಿಷಾಹಾರ ಸೇವಿಸಿ ಮಧ್ಯಪ್ರದೇಶದ ಬೆತುಲ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಅವರ ಪುತ್ರ ಮೃತಪಟ್ಟಿದ್ದಾರೆ.

ವಿಷಾಹಾರ ಸೇವಿಸಿ ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯಲ್ಲಿ ಬೆತುಲ್​​ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಹೇಂದ್ರ ತ್ರಿಪಾಠಿ ಹಾಗೂ ಅವರ ಮಗ ಅಭಿಯಾನ ರಾಜ್ (33) ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮಗ ಮತ್ತು ಇಂದು ಬೆಳಗ್ಗೆ ತಂದೆ ಸಾವನ್ನಪ್ಪಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರದ್ಧಾ ಜೋಶಿ ತಿಳಿಸಿದ್ದಾರೆ.

ಜುಲೈ 20 ರಂದು ಕುಟುಂಬ ಸದಸ್ಯರೊಂದಿಗೆ ಊಟ ಮಾಡಿದ್ದ ಇಬ್ಬರಿಗೆ ಆರೋಗ್ಯ ಏರುಪೇರಾಗಿದ್ದರಿಂದ ಅವರನ್ನು ಜುಲೈ 23 ರಂದು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಸ್ಥಿತಿ ಗಂಭೀರವಾಗಿದ್ದರಿಂದ ಶನಿವಾರ ರಾತ್ರಿ ನಾಗ್ಪುರದ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.

ನಾಗ್ಪುರದಲ್ಲೆ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಬೆತುಲ್​ಗೆ ಕಳುಹಿಸಲಾಗುವುದು ಎಂದು ಶ್ರದ್ಧಾ ಜೋಶಿ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.