ನವದೆಹಲಿ: ಭಾರತ ಹಾಗೂ ಭಾರತೀಯ ಸೇನೆಯ ವಿಚಾರದಲ್ಲಿ ಪ್ರತಿ ಬಾರಿಯೂ ನರಿ ಬುದ್ಧಿ ತೋರುವ ಪಾಕಿಸ್ತಾನ ಈ ಬಾರಿಯೂ ಹಸಿ ಸುಳ್ಳು ಹೇಳಿ ವಿಶ್ವಮಟ್ಟದಲ್ಲಿ ಬೆತ್ತಲಾಗಿದೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೈನಿಕರು ಭಾರತೀಯ ಸೇನೆಗೆ ಸೇರಿದ ಐವರನ್ನು ಕೊಂದಿದ್ದೇವೆ ಎಂದು ಹೇಳಿಕೆ ನೀಡಿತ್ತು. ಸದ್ಯ ಈ ಹೇಳಿಕೆಯನ್ನು ಅಲ್ಲಗಳೆದಿರುವ ಭಾರತೀಯ ಸೇನೆ ಅಂತಹ ಯಾವುದೇ ಸಾವು - ನೋವು ಆಗಿಲ್ಲ ಎಂದಿದೆ.
ಸ್ವಾತಂತ್ರ್ಯೋತ್ಸವ ದಿನವೇ ಕದನ ವಿರಾಮ ಉಲ್ಲಂಘನೆ... ಪಾಕ್ನ ಮೂವರು ಯೋಧರನ್ನು ಹೊಡೆದುರುಳಿಸಿದ ಸೇನೆ!
ಪಾಕಿಸ್ತಾನದ ಹೇಳಿಕೆ ನಿರಾಧಾರ ಮತ್ತು ಕಪೋಲ ಕಲ್ಪಿತ. ಪಾಕ್ ಸೇನೆಯ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಅಲ್ಲಗಳೆಯುತ್ತೇವೆ ಎಂದು ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಹೇಳಿದ್ದಾರೆ.
ಸ್ವಾತಂತ್ರ್ಯ ದಿನವೇ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿತ್ತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.