ETV Bharat / bharat

ಕೇಬಲ್​​ ಅಳವಡಿಸುವ ವೇಳೆ ವಿದ್ಯುತ್ ಶಾಕ್​:  ಇಬ್ಬರು ಬಲಿ - ಗೋಪಾಲಪಟ್ಣಂ ಪೊಲೀಸ್​

ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಶಾಕ್​ನಿಂದ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

labours died
ಕಾರ್ಮಿಕರ ಸಾವು
author img

By

Published : Jul 20, 2020, 10:33 AM IST

Updated : Jul 20, 2020, 10:53 AM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಭೂಮಿಯೊಳಗೆ ಕೇಬಲ್ ತಂತಿ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್​ಗೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ವಿಶಾಖಪಟ್ಟಣಂ ಬಳಿ ಇರುವ ಅಡವಿವರಂ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು 60 ವರ್ಷದ ಎನ್​.ದೇಮುಡು ಹಾಗೂ 36 ವರ್ಷದ ಪಿ.ನರಸಿಂಗರಾಜು ಎಂದು ಗುರುತಿಸಲಾಗಿದೆ. ಶಾಕ್​ಗೆ ಒಳಗಾದ ತಕ್ಷಣ ಇವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಮೃತಪಟ್ಟಿದ್ದಾರೆ.

ಭೂಮಿಯೊಳಗೆ ಹೊಸ ಫೈಬರ್ ಕೇಬಲ್​ ಅಳವಡಿಸುವ ವೇಳೆ ವಿದ್ಯುತ್ ಕಂಬದ ವೈರ್​ಗಳಿಗೆ ಕೇಬಲ್ ವೈರ್ ಸ್ಪರ್ಶಿಸಿದ ಕಾರಣ ಸಾವು ಸಂಭವಿಸಿದೆ ಎಂದು ಗೋಪಾಲಪಟ್ಣಂ ಇನ್ಸ್​ಪೆಕ್ಟರ್​ ಅಪ್ಪಾರಾವ್ ಸ್ಪಷ್ಟನೆ ನೀಡಿದ್ದು, ತನಿಖೆ ಮುಂದುವರೆದಿದೆ.

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಭೂಮಿಯೊಳಗೆ ಕೇಬಲ್ ತಂತಿ ಅಳವಡಿಸುತ್ತಿದ್ದ ವೇಳೆ ವಿದ್ಯುತ್ ಶಾಕ್​ಗೆ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ವಿಶಾಖಪಟ್ಟಣಂ ಬಳಿ ಇರುವ ಅಡವಿವರಂ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು 60 ವರ್ಷದ ಎನ್​.ದೇಮುಡು ಹಾಗೂ 36 ವರ್ಷದ ಪಿ.ನರಸಿಂಗರಾಜು ಎಂದು ಗುರುತಿಸಲಾಗಿದೆ. ಶಾಕ್​ಗೆ ಒಳಗಾದ ತಕ್ಷಣ ಇವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರಿಬ್ಬರೂ ಮೃತಪಟ್ಟಿದ್ದಾರೆ.

ಭೂಮಿಯೊಳಗೆ ಹೊಸ ಫೈಬರ್ ಕೇಬಲ್​ ಅಳವಡಿಸುವ ವೇಳೆ ವಿದ್ಯುತ್ ಕಂಬದ ವೈರ್​ಗಳಿಗೆ ಕೇಬಲ್ ವೈರ್ ಸ್ಪರ್ಶಿಸಿದ ಕಾರಣ ಸಾವು ಸಂಭವಿಸಿದೆ ಎಂದು ಗೋಪಾಲಪಟ್ಣಂ ಇನ್ಸ್​ಪೆಕ್ಟರ್​ ಅಪ್ಪಾರಾವ್ ಸ್ಪಷ್ಟನೆ ನೀಡಿದ್ದು, ತನಿಖೆ ಮುಂದುವರೆದಿದೆ.

Last Updated : Jul 20, 2020, 10:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.