ಆಂಧ್ರಪ್ರದೇಶದಲ್ಲಿ ಸೂರ್ಯನ ಪ್ರಖರತೆಯಷ್ಟೇ ತೀಕ್ಷ್ಣವಾಗಿ ಎಲೆಕ್ಷನ್ ಕಾವು ಜೋರಾಗಿದೆ. ಈ ಕಾವನ್ನೇ ಮತ್ತಷ್ಟು ಹೆಚ್ಚಾಗುವಂತೆ ಮಾಡಿದ್ದು, ವೈಆರ್ಎಸ್ ಕಾಂಗ್ರೆಸ್ ಎಂಪಿ ಅಭ್ಯರ್ಥಿ. ಇವರು ಮಾಡಿದ್ದೇನಪ್ಪ ಅಂದ್ರೆ ಇವ್ರೆ ಎಣ್ಣೆ ಹಾಕಿ ಹಿಗ್ಗಾ ಮುಗ್ಗಾ ಮಾತನಾಡಿದ್ದು.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಪೂರ್ವ ಗೋದಾವರಿ ಜಿಲ್ಲೆಯ ನರ್ಸಾಪುರ್ ಎಂಪಿ ಅಭ್ಯರ್ಥಿ ರಘುರಾಂ ಕೃಷ್ಣಂ ರಾಜು, ಭೀಮಾವರಂನ ಎಂಎಲ್ಎ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ಅದು ಕುಡಿದ ಮತ್ತಿನಲ್ಲಿ
ಭೀಮಾವರಂನಿಂದ ಪವನ್ ಕಲ್ಯಾಣ್ ಸ್ಪರ್ಧಿಸುತ್ತಿರುವ ವಿಚಾರ ಗೊತ್ತಿದೆ. ಅವರ ವಿರುದ್ಧ ಕುಡಿದು ಅಲಗಾಡುತ್ತಲೇ ವಾಗ್ದಾಳಿ ನಡೆಸಿದ ರಘುರಾಂ, ಗಬ್ಬರ್ ಸಿಂಗ್, ಸರ್ದಾರ್ ಗಬ್ಬರ್ ಸಿಂಗ್ ಅಂತಹ ಹೀರೋಗಳನ್ನು ಸೋಲಿಸುವ ಶಕ್ತಿ ನಮ್ಮ ಅಭ್ಯರ್ಥಿಗೆ ಇದೆ. ನಮ್ಮ ಅಭ್ಯರ್ಥಿ ವಿರುದ್ಧ ಯಾರೇ ನಿಂತರೂ ಸೋಲು ಖಚಿತ ಎಂದು ಪವನ್ ಕಲ್ಯಾಣ್ ವಿರುದ್ಧ ಹರಿಹಾಯ್ದರು.
ಇನ್ನು ರಘುರಾಂ ಕೃಷ್ಣಂ ರಾಜು ಕುಡಿದು ಭಾಷಣ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.