ETV Bharat / bharat

ಪ್ರತಿಭಟನಾನಿರತ ರೈತರನ್ನು ಭಯೋತ್ಪಾದಕರಂತೆ ಕಾಣಲಾಗುತ್ತಿದೆ.. ಸಂಜಯ್ ರಾವತ್ ಕಿಡಿ​

author img

By

Published : Nov 29, 2020, 6:13 PM IST

ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣ, ಪಂಜಾಬ್​​ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ದೆಹಲಿ ಪ್ರವೇಶಿಸದಂತೆ ಟಿಕ್ರಿ, ಸಿಂಘು ಗಡಿಯಲ್ಲೇ ತಡೆಯಲಾಗುತ್ತಿದೆ. ಅಲ್ಲದೇ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗುತ್ತಿದೆ..

Sanjay Raut
ಸಂಜಯ್​ ರಾವತ್

ಮುಂಬೈ (ಮಹಾರಾಷ್ಟ್ರ): ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯುತ್ತಿರುವ ರೀತಿಯನ್ನು ನೋಡಿದರೆ ರೈತರನ್ನು ಭಯೋತ್ಪಾದಕರಂತೆ ಪರಿಗಣಿಸಿದಂತೆ ಅನ್ನಿಸುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ಅವರನ್ನು ತಡೆದ ರೀತಿಯು ಆ ರೈತರು ನಮ್ಮ ದೇಶದವರಲ್ಲ ಎಂಬಂತೆ ತೋರುತ್ತಿದೆ. ಅವರು ಸಿಖ್ ಧರ್ಮಕ್ಕೆ ಸೇರಿದವರಾದ್ದರಿಂದ ಹಾಗೂ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ಕಾರಣ ರೈತರನ್ನು 'ಖಲಿಸ್ತಾನಿ'ಗಳು ಎಂದೂ ಕರೆಯಲಾಗುತ್ತಿದೆ. ಇದು ಅನ್ನದಾತನಿಗೆ ಮಾಡುವ ಅವಮಾನ ಎಂದು ರಾವತ್​ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣ, ಪಂಜಾಬ್​​ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ದೆಹಲಿ ಪ್ರವೇಶಿಸದಂತೆ ಟಿಕ್ರಿ, ಸಿಂಘು ಗಡಿಯಲ್ಲೇ ತಡೆಯಲಾಗುತ್ತಿದೆ. ಅಲ್ಲದೇ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗುತ್ತಿದೆ.

ಮುಂಬೈ (ಮಹಾರಾಷ್ಟ್ರ): ರೈತರು ದೆಹಲಿಗೆ ಪ್ರವೇಶಿಸುವುದನ್ನು ತಡೆಯುತ್ತಿರುವ ರೀತಿಯನ್ನು ನೋಡಿದರೆ ರೈತರನ್ನು ಭಯೋತ್ಪಾದಕರಂತೆ ಪರಿಗಣಿಸಿದಂತೆ ಅನ್ನಿಸುತ್ತಿದೆ ಎಂದು ಶಿವಸೇನೆ ಸಂಸದ ಸಂಜಯ್​ ರಾವತ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ಅವರನ್ನು ತಡೆದ ರೀತಿಯು ಆ ರೈತರು ನಮ್ಮ ದೇಶದವರಲ್ಲ ಎಂಬಂತೆ ತೋರುತ್ತಿದೆ. ಅವರು ಸಿಖ್ ಧರ್ಮಕ್ಕೆ ಸೇರಿದವರಾದ್ದರಿಂದ ಹಾಗೂ ಪಂಜಾಬ್ ಮತ್ತು ಹರಿಯಾಣದಿಂದ ಬಂದಿರುವ ಕಾರಣ ರೈತರನ್ನು 'ಖಲಿಸ್ತಾನಿ'ಗಳು ಎಂದೂ ಕರೆಯಲಾಗುತ್ತಿದೆ. ಇದು ಅನ್ನದಾತನಿಗೆ ಮಾಡುವ ಅವಮಾನ ಎಂದು ರಾವತ್​ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಹರಿಯಾಣ, ಪಂಜಾಬ್​​ ರೈತರು 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ. ಇವರು ದೆಹಲಿ ಪ್ರವೇಶಿಸದಂತೆ ಟಿಕ್ರಿ, ಸಿಂಘು ಗಡಿಯಲ್ಲೇ ತಡೆಯಲಾಗುತ್ತಿದೆ. ಅಲ್ಲದೇ ಪ್ರತಿಭಟನಾನಿರತ ರೈತರ ಮೇಲೆ ಜಲಫಿರಂಗಿ, ಅಶ್ರುವಾಯು ಪ್ರಯೋಗಿಸಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.