ETV Bharat / bharat

ಒಂದು ಜೀವ, 400 ಕಿಮೀ, 5 ಗಂಟೆ: ಆ್ಯಂಬುಲೆನ್ಸ್ ಚಾಲಕನ ಸಾಹಸಕ್ಕೆ ಭಾರಿ ಮೆಚ್ಚುಗೆ

ಆ್ಯಂಬುಲೆನ್ಸ್ ಚಾಲಕ, ಯುವಕನೊಬ್ಬನ ಪ್ರಾಣ ಉಳಿಸಲು ತಮಿಳುನಾಡಿನ ರಾಮನಾಥಪುರಂನಿಂದ ಪುದುಚೇರಿಗೆ ಕೇವಲ ಐದು ಗಂಟೆಯಲ್ಲಿ ಪ್ರಯಾಣಿಸಿ ಜೀವ ಉಳಿಸಿದ್ದಾನೆ. ಚಾಲಕನ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

author img

By

Published : Sep 4, 2019, 10:22 AM IST

ಆ್ಯಂಬುಲೆನ್ಸ್

ರಾಮನಾಥಪುರಂ(ತಮಿಳುನಾಡು): ಯುವಕನ ಪ್ರಾಣ ಉಳಿಸಲು ಆ್ಯಂಬುಲೆನ್ಸ್‌ ಚಾಲಕ ತಮಿಳುನಾಡಿನ ರಾಮನಾಥಪುರಂನಿಂದ ಪುದುಚೇರಿಯ ನಡುವೆ ಇರುವ ಸುಮಾರು 400 ಕಿ ಮೀ ದೂರವನ್ನು ಕೇವಲ ಐದು ಗಂಟೆಗಳಲ್ಲಿ ಕ್ರಮಿಸಿ ಆಸ್ಪತ್ರೆ ತಲುಪಿಸಿದ ಅಪರೂಪದ ಘಟನೆ ನಡೆದಿದೆ.

ತಮಿಳುನಾಡಿನ ರಾಮನಾಥಪುರಂನಲ್ಲಿ ವಾಸವಾಗಿದ್ದ ನೈನಾರ್​ ಮೊಹಮ್ಮದ್-ಜೆಸಿಮಾ ದಂಪತಿಯ ಪುತ್ರ ಮೊಹಮ್ಮದ್ ಅಮೀರ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ. ಇದೇ ಕಾರಣಕ್ಕೆ ಮೊಹಮ್ಮದ್ ಅಮೀರ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಈತನನ್ನು ಪುದುಚೇರಿಯ ಜಿಪ್​ಮೆರ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ಆದರೆ ರಾಮನಾಥಪುರಂ ಹಾಗೂ ಪುದುಚೇರಿ ನಡುವಿನ ಅಂತರ ಸುಮಾರು 400 ಕಿ ಮೀ ಇದ್ದು, ಎಂಟು ಗಂಟೆ ಪ್ರಯಾಣಿಸಬೇಕಿದೆ. ಆದರೆ ಇದೇ ವೇಳೆ ತಮಿಳುನಾಡು ಮುಸ್ಲಿಮ್​ ಮುನ್ನೇತ್ರ ಕಳಗಂ ಪಕ್ಷ ಈ ಯುವಕನ ಪಾಲಿಗೆ ಆಶಾಕಿರಣವಾಗಿ ಕಾಣಿಸಿಕೊಂಡಿತು. ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ರಾಮನಾಥಪುರಂನಿಂದ ಪುದುಚೇರಿಗೆ ಆ್ಯಂಬುಲೆನ್ಸ್ ತೆರಳಲು ಟ್ರಾಫಿಕ್​​ ಫ್ರೀ ವ್ಯವಸ್ಥೆ ಮಾಡಲಾಯಿತು.

ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಇಜಾಜ್​​ ಕೇವಲ ಐದು ಗಂಟೆಯಲ್ಲಿ ಮೊಹಮ್ಮದ್ ಅಮೀರ್​ನನ್ನು ಪುದುಚೇರಿಗೆ ತಲುಪಿಸಿ ಜೀವ ಉಳಿಸಿದ್ದಾನೆ. ಚಾಲಕನ ಸಾಹಸ ಹಾಗೂ ರಾಜಕೀಯ ಪಕ್ಷದ ಮಾನವೀಯ ನಡೆಗೆ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ರಾಮನಾಥಪುರಂ(ತಮಿಳುನಾಡು): ಯುವಕನ ಪ್ರಾಣ ಉಳಿಸಲು ಆ್ಯಂಬುಲೆನ್ಸ್‌ ಚಾಲಕ ತಮಿಳುನಾಡಿನ ರಾಮನಾಥಪುರಂನಿಂದ ಪುದುಚೇರಿಯ ನಡುವೆ ಇರುವ ಸುಮಾರು 400 ಕಿ ಮೀ ದೂರವನ್ನು ಕೇವಲ ಐದು ಗಂಟೆಗಳಲ್ಲಿ ಕ್ರಮಿಸಿ ಆಸ್ಪತ್ರೆ ತಲುಪಿಸಿದ ಅಪರೂಪದ ಘಟನೆ ನಡೆದಿದೆ.

ತಮಿಳುನಾಡಿನ ರಾಮನಾಥಪುರಂನಲ್ಲಿ ವಾಸವಾಗಿದ್ದ ನೈನಾರ್​ ಮೊಹಮ್ಮದ್-ಜೆಸಿಮಾ ದಂಪತಿಯ ಪುತ್ರ ಮೊಹಮ್ಮದ್ ಅಮೀರ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ. ಇದೇ ಕಾರಣಕ್ಕೆ ಮೊಹಮ್ಮದ್ ಅಮೀರ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಈತನನ್ನು ಪುದುಚೇರಿಯ ಜಿಪ್​ಮೆರ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು.

ಆದರೆ ರಾಮನಾಥಪುರಂ ಹಾಗೂ ಪುದುಚೇರಿ ನಡುವಿನ ಅಂತರ ಸುಮಾರು 400 ಕಿ ಮೀ ಇದ್ದು, ಎಂಟು ಗಂಟೆ ಪ್ರಯಾಣಿಸಬೇಕಿದೆ. ಆದರೆ ಇದೇ ವೇಳೆ ತಮಿಳುನಾಡು ಮುಸ್ಲಿಮ್​ ಮುನ್ನೇತ್ರ ಕಳಗಂ ಪಕ್ಷ ಈ ಯುವಕನ ಪಾಲಿಗೆ ಆಶಾಕಿರಣವಾಗಿ ಕಾಣಿಸಿಕೊಂಡಿತು. ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಿ ರಾಮನಾಥಪುರಂನಿಂದ ಪುದುಚೇರಿಗೆ ಆ್ಯಂಬುಲೆನ್ಸ್ ತೆರಳಲು ಟ್ರಾಫಿಕ್​​ ಫ್ರೀ ವ್ಯವಸ್ಥೆ ಮಾಡಲಾಯಿತು.

ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಇಜಾಜ್​​ ಕೇವಲ ಐದು ಗಂಟೆಯಲ್ಲಿ ಮೊಹಮ್ಮದ್ ಅಮೀರ್​ನನ್ನು ಪುದುಚೇರಿಗೆ ತಲುಪಿಸಿ ಜೀವ ಉಳಿಸಿದ್ದಾನೆ. ಚಾಲಕನ ಸಾಹಸ ಹಾಗೂ ರಾಜಕೀಯ ಪಕ್ಷದ ಮಾನವೀಯ ನಡೆಗೆ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Intro:Body:

ಡ್ರೈವರ್



ರಾಮನಾಥಪುರಂ(ತಮಿಳುನಾಡು): ಒಂದು ಪ್ರಾಣ ಉಳಿಸಲು ಆ್ಯಂಬುಲೆನ್​​ವೊಂದು ತಮಿಳುನಾಡಿನ ರಾಮನಾಥಪುರಂನಿಂದ  ಪುದುಚೆರಿಗೆ ಕೇವಲ ಐದು ಗಂಟೆಯಲ್ಲಿ ಪ್ರಯಾಣಿಸಿದ ಅಪರೂಪದ ಘಟನೆ ನಡೆದಿದೆ.



ತಮಿಳುನಾಡಿನ ರಾಮನಾಥಪುರಂನಲ್ಲಿ ವಾಸವಾಗಿದ್ದ ನೈನಾರ್​ ಮೊಹಮ್ಮದ್- ಜೆಸಿಮಾ ದಂಪತಿಯ ಪುತ್ರ ಮೊಹಮದ್ ಅಮೀರ್ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿದ್ದ. ಇದೇ ಕಾರಣಕ್ಕೆ ಮೊಹಮ್ಮದ್ ಅಮೀರ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಈತನನ್ನು ಪುದುಚೇರಿಯ ಜಿಪ್​ಮೆರ್ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದ್ದರು.



ಆದರೆ ರಾಮನಾಥಪುರಂ ಹಾಗೂ  ಪುದುಚೆರಿ ನಡುವಿನ ಅಂತರ ಬಹಳ ದೊಡ್ಡ ದಾಗಿದ್ದು, ಎಂಟು ಗಂಟೆ ಪ್ರಯಾಣಿಸಬೇಕಿದೆ. ಆದರೆ ಇದೇ ವೇಳೆ  ತಮಿಳುನಾಡು ಮುಸ್ಲಿಮ್​ ಮುನ್ನೇತ್ರ ಕಳಗಂ ಪಕ್ಷ ಆಶಾಕಿರಣವಾಗಿ ಕಾಣಿಸಿಕೊಂಡಿತು. ಸಂಬಂಧಿಸಿದ ಪೊಲೀಸ್ ಅಧಿಕಾರಿಗೆ ಮಾಹಿತಿ ರವಾನೆ ಮಾಡಿ ರಾಮನಾಥಪುರಂನಿಂದ  ಪುದುಚೆರಿಗೆ ಆ್ಯಂಬುಲೆನ್ಸ್ ತೆರಳಲು ಟ್ರಾಫಿಕ್​​ ಫ್ರೀ ಮಾಡಲಾಯಿತು.



ಆ್ಯಂಬುಲೆನ್ಸ್ ಚಾಲಕ ಮೊಹಮ್ಮದ್ ಇಜಾಜ್​​ ಕೇವಲ ಐದು ಗಂಟೆಯಲ್ಲಿ ಮೊಹಮ್ಮದ್ ಅಮೀರ್​ನನ್ನು ಪುದುಚೆರಿಗೆ ತಲುಪಿಸಿ ಜೀವ ಉಳಿಸಿದ್ದಾನೆ. ಚಾಲಕನ ಸಾಹಸ ಹಾಗೂ ರಾಜಕೀಯ ಪಕ್ಷದ ಮಾನವೀಯ ನಡೆಗೆ ಜನತೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.