ETV Bharat / bharat

2021ರ ಜನವರಿ ವೇಳೆಗೆ ಭಾರತದಲ್ಲಿ ಕೋವಿಡ್​ ಲಸಿಕೆ, ಆದರೆ ಇಷ್ಟೊಂದು ಚಾಲೆಂಜ್​: ಏಮ್ಸ್​​​ ಡೈರೆಕ್ಟರ್​!

author img

By

Published : Oct 2, 2020, 3:52 PM IST

ಕೊರೊನಾ ವೈರಸ್​ ನಿಗ್ರಹಕ್ಕಾಗಿ ದೇಶದಲ್ಲಿ ಲಸಿಕೆ ಕಂಡು ಹಿಡಿಯುತ್ತಿರುವ ಕೆಲಸ ಮುಂದುವರೆದಿದ್ದು, ಇದೇ ವಿಚಾರವಾಗಿ ಏಮ್ಸ್​​ ಡೈರೆಕ್ಟರ್​​ ಮಾತನಾಡಿದ್ದಾರೆ.

AIIMS Director Randeep Guleria
AIIMS Director Randeep Guleria

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಇಲ್ಲಿಯವರೆಗೆ ಯಾವುದೇ ದೇಶಗಳು ಲಸಿಕೆ ಕಂಡು ಹಿಡಿದಿಲ್ಲ. ಆದರೆ ಅನೇಕ ದೇಶಗಳಿಂದ ಲಸಿಕೆ ಮೇಲಿನ ಪ್ರಯೋಗ ಮುಂದುವರೆದಿದ್ದು, ಭಾರತ ಕೂಡ ಅದರಿಂದ ಹಿಂದೆ ಬಿದ್ದಿಲ್ಲ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಲ್​ ಇಂಡಿಯಾ ಇನ್ಸಿಟ್ಯೂಟ್​​​ ಆಫ್​​ ಮೆಡಿಕಲ್​ ಸೈನ್ಸ್​(ಏಮ್ಸ್​​) ಡೈರೆಕ್ಟರ್​​ ಡಾ.ರಂದೀಪ್​​ ಗುಲೇರಿಯಾ, 2021ರ ಜನವರಿ ವೇಳೆಗೆ ಭಾರತದಲ್ಲಿ ಕೋವಿಡ್​ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ. ಆದರೆ, ಎಲ್ಲವೂ ಅಂದುಕೊಂಡಿರುವ ಹಾಗೇ ನಡೆದರೆ ಮಾತ್ರ ಇದು ಸಾಧ್ಯ ಎಂದು ತಿಳಿಸಿದ್ದಾರೆ.

ಕೋವಿಡ್​ ಲಸಿಕೆ ಕಂಡು ಹಿಡಿಯುವ ಕೆಲಸ ಮುಂದುವರೆದಿದ್ದು, ಎಲ್ಲವೂ ಯೋಜನೆ ಪ್ರಕಾರ ನಡೆದರೆ ಜನವರಿ ವೇಳೆಗೆ ಮಾರುಕಟ್ಟೆಗೆ ಈ ಔಷಧ ಸಿಗಲಿದೆ ಎಂದಿದ್ದಾರೆ. ಇದರ ಜತೆಗೆ ದೇಶದ ಜನರಿಗೆ ಏಕಕಾಲದಲ್ಲಿ ಲಭ್ಯವಾಗುವಷ್ಟು ಔಷಧ ಉತ್ಪನ್ನ ಮಾಡುವುದು ಹಾಗೂ ವಿತರಣೆ ಮಾಡುವುದು ಸಾಧ್ಯವಾಗದ ಮಾತು ಎಂಬ ಮಾತು ಸಹ ಹೇಳಿದ್ದಾರೆ.

ಆರಂಭದಲ್ಲಿ ಕೋವಿಡ್​ನಿಂದ ಅತಿ ಹೆಚ್ಚು ತೊಂದರೆಗೊಳಗಾಗುತ್ತಿರುವವರಿಗೆ ಈ ಲಸಿಕೆ ನೀಡಲಾಗುವುದು ಎಂದಿರುವ ಅವರು, ಹೆಲ್ತ್​ಕೇರ್​ ಸಿಬ್ಬಂದಿ, ಕೊರೊನಾ ವಾರಿಯರ್ಸ್​​​ಗೆ ನೀಡಲಾಗುವುದು ಎಂದಿದ್ದಾರೆ. ಮಹಾಮಾರಿ ಕೊರೊನಾ ವೈರಸ್​ನಿಂದ ದೂರ ಇರಬೇಕಾದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಕೊರೊನಾ ಕೇಸ್​ಗಳು ಕಾಣಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇಂದು ಮುಂದುವರೆದರೆ ದೇಶದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಲಿದೆ ಎಂದಿದ್ದಾರೆ.

ನವದೆಹಲಿ: ಮಹಾಮಾರಿ ಕೊರೊನಾ ವಿರುದ್ಧ ಇಲ್ಲಿಯವರೆಗೆ ಯಾವುದೇ ದೇಶಗಳು ಲಸಿಕೆ ಕಂಡು ಹಿಡಿದಿಲ್ಲ. ಆದರೆ ಅನೇಕ ದೇಶಗಳಿಂದ ಲಸಿಕೆ ಮೇಲಿನ ಪ್ರಯೋಗ ಮುಂದುವರೆದಿದ್ದು, ಭಾರತ ಕೂಡ ಅದರಿಂದ ಹಿಂದೆ ಬಿದ್ದಿಲ್ಲ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆಲ್​ ಇಂಡಿಯಾ ಇನ್ಸಿಟ್ಯೂಟ್​​​ ಆಫ್​​ ಮೆಡಿಕಲ್​ ಸೈನ್ಸ್​(ಏಮ್ಸ್​​) ಡೈರೆಕ್ಟರ್​​ ಡಾ.ರಂದೀಪ್​​ ಗುಲೇರಿಯಾ, 2021ರ ಜನವರಿ ವೇಳೆಗೆ ಭಾರತದಲ್ಲಿ ಕೋವಿಡ್​ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ. ಆದರೆ, ಎಲ್ಲವೂ ಅಂದುಕೊಂಡಿರುವ ಹಾಗೇ ನಡೆದರೆ ಮಾತ್ರ ಇದು ಸಾಧ್ಯ ಎಂದು ತಿಳಿಸಿದ್ದಾರೆ.

ಕೋವಿಡ್​ ಲಸಿಕೆ ಕಂಡು ಹಿಡಿಯುವ ಕೆಲಸ ಮುಂದುವರೆದಿದ್ದು, ಎಲ್ಲವೂ ಯೋಜನೆ ಪ್ರಕಾರ ನಡೆದರೆ ಜನವರಿ ವೇಳೆಗೆ ಮಾರುಕಟ್ಟೆಗೆ ಈ ಔಷಧ ಸಿಗಲಿದೆ ಎಂದಿದ್ದಾರೆ. ಇದರ ಜತೆಗೆ ದೇಶದ ಜನರಿಗೆ ಏಕಕಾಲದಲ್ಲಿ ಲಭ್ಯವಾಗುವಷ್ಟು ಔಷಧ ಉತ್ಪನ್ನ ಮಾಡುವುದು ಹಾಗೂ ವಿತರಣೆ ಮಾಡುವುದು ಸಾಧ್ಯವಾಗದ ಮಾತು ಎಂಬ ಮಾತು ಸಹ ಹೇಳಿದ್ದಾರೆ.

ಆರಂಭದಲ್ಲಿ ಕೋವಿಡ್​ನಿಂದ ಅತಿ ಹೆಚ್ಚು ತೊಂದರೆಗೊಳಗಾಗುತ್ತಿರುವವರಿಗೆ ಈ ಲಸಿಕೆ ನೀಡಲಾಗುವುದು ಎಂದಿರುವ ಅವರು, ಹೆಲ್ತ್​ಕೇರ್​ ಸಿಬ್ಬಂದಿ, ಕೊರೊನಾ ವಾರಿಯರ್ಸ್​​​ಗೆ ನೀಡಲಾಗುವುದು ಎಂದಿದ್ದಾರೆ. ಮಹಾಮಾರಿ ಕೊರೊನಾ ವೈರಸ್​ನಿಂದ ದೂರ ಇರಬೇಕಾದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ದೇಶದಲ್ಲಿ ಕಳೆದ ಕೆಲ ದಿನಗಳಿಂದ ಅತಿ ಹೆಚ್ಚು ಕೊರೊನಾ ಕೇಸ್​ಗಳು ಕಾಣಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇಂದು ಮುಂದುವರೆದರೆ ದೇಶದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಲಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.