ETV Bharat / bharat

ಬಡವರನ್ನು ಶೋಷಣೆ ಮಾಡುವುದು, ಸ್ನೇಹಿತರನ್ನು ಪೋಷಿಸುವುದು ಮೋದಿ ನಿಯಮ: ರಾಹುಲ್​ ಕಿಡಿ

ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಬುಧವಾರ ಸಂಸತ್​ ಅಂಗೀಕರಿಸಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರದ ನಡೆಗೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ.

author img

By

Published : Sep 24, 2020, 3:38 PM IST

rahul gandhi
ರಾಹುಲ್ ಗಾಂಧಿ

ನವದೆಹಲಿ: ಸಂಸತ್​ನಲ್ಲಿ ನಿನ್ನೆ ಮೂರು ಮಸೂದೆಗಳನ್ನು ಅಂಗೀಕರಿಸಿದ ಹಿನ್ನೆಲೆ ರಾಹುಲ್​ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಬುಧವಾರ ಸಂಸತ್​ ಅಂಗೀಕರಿಸಿದೆ. ಈ ಮಸೂದೆ ಬಗ್ಗೆ ಚಕಾರ ಎತ್ತಿರುವ ರಾಹುಲ್​ ಗಾಂಧಿ, 300 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳು ಸರ್ಕಾರದ ಅನುಮತಿಯಿಲ್ಲದೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಈ ಮಸೂದೆ ಸಹಾಯಕವಾಗುತ್ತವೆ ಎಂದಿದ್ದಾರೆ.

ಕೇಂದ್ರದ ವಿರುದ್ಧ ಆಕ್ರೋಶ
ಕೇಂದ್ರದ ವಿರುದ್ಧ ಆಕ್ರೋಶ

ಈ ಮಸೂದೆಗಳ ಬಗ್ಗೆ ಟೀಕಿಸಿ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟ್ಟರ್​ನಲ್ಲಿ ಅಕ್ರೋಶ ಹೊರಹಾಕಿದ್ದಾರೆ. ರೈತರಿಗೆ ಸಂಬಂಧಿಸಿದ ಮಸೂದೆಗಳನ್ನು ಜಾರಿ ಮಾಡಿದ ನಂತರ ಈಗ ಕೇಂದ್ರ ಸರ್ಕಾರವು ಕಾರ್ಮಿಕರನ್ನು ಗುರಿಯಾಗಿಸಿಕೊಂಡಿದೆ. ಬಡವರನ್ನು ಶೋಷಣೆ ಮಾಡುವುದು ಸ್ನೇಹಿತರನ್ನು ಪೋಷಿಸುವುದು ಮೋದಿ ಅವರ ನಿಯಮ ಎಂದು ರಾಹುಲ್​ ಕಿಡಿಕಾರಿದ್ದಾರೆ.

ಕೇಂದ್ರದ ವಿರುದ್ಧ ಆಕ್ರೋಶ
ಕೇಂದ್ರದ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರವು ಉದ್ಯೋಗಿಗಳನ್ನು ತೆಗೆದುಹಾಕಲು ಸುಲಭವಾಗುವಂತಹ ಕಾನೂನನ್ನು ತಂದಿದೆ. ಹಾಗೆ ದೌರ್ಜನ್ಯ ಮಾಡುವುದನ್ನು ಸರ್ಕಾರ ಸುಲಭಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿದ್ದಾರೆ.

ನವದೆಹಲಿ: ಸಂಸತ್​ನಲ್ಲಿ ನಿನ್ನೆ ಮೂರು ಮಸೂದೆಗಳನ್ನು ಅಂಗೀಕರಿಸಿದ ಹಿನ್ನೆಲೆ ರಾಹುಲ್​ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೂರು ಪ್ರಮುಖ ಕಾರ್ಮಿಕ ಸುಧಾರಣಾ ಮಸೂದೆಗಳನ್ನು ಬುಧವಾರ ಸಂಸತ್​ ಅಂಗೀಕರಿಸಿದೆ. ಈ ಮಸೂದೆ ಬಗ್ಗೆ ಚಕಾರ ಎತ್ತಿರುವ ರಾಹುಲ್​ ಗಾಂಧಿ, 300 ಕಾರ್ಮಿಕರನ್ನು ಹೊಂದಿರುವ ಸಂಸ್ಥೆಗಳು ಸರ್ಕಾರದ ಅನುಮತಿಯಿಲ್ಲದೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಈ ಮಸೂದೆ ಸಹಾಯಕವಾಗುತ್ತವೆ ಎಂದಿದ್ದಾರೆ.

ಕೇಂದ್ರದ ವಿರುದ್ಧ ಆಕ್ರೋಶ
ಕೇಂದ್ರದ ವಿರುದ್ಧ ಆಕ್ರೋಶ

ಈ ಮಸೂದೆಗಳ ಬಗ್ಗೆ ಟೀಕಿಸಿ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವಿಟ್ಟರ್​ನಲ್ಲಿ ಅಕ್ರೋಶ ಹೊರಹಾಕಿದ್ದಾರೆ. ರೈತರಿಗೆ ಸಂಬಂಧಿಸಿದ ಮಸೂದೆಗಳನ್ನು ಜಾರಿ ಮಾಡಿದ ನಂತರ ಈಗ ಕೇಂದ್ರ ಸರ್ಕಾರವು ಕಾರ್ಮಿಕರನ್ನು ಗುರಿಯಾಗಿಸಿಕೊಂಡಿದೆ. ಬಡವರನ್ನು ಶೋಷಣೆ ಮಾಡುವುದು ಸ್ನೇಹಿತರನ್ನು ಪೋಷಿಸುವುದು ಮೋದಿ ಅವರ ನಿಯಮ ಎಂದು ರಾಹುಲ್​ ಕಿಡಿಕಾರಿದ್ದಾರೆ.

ಕೇಂದ್ರದ ವಿರುದ್ಧ ಆಕ್ರೋಶ
ಕೇಂದ್ರದ ವಿರುದ್ಧ ಆಕ್ರೋಶ

ಕೇಂದ್ರ ಸರ್ಕಾರವು ಉದ್ಯೋಗಿಗಳನ್ನು ತೆಗೆದುಹಾಕಲು ಸುಲಭವಾಗುವಂತಹ ಕಾನೂನನ್ನು ತಂದಿದೆ. ಹಾಗೆ ದೌರ್ಜನ್ಯ ಮಾಡುವುದನ್ನು ಸರ್ಕಾರ ಸುಲಭಗೊಳಿಸಿದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.