ETV Bharat / bharat

ಲಾಡ್ಜ್​​ನಲ್ಲಿ ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

author img

By

Published : Sep 9, 2020, 10:57 PM IST

ಇಬ್ಬರು ಮಕ್ಕಳು ಸೇರಿ ನಾಲ್ವರು ಲಾಡ್ಜ್​​ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಶಾಖಪಟ್ಟಣಂದಲ್ಲಿ ನಡೆದಿದೆ.

visakhapatnam news
visakhapatnam news

ವಿಶಾಖಪಟ್ಟಣಂ: ಸಾಲದ ಹೊರೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.

ನಾಲ್ವರು ಆತ್ಮಹತ್ಯೆ ಶರಣು

ವಿಶಾಖಪಟ್ಟಣಂ ಆರ್​ಟಿಸಿ ಕಾಂಪ್ಲೆಕ್ಸ್​​ನ ಅಶ್ವಿನಿ ಲಾಡ್ಜ್​​ನಲ್ಲಿ ನಾಲ್ವರು ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಲಾಡ್ಜ್​​ನ 106ನೇ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅಪ್ಪಲರಾಜು- ಮಾನಸ ದಂಪತಿ ಹಾಗೂ ಮಗಳು ಕೀರ್ತಿ(6) ಮಗ ಸ್ವಾತ್ವಿಕ್ ​(5) ಮೃತರು ಎಂದು ಗುರುತಿಸಲಾಗಿದೆ.

ಇವರು ಪೆಂಡೂರ್ತಿ ಬಂಧುವನಿಪಲೆಂನ ನಿವಾಸಿಗಳು ಎಂದು ತಿಳಿದು ಬಂದಿದೆ. ಸಾಲದ ಸಮಸ್ಯೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸೊಸೈಡ್​ ನೋಟ್​​ನಲ್ಲಿ ಬರೆದಿಟ್ಟಿದ್ದಾರೆ. ಆತ್ಮಹತ್ಯೆ ಬಗ್ಗೆ ದ್ವಾರಕಾ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ವಿಶಾಖಪಟ್ಟಣಂ: ಸಾಲದ ಹೊರೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ನಡೆದಿದೆ.

ನಾಲ್ವರು ಆತ್ಮಹತ್ಯೆ ಶರಣು

ವಿಶಾಖಪಟ್ಟಣಂ ಆರ್​ಟಿಸಿ ಕಾಂಪ್ಲೆಕ್ಸ್​​ನ ಅಶ್ವಿನಿ ಲಾಡ್ಜ್​​ನಲ್ಲಿ ನಾಲ್ವರು ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಲಾಡ್ಜ್​​ನ 106ನೇ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಅಪ್ಪಲರಾಜು- ಮಾನಸ ದಂಪತಿ ಹಾಗೂ ಮಗಳು ಕೀರ್ತಿ(6) ಮಗ ಸ್ವಾತ್ವಿಕ್ ​(5) ಮೃತರು ಎಂದು ಗುರುತಿಸಲಾಗಿದೆ.

ಇವರು ಪೆಂಡೂರ್ತಿ ಬಂಧುವನಿಪಲೆಂನ ನಿವಾಸಿಗಳು ಎಂದು ತಿಳಿದು ಬಂದಿದೆ. ಸಾಲದ ಸಮಸ್ಯೆಯಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸೊಸೈಡ್​ ನೋಟ್​​ನಲ್ಲಿ ಬರೆದಿಟ್ಟಿದ್ದಾರೆ. ಆತ್ಮಹತ್ಯೆ ಬಗ್ಗೆ ದ್ವಾರಕಾ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.