ಒಡಿಶಾ: ಚಲಿಸುತ್ತಿದ್ದ ಬಸ್ಗೆ ವಿದ್ಯುತ್ ಪ್ರಸರಣ ತಂತಿ ತಗುಲಿದ ಪರಿಣಾಮ ಬಸ್ಗೆ ಬೆಂಕಿ ಹತ್ತಿಕೊಂಡು 9 ಮಂದಿ ಮೃತಪಟ್ಟು, 25 ಜನರು ಗಾಯಗೊಂಡಿರುವ ಘಟನೆ ಒಡಿಶಾದ ಗಂಜಂ ಜಿಲ್ಲೆಯ ಗೋಲಂಥರ ಗ್ರಾಮದಲ್ಲಿ ನಡೆದಿದೆ.
ಜಂಗಲ್ಪಾಡುನಿಂದ ಚಿಕಾರದ ಗ್ರಾಮಕ್ಕೆ ತೆರಳುತ್ತಿದ್ದ ಬಸ್, 11 ಕೆವಿ ವಿದ್ಯುತ್ ಪ್ರಸರಣ ತಂತಿಗೆ ಸಂಪರ್ಕಿಸಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
![bus caught fire in Odisha](https://etvbharatimages.akamaized.net/etvbharat/prod-images/6015212_ii.jpg)
ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬಸ್ನೊಳಗೆ ಸಿಲುಕಿದ್ದವರ ರಕ್ಷಣೆ ಮಾಡಿದ್ದಾರೆ. ಗಾಯಾಳುಗಳನ್ನು ಬೆರ್ಹಾಂಪುರದ ಎಂಕೆಸಿಜಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.