ETV Bharat / bharat

ರಕ್ಷಾ ಬಂಧನದ ದಿನವೇ ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ

author img

By

Published : Aug 3, 2020, 12:42 PM IST

ರಕ್ಷಾ ಬಂಧನದ ದಿನವೇ ಭಾರೀ ಅಪಘಾತ ನಡೆದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ನಡೆದಿದೆ.

accident
ಅಪಘಾತ

ನರಸಿಂಗಪುರ (ಮಧ್ಯಪ್ರದೇಶ) : ರಕ್ಷಾ ಬಂಧನದ ದಿನವೇ ಭೀಕರ ಅಪಘಾತ ಸಂಭವಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಸಾಲಿಚೌಕ ಮತ್ತು ಗಾಡಾರ್​ವಾರ ಬಳಿ ನಡೆದಿದೆ.

accident
ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಎಣ್ಣೆಯ ಕ್ಯಾನ್​ಗಳು ತುಂಬಿದ ಟ್ರಕ್​ ಉರುಳಿಬಿದ್ದಿದ್ದೇ ಈ ಅವಘಡಕ್ಕೆ ಕಾರಣ. ಟ್ರಕ್​​ನಲ್ಲಿದ್ದ ದಂಪತಿ ಮತ್ತು ಇವರ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿದ್ದಾರೆ.

ಅಪಘಾತದ ಸ್ಥಳಕ್ಕೆ ಗಾಡಾರ್​ವಾರ ಮತ್ತು ಸಾಲಿಚೌಕಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಉರುಳಿದ್ದ ಟ್ರಕ್​ ಅನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನರಸಿಂಗಪುರ (ಮಧ್ಯಪ್ರದೇಶ) : ರಕ್ಷಾ ಬಂಧನದ ದಿನವೇ ಭೀಕರ ಅಪಘಾತ ಸಂಭವಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯ ಸಾಲಿಚೌಕ ಮತ್ತು ಗಾಡಾರ್​ವಾರ ಬಳಿ ನಡೆದಿದೆ.

accident
ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಎಣ್ಣೆಯ ಕ್ಯಾನ್​ಗಳು ತುಂಬಿದ ಟ್ರಕ್​ ಉರುಳಿಬಿದ್ದಿದ್ದೇ ಈ ಅವಘಡಕ್ಕೆ ಕಾರಣ. ಟ್ರಕ್​​ನಲ್ಲಿದ್ದ ದಂಪತಿ ಮತ್ತು ಇವರ ಇಬ್ಬರು ಗಂಡು ಮಕ್ಕಳು ಸಾವನ್ನಪ್ಪಿದ್ದಾರೆ.

ಅಪಘಾತದ ಸ್ಥಳಕ್ಕೆ ಗಾಡಾರ್​ವಾರ ಮತ್ತು ಸಾಲಿಚೌಕಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯಲ್ಲಿ ಉರುಳಿದ್ದ ಟ್ರಕ್​ ಅನ್ನು ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.