ETV Bharat / bharat

ತೆಲಂಗಾಣದಲ್ಲಿ 33 ನಕ್ಸಲರು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗತಿ - ಭಟ್ಟಿನಪಲ್ಲಿ ನಕ್ಸಲರ ಶರಣಾಗತಿ

33 ನಕ್ಸಲರು ಶರಣಾಗತಿಯಾಗಿರುವ ಘಟನೆ ತೆಲಂಗಾಣದ ಭದ್ರಾದ್ರಿ ಕೋತಗುಡೆಂ ಜಿಲ್ಲೆಯಲ್ಲಿ ನಡೆದಿದೆ.

Maoist militia members surrender
ನಕ್ಸಲರ ಶರಣಾಗತಿ
author img

By

Published : Nov 23, 2020, 10:57 PM IST

ಹೈದರಾಬಾದ್ (ತೆಲಂಗಾಣ): ಸಮಾಜದ ಮುಖ್ಯವಾಹಿನಿಗೆ ಬರುವ ಸಲುವಾಗಿ 33 ಮಂದಿ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಭದ್ರಾದ್ರಿ ಕೋತಗುಡೆಂ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೆರ್ಲ ಮಂಡಲ್​ ಪ್ರದೇಶದ ಭಟ್ಟಿನಪಲ್ಲಿ ಹಾಗೂ ಕಿಶ್ತಾರಮ್ಪಡು ಗ್ರಾಮಗಳಿಗೆ ಸೇರಿದ ನಕ್ಸಲರು ತಾವೇ ಸಿಆರ್​ಪಿಎಫ್​ ಹಾಗೂ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ನಕ್ಸಲರಲ್ಲಿ ಎಂಟು ಮಂದಿ ಛತ್ತೀಸ್​ಗಢದಲ್ಲಿ ಎರಡು ವರ್ಷಗಳಿಂದ ನಕ್ಸಲರಾಗಿದ್ದರು. ಇದರಲ್ಲಿ ಕೆಲವರು ರಸ್ತೆ ಸ್ಫೋಟ, ನಿರ್ಮಾಣ ಹಂತದ ಕಾಮಗಾರಿ ಸ್ಫೋಟಗೊಳಿಸುವಿಕೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ನಕ್ಸಲರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಪೊಲೀಸರು ಮನವೊಲಿಸಲು ಮುಂದಾಗಿದ್ದು, ಪೊಲೀಸರ ಮಾತಿಗೆ ಬೆಲೆ ಕೊಟ್ಟು ಅವರು ಶರಣಾಗಿದ್ದಾರೆ ಎಂದು ಭದ್ರಾದ್ರಿ ಕೋತಗುಡೆಂ ಎಸ್​​ಪಿ ಸುನೀಲ್ ದತ್ ಹೇಳಿದ್ದಾರೆ.

ಸದ್ಯಕ್ಕೆ ಶರಣಾದ ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ ಯೋಜನೆಗಳಲ್ಲಿ ಈ ನಕ್ಸಲರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.

ಹೈದರಾಬಾದ್ (ತೆಲಂಗಾಣ): ಸಮಾಜದ ಮುಖ್ಯವಾಹಿನಿಗೆ ಬರುವ ಸಲುವಾಗಿ 33 ಮಂದಿ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಭದ್ರಾದ್ರಿ ಕೋತಗುಡೆಂ ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಚೆರ್ಲ ಮಂಡಲ್​ ಪ್ರದೇಶದ ಭಟ್ಟಿನಪಲ್ಲಿ ಹಾಗೂ ಕಿಶ್ತಾರಮ್ಪಡು ಗ್ರಾಮಗಳಿಗೆ ಸೇರಿದ ನಕ್ಸಲರು ತಾವೇ ಸಿಆರ್​ಪಿಎಫ್​ ಹಾಗೂ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ನಕ್ಸಲರಲ್ಲಿ ಎಂಟು ಮಂದಿ ಛತ್ತೀಸ್​ಗಢದಲ್ಲಿ ಎರಡು ವರ್ಷಗಳಿಂದ ನಕ್ಸಲರಾಗಿದ್ದರು. ಇದರಲ್ಲಿ ಕೆಲವರು ರಸ್ತೆ ಸ್ಫೋಟ, ನಿರ್ಮಾಣ ಹಂತದ ಕಾಮಗಾರಿ ಸ್ಫೋಟಗೊಳಿಸುವಿಕೆ ಮುಂತಾದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ನಕ್ಸಲರನ್ನು ಮುಖ್ಯವಾಹಿನಿಗೆ ತರಬೇಕೆನ್ನುವ ಉದ್ದೇಶದಿಂದ ಪೊಲೀಸರು ಮನವೊಲಿಸಲು ಮುಂದಾಗಿದ್ದು, ಪೊಲೀಸರ ಮಾತಿಗೆ ಬೆಲೆ ಕೊಟ್ಟು ಅವರು ಶರಣಾಗಿದ್ದಾರೆ ಎಂದು ಭದ್ರಾದ್ರಿ ಕೋತಗುಡೆಂ ಎಸ್​​ಪಿ ಸುನೀಲ್ ದತ್ ಹೇಳಿದ್ದಾರೆ.

ಸದ್ಯಕ್ಕೆ ಶರಣಾದ ನಕ್ಸಲರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಆ ಯೋಜನೆಗಳಲ್ಲಿ ಈ ನಕ್ಸಲರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.