ETV Bharat / bharat

ಅಪಹರಣಗೊಂಡ 100 ಮಕ್ಕಳನ್ನು ರಕ್ಷಿಸಿದ ದೆಹಲಿ ಪೊಲೀಸರು - 2020 ರಲ್ಲಿ ಅಪಹರಣಗೊಂಡ ಮಕ್ಕಳ ಪ್ರಕರಣ

2020 ರಲ್ಲಿ ಅಪಹರಣಗೊಂಡ 100 ಮಕ್ಕಳನ್ನು ದಕ್ಷಿಣ ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ 100 ಮಕ್ಕಳು ದೆಹಲಿ ಮತ್ತು ಹತ್ತಿರದ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾಣೆಯಾಗಿದೆ ಎಂದು ವರದಿಯಾಗಿತ್ತು.

100 children reported missing from south Delhi traced in 2020
2020 ರಲ್ಲಿ ಅಪಹರಣಗೊಂಡ 100 ಮಕ್ಕಳನ್ನು ಪತ್ತೆ ಹಚ್ಚಿದ ದಕ್ಷಿಣ ದೆಹಲಿ ಪೊಲೀಸರು
author img

By

Published : Dec 21, 2020, 10:25 AM IST

ನವದೆಹಲಿ: 2020 ರಲ್ಲಿ ಅಪಹರಣಗೊಂಡ ಪ್ರಕರಣಗಳಲ್ಲಿ 100 ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ದಕ್ಷಿಣ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ದೆಹಲಿ ದಕ್ಷಿಣ ವಕಲಯದ ಡಿಸಿಪಿ ಅತುಲ್ ಠಾಕೂರ್ ತಿಳಿಸಿದ್ದಾರೆ.

ದಕ್ಷಿಣ ಜಿಲ್ಲಾ ಪೊಲೀಸರ ಮಾನವ ಕಳ್ಳಸಾಗಣೆ ವಿರೋಧಿ ಘಟಕದಿಂದ ಪತ್ತೆ ಹಚ್ಚಲಾದ 100 ಮಕ್ಕಳಲ್ಲಿ 80 ಮಕ್ಕಳು ಇನ್ನೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕಾಣೆಯಾದ ಈ ಮಕ್ಕಳನ್ನು ದೆಹಲಿ ಮತ್ತು ಇತರ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಲಾಗಿದೆ. ಈ 100 ಮಕ್ಕಳು ದೆಹಲಿ ಮತ್ತು ಹತ್ತಿರದ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾಣೆಯಾಗಿದೆ ಎಂದು ವರದಿಯಾಗಿತ್ತು. ಎಹೆಚ್‌ಟಿಯು ತಂಡವು ಮಕ್ಕಳನ್ನು ಪತ್ತೆಹಚ್ಚಲು ಪ್ರಾಮಾಣಿಕ ಮತ್ತು ವ್ಯವಸ್ಥಿತ ಪ್ರಯತ್ನಗಳನ್ನು ಮಾಡಿದೆ ಎಂದು ದಕ್ಷಿಣದ ಡಿಸಿಪಿ ಅತುಲ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ:ಗಜರಾಜನಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲು

ಕಾಣೆಯಾದ ಈ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಸಬ್‌ಇನ್ಸ್‌ಪೆಕ್ಟರ್‌ಗಳಾದ ಮೊಹಮ್ಮದ್ ಶಫೀಕ್ ಮತ್ತು ವೀರೇಂದ್ರ ಮತ್ತು ಎಎಸ್‌ಐ ಸಂಸದ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿ ಪೊಲೀಸ್ ಆಯುಕ್ತರು ಮಕ್ಕಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗೆ ಪ್ರೋತ್ಸಾಹ ನೀಡಲು ವಿಶೇಷ ಯೋಜನೆ ಘೋಷಿಸಿದ್ದಾರೆ.

ನವದೆಹಲಿ: 2020 ರಲ್ಲಿ ಅಪಹರಣಗೊಂಡ ಪ್ರಕರಣಗಳಲ್ಲಿ 100 ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ದಕ್ಷಿಣ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ದೆಹಲಿ ದಕ್ಷಿಣ ವಕಲಯದ ಡಿಸಿಪಿ ಅತುಲ್ ಠಾಕೂರ್ ತಿಳಿಸಿದ್ದಾರೆ.

ದಕ್ಷಿಣ ಜಿಲ್ಲಾ ಪೊಲೀಸರ ಮಾನವ ಕಳ್ಳಸಾಗಣೆ ವಿರೋಧಿ ಘಟಕದಿಂದ ಪತ್ತೆ ಹಚ್ಚಲಾದ 100 ಮಕ್ಕಳಲ್ಲಿ 80 ಮಕ್ಕಳು ಇನ್ನೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಕಾಣೆಯಾದ ಈ ಮಕ್ಕಳನ್ನು ದೆಹಲಿ ಮತ್ತು ಇತರ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಡ ಮತ್ತು ಪಶ್ಚಿಮ ಬಂಗಾಳದಲ್ಲಿ ಪತ್ತೆ ಮಾಡಲಾಗಿದೆ. ಈ 100 ಮಕ್ಕಳು ದೆಹಲಿ ಮತ್ತು ಹತ್ತಿರದ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಾಣೆಯಾಗಿದೆ ಎಂದು ವರದಿಯಾಗಿತ್ತು. ಎಹೆಚ್‌ಟಿಯು ತಂಡವು ಮಕ್ಕಳನ್ನು ಪತ್ತೆಹಚ್ಚಲು ಪ್ರಾಮಾಣಿಕ ಮತ್ತು ವ್ಯವಸ್ಥಿತ ಪ್ರಯತ್ನಗಳನ್ನು ಮಾಡಿದೆ ಎಂದು ದಕ್ಷಿಣದ ಡಿಸಿಪಿ ಅತುಲ್ ಠಾಕೂರ್ ಹೇಳಿದ್ದಾರೆ.

ಇದನ್ನೂ ಓದಿ:ಗಜರಾಜನಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಕ್ಸ್‌ಪ್ರೆಸ್ ರೈಲು

ಕಾಣೆಯಾದ ಈ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಸಬ್‌ಇನ್ಸ್‌ಪೆಕ್ಟರ್‌ಗಳಾದ ಮೊಹಮ್ಮದ್ ಶಫೀಕ್ ಮತ್ತು ವೀರೇಂದ್ರ ಮತ್ತು ಎಎಸ್‌ಐ ಸಂಸದ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ. ದೆಹಲಿ ಪೊಲೀಸ್ ಆಯುಕ್ತರು ಮಕ್ಕಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿಗೆ ಪ್ರೋತ್ಸಾಹ ನೀಡಲು ವಿಶೇಷ ಯೋಜನೆ ಘೋಷಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.