ETV Bharat / bharat

ಜಾಮೀನು ಪಡೆದ ಅತ್ಯಾಚಾರ ಆರೋಪಿ.. ಸುಪ್ರೀಂನ್ನು ಕೆರಳಿಸಿದ ‘Bhaiya Is Back​’ ಪೋಸ್ಟರ್​ಗಳು!

author img

By

Published : Apr 12, 2022, 11:25 AM IST

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ವಿದ್ಯಾರ್ಥಿ ನಾಯಕನಿಗೆ ಜಾಮೀನು ಮಂಜೂರಾಗಿತ್ತು. ಆದ್ರೆ ಆತನ ಬೆಂಬಲಿಗರು ವಿಭಿನ್ನವಾಗಿ ಸ್ವಾಗತಿಸಿದ್ದಾರೆ. ಇದನ್ನು ನೋಡಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಕೆರಳಿಸಿದೆ.

Posters For Bailed Rape Accused Enrages Supreme Court  Bhaiya Is Back Posters  Bailed Rape Accused in Madhya Pradesh high court  Supreme Court news  ಸುಪ್ರೀಂನನ್ನು ಕೆರಳಿಸಿದ ಭಯ್ಯಾ ಇಸ್​ ಬ್ಯಾಕ್​ ಪೋಸ್ಟರ್​ಗಳು  ಮಧ್ಯಪ್ರದೇಶದ ಹೈಕೋರ್ಟ್​ನಿಂದ ಜಾಮೀನು ಪಡೆದ ಅತ್ಯಾಚಾರ ಆರೋಪಿ  ಸುಪ್ರೀಕೋರ್ಟ್​ ಸುದ್ದಿ
ಸುಪ್ರೀಂನನ್ನು ಕೆರಳಿಸಿದ ‘ಭಯ್ಯಾ ಇಸ್​ ಬ್ಯಾಕ್​’ ಪೋಸ್ಟರ್​ಗಳು

ನವದೆಹಲಿ: ಅತ್ಯಾಚಾರ ಪ್ರಕರಣದ ಆರೋಪಿ ವಿದ್ಯಾರ್ಥಿ ನಾಯಕನಿಗೆ ಜಾಮೀನು ನೀಡಿರುವುದಕ್ಕೆ ಆತನ ಬೆಂಬಲಿಗರು ‘ಭಯ್ಯಾ ಇಸ್​ ಬ್ಯಾಕ್​’ ಎಂದು ಸ್ವಾಗತಿಸುವ ಭಿತ್ತಿಪತ್ರಗಳು ಮತ್ತು ಹೋರ್ಡಿಂಗ್‌ಗಳನ್ನು ರಾರಾಜಿಸಿದ್ದರಿಂದ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ.

ಏನಿದು ಘಟನೆ: ಮಧ್ಯಪ್ರದೇಶದ ಸಂತ್ರಸ್ತೆ ಮಹಿಳೆ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು. ಆರೋಪಿ ಮದುವೆಯಾಗುವುದಾಗಿ ಹೇಳಿ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ಗರ್ಭಪಾತ ಮಾಡುವಂತೆಯೂ ಒತ್ತಾಯಿಸಿದ್ದರು. ಆದ್ರೆ ಆರೋಪಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನ ಪ್ರಶ್ನಿಸಿ ಮಹಿಳೆ ಸುಪ್ರೀಂಕೋರ್ಟ್​ಗೆ ಮೊರೆ ಹೋಗಿದ್ದರು. ವಿಚಾರಣೆ ವೇಳೆ ‘ಭಯ್ಯಾ ಇಸ್​ ಬ್ಯಾಕ್​’ ಎಂಬ ಭಿತ್ತಿ ಪತ್ರಗಳು ನ್ಯಾಯಮೂರ್ತಿ ಅವರ ಗಮನಕ್ಕೆ ಬಂದಿವೆ.

ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ತ್ರಿಸದಸ್ಯ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಪ್ರಶ್ನಿಸಿದ್ದಾರೆ. ‘ಭಯ್ಯಾ ಇಸ್ ಬ್ಯಾಕ್‌ ಎಂದರೇನು?, ಅವರು ಏನು ಆಚರಿಸಬೇಕೆಂದು ತಿಳಿದಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆ ನ್ಯಾಯಾಲಯದಲ್ಲಿ ಪ್ರತಿಧ್ವನಿಸಿತು. ಬಳಿಕ ಮುಖ್ಯ ನ್ಯಾಯಮೂರ್ತಿಗಳು ಆರೋಪಿಗಳ ವಕೀಲರಿಗೆ, ನಿಮ್ಮ ಸಹೋದರನನ್ನು ಈ ಒಂದು ವಾರ ಎಚ್ಚರಿಕೆಯಿಂದ ಇರುವಂತೆ ಹೇಳಿ ಅಂತಾ ಹೇಳಿದರು.

ಓದಿ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್ ನೇಮಕ ರದ್ದು ಆದೇಶಕ್ಕೆ ತಡೆ ನೀಡಿದ ಸುಪ್ರೀಂ

ಆರೋಪಿ ಶುಭಾಂಗ್ ಗೊಂಟಿಯಾ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯ ನಾಯಕನಾಗಿದ್ದಾನೆ. ಆರೋಪಿ ಶುಭಾಂಗ್ ಗೊಂಟಿಯಾ ಜಾಮೀನು ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ, ಮಧ್ಯಪ್ರದೇಶ ಸರ್ಕಾರಕ್ಕೆ ಈ ಬಗ್ಗೆ ಪ್ರತಿಕ್ರಿಯೆ ಕೇಳಿದೆ. ನವೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಶುಭಾಂಗ್ ಗೊಂಟಿಯಾಗೆ ಜಾಮೀನು ನೀಡಿತ್ತು. ಪ್ರಕರಣದ ಸತ್ಯ ಮತ್ತು ಗಂಭೀರತೆಯನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸೋಮವಾರ ನಡೆದ ವಿಚಾರಣೆಯ ವೇಳೆ, ಆರೋಪಿಯು ಖಾಸಗಿ ಸಮಾರಂಭವೊಂರಲ್ಲಿ ನನ್ನ ಹಣೆಗೆ ಸಿಂಧೂರವಿಟ್ಟು, ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಬಳಿಕ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ಆದರೆ ಮದುವೆಯಾಗಿದ್ದನ್ನು ಸಾರ್ವಜನಿಕವಾಗಿ ಸ್ವೀಕರಿಸಲು ನಿರಾಕರಿಸಿದ್ದಾನೆ ಎಂದು ವಿವರಿಸಿದರು.

ಇದಾದ ಬಳಿಕ ನಾನು ಜಬಲ್‌ಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದೆ. ಪ್ರಕರಣ ದಾಖಲಾದ ಕೂಡಲೇ ಗೊಂಟಿಯಾ ಪರಾರಿಯಾಗಿದ್ದನು. ಜೂನ್ 2021 ರಲ್ಲಿ ಆರೋಪಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕಿಕೊಟ್ಟವರಿಗೆ 5,000 ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಜಾಮೀನು ಪಡೆದ ನಂತರ ಭಯ್ಯಾ ಇಸ್​ ಬ್ಯಾಕ್​ ಎಂಬ ಬ್ಯಾನರ್​ ಮತ್ತು ಭಿತ್ತಿಪತ್ರಗಳು ಹರಿದಾಡಿದವು. ಈಗ ಮಹಿಳೆ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್​ಗೆ ಮೊರೆ ಹೋಗಿದ್ದಾರೆ.

ನವದೆಹಲಿ: ಅತ್ಯಾಚಾರ ಪ್ರಕರಣದ ಆರೋಪಿ ವಿದ್ಯಾರ್ಥಿ ನಾಯಕನಿಗೆ ಜಾಮೀನು ನೀಡಿರುವುದಕ್ಕೆ ಆತನ ಬೆಂಬಲಿಗರು ‘ಭಯ್ಯಾ ಇಸ್​ ಬ್ಯಾಕ್​’ ಎಂದು ಸ್ವಾಗತಿಸುವ ಭಿತ್ತಿಪತ್ರಗಳು ಮತ್ತು ಹೋರ್ಡಿಂಗ್‌ಗಳನ್ನು ರಾರಾಜಿಸಿದ್ದರಿಂದ ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ಗುರಿಯಾಗಿದೆ.

ಏನಿದು ಘಟನೆ: ಮಧ್ಯಪ್ರದೇಶದ ಸಂತ್ರಸ್ತೆ ಮಹಿಳೆ ಜಾಮೀನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನ ಮೊರೆ ಹೋಗಿದ್ದರು. ಆರೋಪಿ ಮದುವೆಯಾಗುವುದಾಗಿ ಹೇಳಿ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭ್ರೂಣವನ್ನು ಗರ್ಭಪಾತ ಮಾಡುವಂತೆಯೂ ಒತ್ತಾಯಿಸಿದ್ದರು. ಆದ್ರೆ ಆರೋಪಿಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಇದನ್ನ ಪ್ರಶ್ನಿಸಿ ಮಹಿಳೆ ಸುಪ್ರೀಂಕೋರ್ಟ್​ಗೆ ಮೊರೆ ಹೋಗಿದ್ದರು. ವಿಚಾರಣೆ ವೇಳೆ ‘ಭಯ್ಯಾ ಇಸ್​ ಬ್ಯಾಕ್​’ ಎಂಬ ಭಿತ್ತಿ ಪತ್ರಗಳು ನ್ಯಾಯಮೂರ್ತಿ ಅವರ ಗಮನಕ್ಕೆ ಬಂದಿವೆ.

ಈ ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ತ್ರಿಸದಸ್ಯ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಪ್ರಶ್ನಿಸಿದ್ದಾರೆ. ‘ಭಯ್ಯಾ ಇಸ್ ಬ್ಯಾಕ್‌ ಎಂದರೇನು?, ಅವರು ಏನು ಆಚರಿಸಬೇಕೆಂದು ತಿಳಿದಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿಗಳ ಪ್ರಶ್ನೆ ನ್ಯಾಯಾಲಯದಲ್ಲಿ ಪ್ರತಿಧ್ವನಿಸಿತು. ಬಳಿಕ ಮುಖ್ಯ ನ್ಯಾಯಮೂರ್ತಿಗಳು ಆರೋಪಿಗಳ ವಕೀಲರಿಗೆ, ನಿಮ್ಮ ಸಹೋದರನನ್ನು ಈ ಒಂದು ವಾರ ಎಚ್ಚರಿಕೆಯಿಂದ ಇರುವಂತೆ ಹೇಳಿ ಅಂತಾ ಹೇಳಿದರು.

ಓದಿ: ಬೆಂಗಳೂರು ವಿವಿ ಕುಲಪತಿ ವೇಣುಗೋಪಾಲ್ ನೇಮಕ ರದ್ದು ಆದೇಶಕ್ಕೆ ತಡೆ ನೀಡಿದ ಸುಪ್ರೀಂ

ಆರೋಪಿ ಶುಭಾಂಗ್ ಗೊಂಟಿಯಾ ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯ ನಾಯಕನಾಗಿದ್ದಾನೆ. ಆರೋಪಿ ಶುಭಾಂಗ್ ಗೊಂಟಿಯಾ ಜಾಮೀನು ಏಕೆ ರದ್ದುಗೊಳಿಸಬಾರದು ಎಂದು ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯ, ಮಧ್ಯಪ್ರದೇಶ ಸರ್ಕಾರಕ್ಕೆ ಈ ಬಗ್ಗೆ ಪ್ರತಿಕ್ರಿಯೆ ಕೇಳಿದೆ. ನವೆಂಬರ್‌ನಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಶುಭಾಂಗ್ ಗೊಂಟಿಯಾಗೆ ಜಾಮೀನು ನೀಡಿತ್ತು. ಪ್ರಕರಣದ ಸತ್ಯ ಮತ್ತು ಗಂಭೀರತೆಯನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಮಹಿಳೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಸೋಮವಾರ ನಡೆದ ವಿಚಾರಣೆಯ ವೇಳೆ, ಆರೋಪಿಯು ಖಾಸಗಿ ಸಮಾರಂಭವೊಂರಲ್ಲಿ ನನ್ನ ಹಣೆಗೆ ಸಿಂಧೂರವಿಟ್ಟು, ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ಬಳಿಕ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ. ಆದರೆ ಮದುವೆಯಾಗಿದ್ದನ್ನು ಸಾರ್ವಜನಿಕವಾಗಿ ಸ್ವೀಕರಿಸಲು ನಿರಾಕರಿಸಿದ್ದಾನೆ ಎಂದು ವಿವರಿಸಿದರು.

ಇದಾದ ಬಳಿಕ ನಾನು ಜಬಲ್‌ಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದೆ. ಪ್ರಕರಣ ದಾಖಲಾದ ಕೂಡಲೇ ಗೊಂಟಿಯಾ ಪರಾರಿಯಾಗಿದ್ದನು. ಜೂನ್ 2021 ರಲ್ಲಿ ಆರೋಪಿ ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ಹುಡುಕಿಕೊಟ್ಟವರಿಗೆ 5,000 ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಜಾಮೀನು ಪಡೆದ ನಂತರ ಭಯ್ಯಾ ಇಸ್​ ಬ್ಯಾಕ್​ ಎಂಬ ಬ್ಯಾನರ್​ ಮತ್ತು ಭಿತ್ತಿಪತ್ರಗಳು ಹರಿದಾಡಿದವು. ಈಗ ಮಹಿಳೆ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂಕೋರ್ಟ್​ಗೆ ಮೊರೆ ಹೋಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.