ETV Bharat / bharat

ಇದ್ದೊಬ್ಬ ಅತಿಥಿ ಶಿಕ್ಷಕಿಗೆ ಅನಾರೋಗ್ಯ.. 8 ತಿಂಗಳಿಂದ ಪಶ್ಚಿಮ ಬಂಗಾಳದ ಶಾಲೆಗೆ ಬೀಗ; ಪಾಠ, ಪರೀಕ್ಷೆಗಳಿಲ್ಲದೇ ಅಂಧಃಕಾರದಲ್ಲಿ ಮಕ್ಕಳು!

author img

By ETV Bharat Karnataka Team

Published : Aug 26, 2023, 12:46 PM IST

ಶಾಲೆಗಳಿಗೆ ಸರ್ಕಾರಿ ರಜೆ ಹೊರತುಪಡಿಸಿ, ತೀರಾ ಅಗತ್ಯ ಸಂದರ್ಭಗಳಲ್ಲಿ ಮಾತ್ರ ರಜೆ ನೀಡಲಾಗುತ್ತದೆ. ಪಶ್ಚಿಮ ಬಂಗಾಳದ ಈ ಶಾಲೆಗೆ ಶಿಕ್ಷಕರೇ ಇಲ್ಲದೆ ಅಘೋಷಿತ ಬೀಗ ಮುದ್ರ ಬಿದ್ದಿದೆ. ಪಾಠ, ಪರೀಕ್ಷೆಗಳು ನಿಂತು 8 ತಿಂಗಳು ಕಳೆದಿವೆಯಂತೆ.

8 ತಿಂಗಳಿಂದ ಪಶ್ಚಿಮಬಂಗಾಳದ ಶಾಲೆಗೆ ಬೀಗ
8 ತಿಂಗಳಿಂದ ಪಶ್ಚಿಮಬಂಗಾಳದ ಶಾಲೆಗೆ ಬೀಗ

ಬಂಕುರಾ(ಪಶ್ಚಿಮಬಂಗಾಳ) : ಈ ಶಾಲೆಯಲ್ಲಿ ಇರೋದು ಒಬ್ಬರೇ ಒಬ್ಬ ಶಿಕ್ಷಕರು. ಅದು ಅತಿಥಿ ಶಿಕ್ಷಕಿ. 5 ರಿಂದ 8 ನೇ ತರಗತಿವರೆಗೆ 32 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದುರಾದೃಷ್ಟವಶಾತ್​ ಇರುವ ಒಬ್ಬ ಶಿಕ್ಷಕಿಗೆ ಅನಾರೋಗ್ಯ ಉಂಟಾಗಿ ಬರೋಬ್ಬರಿ 8 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವತ್ತಿನಿಂದ ಹಿಡಿದು ಇಂದಿನವರೆಗೂ ಮಕ್ಕಳಿಗೆ ಓದು, ಬರಹ, ಶಾಲೆ ಎಲ್ಲವೂ ಬಂದ್​ ಆಗಿವೆ. ಹೋಗ್ಲಿ ಬೇರೆ ಕಡೆ ಶಾಲೆಗೆ ಹೋಗೋಣ ಅಂದ್ರೂ ವ್ಯವಸ್ಥೆಗಳ ಕೊರತೆ. ಹೀಗಾಗಿ ಈ ಗ್ರಾಮದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿ ಉಳಿದಿದೆ.

ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಡಳಿತ ನಡೆಸುತ್ತಿರುವ ಪಶ್ಚಿಮಬಂಗಾಳದ ಬಂಕುರಾ ಜಿಲ್ಲೆಯ ಸತ್ಮೌಲಿ ಚಾಂದಬಿಲಾ ಗ್ರಾಮದ ಜೂನಿಯರ್ ಹೈಸ್ಕೂಲ್‌ನಲ್ಲಿ. 8 ತಿಂಗಳಿನಿಂದ ಶಾಲೆ ಮುಚ್ಚಿದ್ದರೂ ಶಿಕ್ಷಣ ಇಲಾಖೆ, ಅದರ ಅಧಿಕಾರಿಗಳು ಮತ್ತು ಸರ್ಕಾರದ ಕಿವಿಗೆ ಬಿದ್ದರೂ ಘನ ನಿರ್ಲಕ್ಷ್ಯ ವಹಿಸಲಾಗಿದೆ.

ಶಾಲೆಗೆ ಅಘೋಷಿತ ಬೀಗಮುದ್ರೆ: ಸರ್ಕಾರಿ ಶಾಲೆಯಾಗಿದ್ದರೂ ಇಲ್ಲಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಲಾಗಿಲ್ಲ. ಇರುವ ಅತಿಥಿ ಶಿಕ್ಷಕಿಯೇ ಇಲ್ಲಿಯವರೆಗೂ ಎಲ್ಲವನ್ನೂ ನಿಭಾಯಿಸಿಕೊಂಡು ಬಂದಿದ್ದರು. ಕಳೆದ 7-8 ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಅಂದಿನಿಂದ ಶಾಲೆಗೆ ಬೀಗ ಹಾಕಲಾಗಿದೆ. ಮಕ್ಕಳ ಅಧ್ಯಯನ, ಪರೀಕ್ಷೆ, ಪಾಠಗಳು ಎಲ್ಲವಕ್ಕೂ ಅಘೋಷಿತ ಬೀಗ ಬಿದ್ದಿದೆ. ಪೋಷಕರು ಮತ್ತು ಸ್ಥಳೀಯರು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ ಎಂಬುದು ಅಚ್ಚರಿಯ ಸಂಗತಿ.

ಚಾಂದಬಿಲಾ ಕಿರಿಯ ಪ್ರೌಢಶಾಲೆಯಲ್ಲಿ ಐದನೇ ತರಗತಿಯಿಂದ ಎಂಟನೇ ತರಗತಿವರೆಗೆ ಒಟ್ಟು 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ಏಳೆಂಟು ತಿಂಗಳಿಂದ ಶಾಲೆ ಮುಚ್ಚಿದೆ. ಪಾಠ, ಅಧ್ಯಯನದ ಜೊತೆಗೆ ಪರೀಕ್ಷೆಗಳನ್ನೂ ನಡೆಸಲಾಗಿಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಹಾರ ಒದಗಿಸಲು ಆಗ್ರಹ: ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದರೂ ಪರಿಹಾರ ಸಿಕ್ಕಿಲ್ಲ. ಶಾಲೆ ಮುಚ್ಚಿದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದೆ. ಖಾಸಗಿಯಾಗಿ ಟ್ಯೂಷನ್ ಕೊಡಿಸಲಾಗುತ್ತಿದೆ. ಅದೂ ಕೂಡ ಮುಗಿದಿದ್ದು, ಈಗ ಮನೆಯಲ್ಲಿಯೇ ಮಕ್ಕಳು ಓದಿಕೊಳ್ಳುತ್ತಿದ್ದಾರೆ. ಆದರೆ, ಅವರ ಶಿಕ್ಷಣದ ಪ್ರಗತಿಯ ಮಾಪಕವಾದ ಪರೀಕ್ಷೆಗಳು ನಡೆಸಲಾಗಿಲ್ಲ. ಕೆಲವರು ದೂರದ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರೆ, ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದಾರೆ.

ಈ ಕುರಿತು ಜಿಲ್ಲಾ ಶಾಲಾ ನಿರೀಕ್ಷಕರು ಪ್ರತಿಕ್ರಿಯಿಸಿ, ಬಂಕುರಾ ಜಿಲ್ಲೆಯ ಚಾಂದಬಿಲಾ ಕಿರಿಯ ಪ್ರೌಢಶಾಲೆಯಲ್ಲಾದ ಶಿಕ್ಷಣ ಅವ್ಯವಸ್ಥೆ ಮತ್ತು ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲೇ ಶಾಲೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿಯ ಹಾಸ್ಟೆಲ್‌ನಲ್ಲಿ ಹುಳು ಮಿಶ್ರಿತ ಆಹಾರ ವಿತರಣೆ ಆರೋಪ: ವಿಸಿ ನಿವಾಸದ ಬಳಿ ವಿದ್ಯಾರ್ಥಿಗಳ ಗಲಾಟೆ...

ಬಂಕುರಾ(ಪಶ್ಚಿಮಬಂಗಾಳ) : ಈ ಶಾಲೆಯಲ್ಲಿ ಇರೋದು ಒಬ್ಬರೇ ಒಬ್ಬ ಶಿಕ್ಷಕರು. ಅದು ಅತಿಥಿ ಶಿಕ್ಷಕಿ. 5 ರಿಂದ 8 ನೇ ತರಗತಿವರೆಗೆ 32 ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದುರಾದೃಷ್ಟವಶಾತ್​ ಇರುವ ಒಬ್ಬ ಶಿಕ್ಷಕಿಗೆ ಅನಾರೋಗ್ಯ ಉಂಟಾಗಿ ಬರೋಬ್ಬರಿ 8 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ. ಅವತ್ತಿನಿಂದ ಹಿಡಿದು ಇಂದಿನವರೆಗೂ ಮಕ್ಕಳಿಗೆ ಓದು, ಬರಹ, ಶಾಲೆ ಎಲ್ಲವೂ ಬಂದ್​ ಆಗಿವೆ. ಹೋಗ್ಲಿ ಬೇರೆ ಕಡೆ ಶಾಲೆಗೆ ಹೋಗೋಣ ಅಂದ್ರೂ ವ್ಯವಸ್ಥೆಗಳ ಕೊರತೆ. ಹೀಗಾಗಿ ಈ ಗ್ರಾಮದ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗಿ ಉಳಿದಿದೆ.

ಇಷ್ಟೆಲ್ಲ ಅವಾಂತರ ಸೃಷ್ಟಿಯಾಗಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆಡಳಿತ ನಡೆಸುತ್ತಿರುವ ಪಶ್ಚಿಮಬಂಗಾಳದ ಬಂಕುರಾ ಜಿಲ್ಲೆಯ ಸತ್ಮೌಲಿ ಚಾಂದಬಿಲಾ ಗ್ರಾಮದ ಜೂನಿಯರ್ ಹೈಸ್ಕೂಲ್‌ನಲ್ಲಿ. 8 ತಿಂಗಳಿನಿಂದ ಶಾಲೆ ಮುಚ್ಚಿದ್ದರೂ ಶಿಕ್ಷಣ ಇಲಾಖೆ, ಅದರ ಅಧಿಕಾರಿಗಳು ಮತ್ತು ಸರ್ಕಾರದ ಕಿವಿಗೆ ಬಿದ್ದರೂ ಘನ ನಿರ್ಲಕ್ಷ್ಯ ವಹಿಸಲಾಗಿದೆ.

ಶಾಲೆಗೆ ಅಘೋಷಿತ ಬೀಗಮುದ್ರೆ: ಸರ್ಕಾರಿ ಶಾಲೆಯಾಗಿದ್ದರೂ ಇಲ್ಲಿ ಒಬ್ಬ ಶಿಕ್ಷಕರನ್ನು ನೇಮಕ ಮಾಡಲಾಗಿಲ್ಲ. ಇರುವ ಅತಿಥಿ ಶಿಕ್ಷಕಿಯೇ ಇಲ್ಲಿಯವರೆಗೂ ಎಲ್ಲವನ್ನೂ ನಿಭಾಯಿಸಿಕೊಂಡು ಬಂದಿದ್ದರು. ಕಳೆದ 7-8 ತಿಂಗಳ ಹಿಂದೆ ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಅಂದಿನಿಂದ ಶಾಲೆಗೆ ಬೀಗ ಹಾಕಲಾಗಿದೆ. ಮಕ್ಕಳ ಅಧ್ಯಯನ, ಪರೀಕ್ಷೆ, ಪಾಠಗಳು ಎಲ್ಲವಕ್ಕೂ ಅಘೋಷಿತ ಬೀಗ ಬಿದ್ದಿದೆ. ಪೋಷಕರು ಮತ್ತು ಸ್ಥಳೀಯರು ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಪ್ರಗತಿ ಕಂಡಿಲ್ಲ ಎಂಬುದು ಅಚ್ಚರಿಯ ಸಂಗತಿ.

ಚಾಂದಬಿಲಾ ಕಿರಿಯ ಪ್ರೌಢಶಾಲೆಯಲ್ಲಿ ಐದನೇ ತರಗತಿಯಿಂದ ಎಂಟನೇ ತರಗತಿವರೆಗೆ ಒಟ್ಟು 32 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸುಮಾರು ಏಳೆಂಟು ತಿಂಗಳಿಂದ ಶಾಲೆ ಮುಚ್ಚಿದೆ. ಪಾಠ, ಅಧ್ಯಯನದ ಜೊತೆಗೆ ಪರೀಕ್ಷೆಗಳನ್ನೂ ನಡೆಸಲಾಗಿಲ್ಲ. ಕೂಡಲೇ ಶಿಕ್ಷಕರನ್ನು ನೇಮಿಸಬೇಕು ಎಂದು ಪೋಷಕರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.

ಪರಿಹಾರ ಒದಗಿಸಲು ಆಗ್ರಹ: ಈ ಕುರಿತು ಮೇಲಧಿಕಾರಿಗಳಿಗೆ ತಿಳಿಸಿದರೂ ಪರಿಹಾರ ಸಿಕ್ಕಿಲ್ಲ. ಶಾಲೆ ಮುಚ್ಚಿದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗಿದೆ. ಖಾಸಗಿಯಾಗಿ ಟ್ಯೂಷನ್ ಕೊಡಿಸಲಾಗುತ್ತಿದೆ. ಅದೂ ಕೂಡ ಮುಗಿದಿದ್ದು, ಈಗ ಮನೆಯಲ್ಲಿಯೇ ಮಕ್ಕಳು ಓದಿಕೊಳ್ಳುತ್ತಿದ್ದಾರೆ. ಆದರೆ, ಅವರ ಶಿಕ್ಷಣದ ಪ್ರಗತಿಯ ಮಾಪಕವಾದ ಪರೀಕ್ಷೆಗಳು ನಡೆಸಲಾಗಿಲ್ಲ. ಕೆಲವರು ದೂರದ ಶಾಲೆಗಳಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರೆ, ಹಲವು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಆದಷ್ಟು ಬೇಗನೇ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದಾರೆ.

ಈ ಕುರಿತು ಜಿಲ್ಲಾ ಶಾಲಾ ನಿರೀಕ್ಷಕರು ಪ್ರತಿಕ್ರಿಯಿಸಿ, ಬಂಕುರಾ ಜಿಲ್ಲೆಯ ಚಾಂದಬಿಲಾ ಕಿರಿಯ ಪ್ರೌಢಶಾಲೆಯಲ್ಲಾದ ಶಿಕ್ಷಣ ಅವ್ಯವಸ್ಥೆ ಮತ್ತು ಶಿಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಲಾಗುವುದು. ಶೀಘ್ರದಲ್ಲೇ ಶಾಲೆ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿಯ ಹಾಸ್ಟೆಲ್‌ನಲ್ಲಿ ಹುಳು ಮಿಶ್ರಿತ ಆಹಾರ ವಿತರಣೆ ಆರೋಪ: ವಿಸಿ ನಿವಾಸದ ಬಳಿ ವಿದ್ಯಾರ್ಥಿಗಳ ಗಲಾಟೆ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.