ETV Bharat / bharat

ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತ ಸಾವು, ಇಬ್ಬರಿಗೆ ಗಾಯ - ದಿಂಡಿಗಲ್​ ಸರ್ಕಾರಿ ಆಸ್ಪತ್ರೆ

ಶಬರಿಮಲೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರಿದ್ದ ವಾಹನ ಅಪಘಾತ - ಕರ್ನಾಟಕದ ಭಕ್ತನ ಸಾವು - ಇಬ್ಬರಿಗೆ ಗಾಯ

ಶಬರಿಮಲೆಗೆ ತೆರಳುತ್ತಿದ್ದ ಕರ್ನಾಟಕದ ಅಯ್ಯಪ್ಪ ಭಕ್ತ ಸಾವು, ಇಬ್ಬರಿಗೆ ಗಾಯ
ayyappa-devotee-from-karnataka-who-was-on-his-way-to-sabarimala-died-two-injured
author img

By

Published : Jan 3, 2023, 1:21 PM IST

ದಿಂಡಿಗಲ್( ತಮಿಳುನಾಡು)​: ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರನ್ನು ಹೊತ್ತು ಸಾಗುತ್ತಿದ್ದ ಮಿನಿ ವ್ಯಾನ್​ವೊಂದು ಅಪಘಾತಕ್ಕೆ ಒಳಗಾಗಿದ್ದು, ಒಬ್ಬ ಅಯ್ಯಪ್ಪ ಭಕ್ತ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ತಮಿಳು ನಾಡಿನ ವೆದಸಂಡೂರ್​ನ ದಿಂಡಿಗಲ್​ ಜಿಲ್ಲೆಯಲ್ಲಿ ನಡೆದಿದೆ. ಕರ್ನಾಟಕದ ಸುಮಾರು 20 ಮಂದಿ ಭಕ್ತರು ಶಬರಿಮಲೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗಾಯಗೊಂಡಿರುವ ಇಬ್ಬರನ್ನು ದಿಂಡಿಗಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ಕುರಿತು ಮಾತನಾಡಿರುವ ಜಿಲ್ಲೆಯ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ, ಕರ್ನಾಟಕ ಮೂಲದ 20 ಭಕ್ತರಿದ್ದ ಮಿನಿ ವ್ಯಾನ್​ ಅಪಘಾತಕ್ಕೆ ಒಳಗಾಗಿದೆ ಎಂಬುದನ್ನು ಖಚಿತಪಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ದಿಂಡಿಗಲ್( ತಮಿಳುನಾಡು)​: ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಅಯ್ಯಪ್ಪ ಭಕ್ತರನ್ನು ಹೊತ್ತು ಸಾಗುತ್ತಿದ್ದ ಮಿನಿ ವ್ಯಾನ್​ವೊಂದು ಅಪಘಾತಕ್ಕೆ ಒಳಗಾಗಿದ್ದು, ಒಬ್ಬ ಅಯ್ಯಪ್ಪ ಭಕ್ತ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಮಂಗಳವಾರ ತಮಿಳು ನಾಡಿನ ವೆದಸಂಡೂರ್​ನ ದಿಂಡಿಗಲ್​ ಜಿಲ್ಲೆಯಲ್ಲಿ ನಡೆದಿದೆ. ಕರ್ನಾಟಕದ ಸುಮಾರು 20 ಮಂದಿ ಭಕ್ತರು ಶಬರಿಮಲೆಗೆ ಪ್ರಯಾಣ ಬೆಳೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಗಾಯಗೊಂಡಿರುವ ಇಬ್ಬರನ್ನು ದಿಂಡಿಗಲ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆ ಕುರಿತು ಮಾತನಾಡಿರುವ ಜಿಲ್ಲೆಯ ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ, ಕರ್ನಾಟಕ ಮೂಲದ 20 ಭಕ್ತರಿದ್ದ ಮಿನಿ ವ್ಯಾನ್​ ಅಪಘಾತಕ್ಕೆ ಒಳಗಾಗಿದೆ ಎಂಬುದನ್ನು ಖಚಿತಪಡಿಸಿದ್ದು, ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ: ಜಾರ್ಖಂಡ್‌: ಮೂವರ ಬಲಿ ಪಡೆದ ಚಿರತೆ ಹತ್ಯೆಗೆ ಅರಣ್ಯ ಇಲಾಖೆ ಚಿಂತನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.