ETV Bharat / bharat

ಅಟಾರ್ನಿ ಜನರಲ್ K K ವೇಣುಗೋಪಾಲ್​ ಅಧಿಕಾರದ ಅವಧಿ ವಿಸ್ತರಿಸಿ ಕೇಂದ್ರದ ಆದೇಶ

author img

By

Published : Jun 28, 2021, 3:28 PM IST

ಭಾರತದ ಅಟಾರ್ನಿ ಜನರಲ್​​ರನ್ನ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸುಪ್ರೀಂಕೋರ್ಟ್​ ನ್ಯಾಯಾಧೀಶರಾಗಿ ನೇಮಕವಾಗಲು ಇರಬೇಕಾದ ಅರ್ಹತೆಗಳೇ ಈ ಹುದ್ದೆಗೂ ಅನ್ವಯ ಆಗುತ್ತವೆ. ಇನ್ನು, ಕೆ ಕೆ ವೇಣುಗೋಪಾಲ್​ ಅವರು ಮೂಲತಃ ಕೇರಳದ ಕಾಸರಗೋಡಿನವರು. ಖ್ಯಾತ ಸಾಂವಿಧಾನಿಕ ತಜ್ಞರಾಗಿದ್ದು, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ..

Attorney General K K Venugopal
ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್

ನವದೆಹಲಿ : ದೇಶದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ​ ಕೆ ಕೆ ವೇಣುಗೋಪಾಲ್​ ಅವರ ಅಧಿಕಾರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವೇಣುಗೋಪಾಲ್​ ಅಧಿಕಾರ ಅವಧಿ ಎರಡನೇ ಬಾರಿಗೆ ವಿಸ್ತರಣೆಯಾಗಿದೆ. ಅವರು 2022ರ ಜೂನ್​ 30ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಮುಕುಲ್​ ರೋಹ್ಟಗಿ ಬಳಿಕ ಅಟಾರ್ನಿ ಜನರಲ್​ ಹುದ್ದೆಗೆ ನೇಮಕಗೊಂಡಿದ್ದ ಇವರು ರಾಫೇಲ್​ ಜೆಟ್​​ನಂತಹ ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಪರ ವಾದಿಸಿ ಗೆದ್ದಿದ್ದಾರೆ. ಇನ್ನು, 2017ರಲ್ಲಿ ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಕವಾಗಿದ್ದರು.

ಇದನ್ನು ಓದಿ: ಕೆಂಪುಕೋಟೆ ಗಲಭೆ ಪ್ರಕರಣ: ಪ್ರಮುಖ ಆರೋಪಿ ಗುರ್ಜೋತ್ ಸಿಂಗ್ ಬಂಧನ

ಭಾರತದ ಅಟಾರ್ನಿ ಜನರಲ್​​ರನ್ನ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸುಪ್ರೀಂಕೋರ್ಟ್​ ನ್ಯಾಯಾಧೀಶರಾಗಿ ನೇಮಕವಾಗಲು ಇರಬೇಕಾದ ಅರ್ಹತೆಗಳೇ ಈ ಹುದ್ದೆಗೂ ಅನ್ವಯ ಆಗುತ್ತವೆ. ಇನ್ನು, ಕೆ ಕೆ ವೇಣುಗೋಪಾಲ್​ ಅವರು ಮೂಲತಃ ಕೇರಳದ ಕಾಸರಗೋಡಿನವರು. ಖ್ಯಾತ ಸಾಂವಿಧಾನಿಕ ತಜ್ಞರಾಗಿದ್ದು, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ನವದೆಹಲಿ : ದೇಶದ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದ​ ಕೆ ಕೆ ವೇಣುಗೋಪಾಲ್​ ಅವರ ಅಧಿಕಾರ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ವೇಣುಗೋಪಾಲ್​ ಅಧಿಕಾರ ಅವಧಿ ಎರಡನೇ ಬಾರಿಗೆ ವಿಸ್ತರಣೆಯಾಗಿದೆ. ಅವರು 2022ರ ಜೂನ್​ 30ರವರೆಗೆ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.

ಮುಕುಲ್​ ರೋಹ್ಟಗಿ ಬಳಿಕ ಅಟಾರ್ನಿ ಜನರಲ್​ ಹುದ್ದೆಗೆ ನೇಮಕಗೊಂಡಿದ್ದ ಇವರು ರಾಫೇಲ್​ ಜೆಟ್​​ನಂತಹ ಮಹತ್ವದ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರದ ಪರ ವಾದಿಸಿ ಗೆದ್ದಿದ್ದಾರೆ. ಇನ್ನು, 2017ರಲ್ಲಿ ಮೂರು ವರ್ಷಗಳ ಅವಧಿಗೆ ಅಟಾರ್ನಿ ಜನರಲ್ ಆಗಿ ನೇಮಕವಾಗಿದ್ದರು.

ಇದನ್ನು ಓದಿ: ಕೆಂಪುಕೋಟೆ ಗಲಭೆ ಪ್ರಕರಣ: ಪ್ರಮುಖ ಆರೋಪಿ ಗುರ್ಜೋತ್ ಸಿಂಗ್ ಬಂಧನ

ಭಾರತದ ಅಟಾರ್ನಿ ಜನರಲ್​​ರನ್ನ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಸುಪ್ರೀಂಕೋರ್ಟ್​ ನ್ಯಾಯಾಧೀಶರಾಗಿ ನೇಮಕವಾಗಲು ಇರಬೇಕಾದ ಅರ್ಹತೆಗಳೇ ಈ ಹುದ್ದೆಗೂ ಅನ್ವಯ ಆಗುತ್ತವೆ. ಇನ್ನು, ಕೆ ಕೆ ವೇಣುಗೋಪಾಲ್​ ಅವರು ಮೂಲತಃ ಕೇರಳದ ಕಾಸರಗೋಡಿನವರು. ಖ್ಯಾತ ಸಾಂವಿಧಾನಿಕ ತಜ್ಞರಾಗಿದ್ದು, ಪದ್ಮ ವಿಭೂಷಣ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.