ETV Bharat / bharat

ಕಳೆದ 15-20 ವರ್ಷದಲ್ಲಿ ಇಂತಹ ಪ್ರದರ್ಶನ ನೋಡಿಲ್ಲ.. 'ಈಟಿವಿ ಭಾರತ' ಜೊತೆ ಧ್ಯಾನಚಂದ್​ ಮಗನ ಮನದಾಳ!

author img

By

Published : Aug 5, 2021, 7:34 PM IST

Updated : Aug 5, 2021, 8:29 PM IST

ಭಾರತದ ಪುರುಷರ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಅವರಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

ashok kumar
ashok kumar

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜರ್ಮನಿ ವಿರುದ್ಧದ ಪಂದ್ಯದಲ್ಲಿ 5-4 ಅಂತರದ ಗೋಲು ಗಳಿಕೆ ಮಾಡುವ ಮೂಲಕ 41 ವರ್ಷಗಳ ನಂತರ ಪದಕ ಗೆದ್ದಿರುವ ಸಾಧನೆ ಮಾಡಿದ್ದು, ಇದಕ್ಕೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಭಾರತದ ಹಾಕಿ ಮಾಂತ್ರಿಕ ಮೇಜರ್​ ಧ್ಯಾನಚಂದ್​​ ಅವರ ಮಗ ಅಶೋಕ್​ ಕುಮಾರ್ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.

'ಈಟಿವಿ ಭಾರತ' ಜೊತೆ ಧ್ಯಾನಚಂದ್​ ಮಗನ ಮನದಾಳ

ಹಾಕಿ ತಂಡದ ಗೆಲುವು ಇಡೀ ಭಾರತದ ಜಯವಾಗಿದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಅಥ್ಲೀಟ್ಸ್​ಗಳು ಭಾಗಿಯಾಗುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆ ತುಂಬಿದ್ದರು. ಅದರ ಫಲವಾಗಿ ಇಂದು ಅನೇಕರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ 15-20 ವರ್ಷಗಳಲ್ಲಿ ನಾನು ಇಂತಹ ಪ್ರದರ್ಶನ ನೋಡಿಲ್ಲ. ಬರುವ ದಿನಗಳಲ್ಲಿ ಭಾರತ ಮತ್ತಷ್ಟು ಬಲಿಷ್ಠಗೊಂಡರೆ ಚಿನ್ನದ ಪದಕ ಗೆಲ್ಲುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ದಹಿಯಾಗೆ 4 ಕೋಟಿ ರೂ., ಸರ್ಕಾರಿ ಕೆಲಸ, ಪ್ಲಾಟ್​​ ಜೊತೆ ಗ್ರಾಮದಲ್ಲೇ ಒಳಾಂಗಣ ಕ್ರೀಡಾಂಗಣ!

ಭಾರತ ಹಾಕಿ ತಂಡದ ಪ್ರದರ್ಶನದಿಂದ ನಾವೆಲ್ಲರೂ ಸಂತೋಷಗೊಂಡಿದ್ದು, ಸಾವಿರಾರು ಯುವಕರಿಗೆ ಈ ಆಟ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿದ್ದ ಭಾರತ ಸೆಮಿಫೈನಲ್​​ನಲ್ಲಿ ಸೋಲು ಕಂಡಿತ್ತು. ಆದರೆ, ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ.

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜರ್ಮನಿ ವಿರುದ್ಧದ ಪಂದ್ಯದಲ್ಲಿ 5-4 ಅಂತರದ ಗೋಲು ಗಳಿಕೆ ಮಾಡುವ ಮೂಲಕ 41 ವರ್ಷಗಳ ನಂತರ ಪದಕ ಗೆದ್ದಿರುವ ಸಾಧನೆ ಮಾಡಿದ್ದು, ಇದಕ್ಕೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಭಾರತದ ಹಾಕಿ ಮಾಂತ್ರಿಕ ಮೇಜರ್​ ಧ್ಯಾನಚಂದ್​​ ಅವರ ಮಗ ಅಶೋಕ್​ ಕುಮಾರ್ ಈಟಿವಿ ಭಾರತ ಜೊತೆ ಮಾತನಾಡಿದ್ದಾರೆ.

'ಈಟಿವಿ ಭಾರತ' ಜೊತೆ ಧ್ಯಾನಚಂದ್​ ಮಗನ ಮನದಾಳ

ಹಾಕಿ ತಂಡದ ಗೆಲುವು ಇಡೀ ಭಾರತದ ಜಯವಾಗಿದೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಅಥ್ಲೀಟ್ಸ್​ಗಳು ಭಾಗಿಯಾಗುವುದಕ್ಕೂ ಮುಂಚಿತವಾಗಿ ಪ್ರಧಾನಿ ನರೇಂದ್ರ ಮೋದಿ ಪ್ರೇರಣೆ ತುಂಬಿದ್ದರು. ಅದರ ಫಲವಾಗಿ ಇಂದು ಅನೇಕರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ 15-20 ವರ್ಷಗಳಲ್ಲಿ ನಾನು ಇಂತಹ ಪ್ರದರ್ಶನ ನೋಡಿಲ್ಲ. ಬರುವ ದಿನಗಳಲ್ಲಿ ಭಾರತ ಮತ್ತಷ್ಟು ಬಲಿಷ್ಠಗೊಂಡರೆ ಚಿನ್ನದ ಪದಕ ಗೆಲ್ಲುವ ದಿನಗಳು ದೂರವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ: ದಹಿಯಾಗೆ 4 ಕೋಟಿ ರೂ., ಸರ್ಕಾರಿ ಕೆಲಸ, ಪ್ಲಾಟ್​​ ಜೊತೆ ಗ್ರಾಮದಲ್ಲೇ ಒಳಾಂಗಣ ಕ್ರೀಡಾಂಗಣ!

ಭಾರತ ಹಾಕಿ ತಂಡದ ಪ್ರದರ್ಶನದಿಂದ ನಾವೆಲ್ಲರೂ ಸಂತೋಷಗೊಂಡಿದ್ದು, ಸಾವಿರಾರು ಯುವಕರಿಗೆ ಈ ಆಟ ಪ್ರೇರಣೆಯಾಗಲಿದೆ ಎಂದು ತಿಳಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾಗಿಯಾಗಿದ್ದ ಭಾರತ ಸೆಮಿಫೈನಲ್​​ನಲ್ಲಿ ಸೋಲು ಕಂಡಿತ್ತು. ಆದರೆ, ಇಂದು ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ.

Last Updated : Aug 5, 2021, 8:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.