ETV Bharat / bharat

ಇಬ್ಬರು ಬೈಕ್​ ಕಳ್ಳರಿಂದ 23 ಲಕ್ಷ ಮೌಲ್ಯದ 107 ಬೈಕ್​ ಜಪ್ತಿ!

author img

By

Published : Jun 27, 2022, 10:49 PM IST

ಆಂಧ್ರಪ್ರದೇಶದಲ್ಲಿ ಕಳ್ಳರಿಬ್ಬರು 107 ಬೈಕ್​ಗಳನ್ನು ಕದ್ದಿದ್ದಾರೆ. ಇಬ್ಬರನ್ನು ಬಂಧಿಸಿರುವ ಕಾಕಿನಾಡ ಪೊಲೀಸರು ಆರೋಪಿಗಳಿಂದ ವಾಹನ​ಗಳನ್ನು ಜಪ್ತಿ ಮಾಡಿದ್ದಾರೆ.

ಇಬ್ಬರು ಬೈಕ್​ ಕಳ್ಳರಿಂದ 23 ಲಕ್ಷ ಮೌಲ್ಯದ 107 ಬೈಕ್​ ಜಪ್ತಿ
ಇಬ್ಬರು ಬೈಕ್​ ಕಳ್ಳರಿಂದ 23 ಲಕ್ಷ ಮೌಲ್ಯದ 107 ಬೈಕ್​ ಜಪ್ತಿ

ಕಾಕಿನಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಕಳ್ಳರಿಬ್ಬರ ಕರಾಮತ್ತು ಕಂಡ್ರೆ ಬೆಚ್ಚಿ ಬೀಳಬೇಕು. ಇಬ್ಬರು ಸೇರಿ 23 ಲಕ್ಷ ಮೌಲ್ಯದ 107 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾರೆ. ಇದೀಗ ಇಬ್ಬರನ್ನು ಬಂಧಿಸಲಾಗಿದ್ದು 107 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡಿಗಟ್ಲ ಕೃಷ್ಣ, ವೆಂಕಟ ಸತ್ಯನಾರಾಯಣ ಬಂಧಿತರು. ಪ್ರಮುಖ ಆರೋಪಿಯಾದ ನಡಿಗಟ್ಲ ಕೃಷ್ಣ ಎಂಬಾತ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷದಿಂದ ಈತ ಬೈಕ್ ಕಳ್ಳತನ ಮಾಡುತ್ತಿದ್ದನಂತೆ.

ಸಾರ್ವಜನಿಕ ಸ್ಥಳಗಳು, ಮನೆಗಳ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಟಾರ್ಗೆಟ್​ ಮಾಡುತ್ತಿದ್ದ ಖದೀಮರು, ನಕಲಿ ಕೀ ಬಳಸಿ ಅಥವಾ ​ಹ್ಯಾಂಡಲ್​ ಮುರಿದು ಬೈಕ್​ಗಳನ್ನು ಎಗರಿಸುತ್ತಿದ್ದರು. ಬಳಿಕ ಅವುಗಳನ್ನು ಕಡಿಮೆ ದರ ಅಂದರೆ 5 ರಿಂದ 15 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ಪ್ರಮುಖ ಆರೋಪಿಗೆ ವೆಂಕಟ ಸತ್ಯನಾರಾಯಣ ಸಹಾಯ ಮಾಡುತ್ತಿದ್ದ. ಕಡಿಮೆ ಬೆಲೆಯಲ್ಲಿ ಬೈಕ್​ ಖರೀದಿ ಮಾಡಿದವರು ದಾಖಲೆಗಳನ್ನು ಕೇಳಿದಾಗ ಕುದುರಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಮುಂಗಡವಾಗಿ ಪಡೆದು ಉಳಿದ ಹಣವನ್ನು ದಾಖಲೆ ನೀಡಿದಾಗ ಪಡೆಯುವುದಾಗಿ ಹೇಳಿ ನಾಪತ್ತೆಯಾಗುತ್ತಿದ್ದರು.

7 ಜಿಲ್ಲೆಗಳಲ್ಲಿ 107 ಬೈಕ್​ ಕಳವು: ಈ ಖದೀಮರಿಬ್ಬರು ಸೇರಿ 7 ಜಿಲ್ಲೆಗಳಲ್ಲಿ ಬೈಕ್​ ಕಳ್ಳತನ ಮಾಡಿದ್ದಾರೆ. ಕಾಕಿನಾಡ ಜಿಲ್ಲೆಯಲ್ಲಿ 17, ಪೂರ್ವ ಗೋದಾವರಿಯಲ್ಲಿ 32, ವಿಜಯನಗರಂನಲ್ಲಿ 2, ವಿಶಾಖಪಟ್ಟಣದಲ್ಲಿ 2, ಕೋನಾಸೀಮದಲ್ಲಿ 12, ಅಲ್ಲೂರು ಸೀತಾರಾಮರಾಜು ಜಿಲ್ಲೆಯಲ್ಲಿ 1, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 41 ಬೈಕ್​ಗಳನ್ನು ಕದ್ದ ಬಗ್ಗೆ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ: 231 ಚುನಾವಣೆಗಳಲ್ಲಿ ಸೋತು ರಾಷ್ಟ್ರಪತಿ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ ಉತ್ಸಾಹಿ!

ಕಾಕಿನಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಕಳ್ಳರಿಬ್ಬರ ಕರಾಮತ್ತು ಕಂಡ್ರೆ ಬೆಚ್ಚಿ ಬೀಳಬೇಕು. ಇಬ್ಬರು ಸೇರಿ 23 ಲಕ್ಷ ಮೌಲ್ಯದ 107 ದ್ವಿಚಕ್ರ ವಾಹನಗಳನ್ನು ಕದ್ದಿದ್ದಾರೆ. ಇದೀಗ ಇಬ್ಬರನ್ನು ಬಂಧಿಸಲಾಗಿದ್ದು 107 ಬೈಕ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡಿಗಟ್ಲ ಕೃಷ್ಣ, ವೆಂಕಟ ಸತ್ಯನಾರಾಯಣ ಬಂಧಿತರು. ಪ್ರಮುಖ ಆರೋಪಿಯಾದ ನಡಿಗಟ್ಲ ಕೃಷ್ಣ ಎಂಬಾತ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ. ಕಳೆದ ವರ್ಷದಿಂದ ಈತ ಬೈಕ್ ಕಳ್ಳತನ ಮಾಡುತ್ತಿದ್ದನಂತೆ.

ಸಾರ್ವಜನಿಕ ಸ್ಥಳಗಳು, ಮನೆಗಳ ಮುಂದೆ ನಿಲ್ಲಿಸಿದ ಬೈಕ್​ಗಳನ್ನು ಟಾರ್ಗೆಟ್​ ಮಾಡುತ್ತಿದ್ದ ಖದೀಮರು, ನಕಲಿ ಕೀ ಬಳಸಿ ಅಥವಾ ​ಹ್ಯಾಂಡಲ್​ ಮುರಿದು ಬೈಕ್​ಗಳನ್ನು ಎಗರಿಸುತ್ತಿದ್ದರು. ಬಳಿಕ ಅವುಗಳನ್ನು ಕಡಿಮೆ ದರ ಅಂದರೆ 5 ರಿಂದ 15 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದರು. ಪ್ರಮುಖ ಆರೋಪಿಗೆ ವೆಂಕಟ ಸತ್ಯನಾರಾಯಣ ಸಹಾಯ ಮಾಡುತ್ತಿದ್ದ. ಕಡಿಮೆ ಬೆಲೆಯಲ್ಲಿ ಬೈಕ್​ ಖರೀದಿ ಮಾಡಿದವರು ದಾಖಲೆಗಳನ್ನು ಕೇಳಿದಾಗ ಕುದುರಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಮುಂಗಡವಾಗಿ ಪಡೆದು ಉಳಿದ ಹಣವನ್ನು ದಾಖಲೆ ನೀಡಿದಾಗ ಪಡೆಯುವುದಾಗಿ ಹೇಳಿ ನಾಪತ್ತೆಯಾಗುತ್ತಿದ್ದರು.

7 ಜಿಲ್ಲೆಗಳಲ್ಲಿ 107 ಬೈಕ್​ ಕಳವು: ಈ ಖದೀಮರಿಬ್ಬರು ಸೇರಿ 7 ಜಿಲ್ಲೆಗಳಲ್ಲಿ ಬೈಕ್​ ಕಳ್ಳತನ ಮಾಡಿದ್ದಾರೆ. ಕಾಕಿನಾಡ ಜಿಲ್ಲೆಯಲ್ಲಿ 17, ಪೂರ್ವ ಗೋದಾವರಿಯಲ್ಲಿ 32, ವಿಜಯನಗರಂನಲ್ಲಿ 2, ವಿಶಾಖಪಟ್ಟಣದಲ್ಲಿ 2, ಕೋನಾಸೀಮದಲ್ಲಿ 12, ಅಲ್ಲೂರು ಸೀತಾರಾಮರಾಜು ಜಿಲ್ಲೆಯಲ್ಲಿ 1, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 41 ಬೈಕ್​ಗಳನ್ನು ಕದ್ದ ಬಗ್ಗೆ ಪ್ರಕರಣ ದಾಖಲಾಗಿವೆ.

ಇದನ್ನೂ ಓದಿ: 231 ಚುನಾವಣೆಗಳಲ್ಲಿ ಸೋತು ರಾಷ್ಟ್ರಪತಿ ಸ್ಥಾನಕ್ಕೂ ನಾಮಪತ್ರ ಸಲ್ಲಿಸಿದ ಉತ್ಸಾಹಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.